Saturday, September 21, 2024

Latest Posts

ಶಾಸಕ ಗಣೇಶ್ ಪ್ರಸಾದ್ ವಿರುದ್ಧ ಚಿಕ್ಕಪ್ಪನ ಕ್ರಷರ್ ಹೋಗಲು ಅಕ್ರಮವಾಗಿ ರಸ್ತೆ ನಿರ್ಮಾಣದ ಆರೋಪ

- Advertisement -

Political News: Chamarajanagara: ಗುಂಡ್ಲುಪೇಟೆ ಕೈ ಶಾಸಕ ಗಣೇಶ್ ಪ್ರಸಾದ್ ವಿರುದ್ಧ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ದೊಡ್ಡಹುಂಡಿ ಗ್ರಾಮದ ರೈತರು ಆಕ್ರೋಶ ಹೊರಹಾಕಿದ್ದಾರೆ.

ಯಾಕಂದ್ರೆ ತಮ್ಮ ಚಿಕ್ಕಪ್ಪನ ಕ್ರಷರ್ ಹೋಗಲು, ಈ ರೈತರ ಜಮೀನಿನ ಬೆಳೆನಾಶ ಮಾಡಿ, ರಸ್ತೆ ನಿರ್ಮಾಣ ಮಾಡಿಸುತ್ತಿದ್ದಾರೆ ಎಂದು ಗಣೇಶ್ ಪ್ರಸಾದ್ ವಿರುದ್ಧ ಆರೋಪ ಕೇಳಿಬಂದಿದೆ. ನಾವು ದಾರಿ ಮಾಡಿಕೊಡಿ ಎಂದು ಕೇಳಲಿಲ್ಲ. ಆದರೆ ಶಾಸಕರು ನಂಜುಂಡ ಪ್ರಸಾದ್ ಎಂಬ ಹೆಸರಿನ ಅವರ ಚಿಕ್ಕಪ್ಪನ ಕ್ರಷರ್ ಹೋಗಲು, ಜಮೀನು ನಾಶ ಮಾಡಿ, ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ನಮ್ಮ ಮೇಲೆ ದಬ್ಬಾಳಿಕೆ ತೋರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅಲ್ಲದೇ, ರಸ್ತೆ ನಿರ್ಮಾಣವಾದರೆ, ನಮ್ಮ ಜಮೀನು ಉಳಿಯುವುದಿಲ್ಲ. ಕ್ರಷರ್ ಬಂದರೆ, ಆ ಧೂಳಿನಿಂದ ನಮ್ಮ ಬೆಳೆ ಎಲ್ಲ ಹಾಳಾಗುತ್ತದೆ. 2018ರಲ್ಲಿ ರಸ್ತೆ ನಿರ್ಮಾಣ ಮಾಡಲು ಹೊರಟಾಗ, ನಾವು ತಡೆದಿದ್ದೆವು. ಆದರೆ ಈಗ ಮತ್ತೆ ರಸ್ತೆ ಮಾಡಲು ಹೊರಟಿದ್ದಾರೆಂದು ಆರೋಪಿಸಿದ್ದಾರೆ.

- Advertisement -

Latest Posts

Don't Miss