Sunday, September 8, 2024

Latest Posts

ಶಾಸಕ ಶ್ರೀನಿವಾಸಗೌಡ ಗೆದ್ರೆ ನಾನು ಅವ್ರ ಮನೆ ವಾಚ್ ಮ್ಯಾನ್ ಆಗ್ತೀನಿ ಎಂದ MLC ಗೋವಿಂದರಾಜು..!

- Advertisement -

ಮುಂದಿನ ಚುನಾವಣೆಯಲ್ಲಿ ಹಾಲಿ ಕೋಲಾರ ಶಾಸಕ ಶ್ರೀನಿವಾಸಗೌಡ ಗೆದ್ದರೆ ನಾನು ಅವರ ಮನೆ ಮುಂದೆ ವಾಚ್ ಮೆನ್ ಆಗಿ ಕೆಲಸ ಮಾಡುತ್ತೇನೆ ಎಂದು ಜೆಡಿಎಸ್ ಎಮ್ ಎಲ್ ಸಿ ಗೋವಿಂದರಾಜ್ ಹೇಳಿಕೆ ನೀಡಿದ್ದಾರೆ.

ಕೋಲಾರದಲ್ಲಿ ಜೆಡಿಎಸ್ ನಾಯಕರ ಪರಿಶ್ರಮದಿಂದ ಕಳೆದ ಬಾರಿ ಶ್ರೀನಿವಾಸಗೌಡ ಶಾಸಕರಾಗಿ ಗೆದ್ದಿದ್ದರು ಅವರು ನಾಲ್ಕು ಬಾರಿ ಶಾಸಕರಾಗಿ ಗೆದ್ದ ವರ್ಚಸ್ಸು ಏನಾದರು ಇದ್ದರೆ ಮುಂದಿನ ಬಾರಿ ಯಾವುದೇ ಪಕ್ಷದಲ್ಲಾಗಲಿ ನಿಂತು ಶಾಸಕರಾಗಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದ್ದಾರೆ .

ಕೋಲಾರದ ಪತ್ರಕರ್ತರ ಭವನದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಎಮ್ ಎಲ್ ಸಿ ಗೋವಿಂದರಾಜು ಜೆಡಿಎಸ್ ನಿಂದ ಗೆದ್ದು ಶಾಸಕರಾಗಿ ಕಾಂಗ್ರೆಸ್ ನ ರಮೇಶ್ ಕುಮಾರ್ ಜೊತೆ ಗುರುತಿಸಿಕೊಂಡಿರುವ ಶ್ರೀನಿವಾಸಗೌಡ ವಿರುದ್ದ ಕಿಡಿಕಾರಿದ್ದಾರೆ , ಕಳೆದ ಚುಣಾವಣೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಪರಿಶ್ರಮದಿಂದ ಅವರು ಶಾಸಕರಾಗಿದ್ದಾರೆ ಹೊರೆತು ಅವರ ಸ್ವಂತ ವರ್ಚಸ್ಸು ಇಲ್ಲ , ಕಳೆದ ಎಮ್ ಎಲ್ ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಮತಹಾಕಿದ ಶ್ರೀನಿವಾಸಗೌಡ ಕೊಲಾರ ಜನತೆಗೆ ದ್ರೋಹ ಬಗೆದಿದ್ದಾರೆ.

ಕಾಂಗ್ರೆಸ್ ನ ರಮೇಶ್ ಕುಮಾರ್ ರವರ ಕುತಂತ್ರ ಬುದ್ದಿಗೆ ಬಲಿಯಾಗಿರುವ ಶ್ರೀನಿವಾಸಗೌಡ ಯಾವುದೇ ಪಕ್ಷದಿಂದ ಚುಣಾವಣೆಗೆ ನಿಂತರೂ ಸೋಲು ಖಚಿತ , ನಾಲ್ಕು ಬಾರಿ ಗೆದ್ದ ಅವರು ಯಾವುದೇ ವರ್ಚಸ್ಸು ಉಳಿಸಿಕೊಂಡಿಲ್ಲ , ರಮೇಶ್ ಕುಮಾರ್ ಅವರ ಶ್ರೀನಿವಾಸಪುರ ಕ್ಷೇತ್ರದಲ್ಲಿ ಮುಂದಿನ ಬಾರಿ ಗೆಲ್ಲಲು ಅಲ್ಪಸಂಖ್ಯಾತರ ಮನವಲಿಸಲು ಶ್ರೀನಿವಾಸಗೌಡರನ್ನು ಬಳಸಿಕೊಂಡಿದ್ದಾರೆ , ಇನ್ನು ಸಿದ್ದರಾಮಯ್ಯ ರವರು ಕೋಲಾರದಿಂದ ಸ್ಪರ್ಧಿಸಿದರೆ ಸೋಲು ಖಚಿತ ಇವರ ಮಾತು ಕೇಳಿ ಕೋಲಾರಕ್ಕೆ ಬಂದರೆ ತಿರುಪತಿ ಮೂರು ನಾಮ ಖಚಿತ ಎಂದು ತಿಳಿಸಿದ್ದಾರೆ.

- Advertisement -

Latest Posts

Don't Miss