ಪ್ರಧಾನಿ ನರೇಂದ್ರ ಮೋದಿ ರಾಜಧಾನಿ ಬೆಂಗಳೂರಿಗೆ ಹೊಸ ರೈಲು ಬಿಟ್ಟಿದ್ದಾರೆ.. ಈ ರೈಲಲ್ಲಿ ಹೋಗಿ ಮೀನಾಕ್ಷಿ ದರ್ಶನ ಮಾಡ್ಕೊಂಡ್ ಬರಬಹುದು.
ಪ್ರಧಾನಿ ಮೋದಿಯವರ ಆಡಳಿತ ಅವಧಿಯಲ್ಲಿ ರೈಲ್ವೆ ಕ್ರಾಂತಿ ಆಗಿದೆ.. ಸಾಕಷ್ಟು ಹೊಸ ಹೊಸ ರೈಲುಗಳನ್ನ ಬಿಟ್ಟಿದ್ದಾರೆ. ಅದರ ಸಾಲಿಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಕೂಡ ಸೇರುತ್ತೆ. 2019ರಲ್ಲಿ ದೇಶದಲ್ಲಿ ಒಂದೇ ಭಾರತ ಎಕ್ಸ್ಪ್ರೆಸ್ ರೈಲುಗಳ ಸಂಚಾರ ಶುರುವಾಯಿತು. ದೇಶದಲ್ಲಿ ಇವರೆಗೂ ಐವತ್ತೊಂದು ಮಾರ್ಗಗಳಲ್ಲಿ ಒಂದೇ ಭಾರತ ಎಕ್ಸ್ಪ್ರೆಸ್ ರೈಲು ಓಡುತ್ತಿದೆ. ಈ ಪೈಕಿ ಕರ್ನಾಟಕದಲ್ಲಿ ಏಳು ಮಾರ್ಗಗಳಲ್ಲಿ ಒಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚರಿಸುತ್ತಿದೆ. ಈಗ ಬೆಂಗಳೂರಿಗೆ ಪ್ರಧಾನಿ ಮೋದಿ ಮತ್ತೊಂದು ರೈಲು ಬಿಟ್ಟಿದ್ದಾರೆ.
ಇದು ಬೆಂಗಳೂರಿನ ಕಂಟೋನ್ಮೆಂಟ್ ಇಂದ ತಮಿಳುನಾಡಿನ ಮಧುರೈ ವರೆಗೆ ಹೊಸ ವಂದೇ ಭಾರತ್ ರೈಲು ಸಂಚರಿಸಲಿದೆ.
ಕರ್ನಾಟಕದಲ್ಲಿ ಸದ್ಯಕ್ಕೆ ಚೆನ್ನೈ-ಮೈಸೂರು, ಬೆಂಗಳೂರು-ಧಾರವಾಡ, ಕಾಚಿಗುಡದಿಂದ-ಯಶವಂತಪುರ, ಮಂಗಳೂರು-ತಿರುವನಂತಪುರ, ಕೊಯಂಬತ್ತೂರು-ಬೆಂಗಳೂರು ಮಾರ್ಗ, ಮಂಗಳೂರು-ಮಡಗಾವ್, ಹಾಗೆ ಬೆಂಗಳೂರಿನಿಂದ ಕಲಬುರ್ಗಿ ಗೆ ವಂದೇ ಭಾರತ್ ರೈಲು ಓಡುತ್ತಿದೆ.
ಈಗ ವಾರದಲ್ಲಿ ಆರು ದಿನ ಬೆಂಗಳೂರಿನಿಂದ ಮಧುರೈ ರೈಲು ಸಂಚಾರ ಇರುತ್ತೆ. ಮದುರೈನಲ್ಲಿ ಬೆಳಗ್ಗೆ 5.15ಕ್ಕೆ ಪ್ರಯಾಣ ಬೆಳೆಸಿದರೆ ಮಧ್ಯಾಹ್ನ 1 ಗಂಟೆಗೆ ಬೆಂಗಳೂರು ಕಂಟ್ರೋಲ್ಮೆಂಟ್ ನಿಲ್ದಾಣಕ್ಕೆ ಬಂದು ತಲುಪಲಿದೆ. ಬಳಿಕ 1.30ಕ್ಕೆ ಬೆಂಗಳೂರಿನಿಂದ ಹೊರಟ ರೈಲು ರಾತ್ರಿ 9:15ಕ್ಕೆ ಮಧುರೈ ತಲುಪಲಿದೆ. 725 ಕಿಲೋಮೀಟರ್ ದೂರದ ಈ ಅಂತರವನ್ನು 8ಗಂಟೆಗಳಲ್ಲಿ ತಲುಪಬಹುದಾಗಿದೆ. ಈ ಒಂದೇ ಭಾರತ ರೈಲಿನ ಮ್ಯಾಕ್ಸಿಮಮ್ ಸ್ಪೀಡ್ ಗಂಟೆಗೆ 110 ಕಿಲೋಮೀಟರ್ ಇರುತ್ತೆ. ಇದರ ಟಿಕೆಟ್ ದರ, ಚೇರ್ ಕಾರ್ ನಲ್ಲಿ 1200 ರೂ. ಇರಲಿದೆ. ಎಕ್ಸಿಕ್ಯೂಟಿವ್ ಸೀಟ್ ಟಿಕೆಟ್ ದರ 2 ಸಾವಿರ ಇರಲಿದೆ… ಮಧುರೈ ಮೀನಾಕ್ಷಿ ದೇವಿಯ ದರ್ಶನ ಪಡೆಯಬೇಕೆಂಬ ಬಯಸುವ ಭಕ್ತರಿಗೆ ಈ ವಂದೇ ಭಾರತ್ ರೈಲು ಉಪಯೋಗವಾಗಲಿದೆ..