Tuesday, September 17, 2024

Latest Posts

Movie News: ಕಾಮಾಕ್ಯ ದೇವಿಯ ದರ್ಶನ ಪಡೆದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ

- Advertisement -

Movie News: ನಟ ದರ್ಶನ್, ಪವಿತ್ರಾ ಗೌಡಳ ಪರ ಬ್ಯಾಟ್ ಬೀಸಲು ಹೋಗಿ, ಜೈಲು ಸೇರಿದ್ದಾರೆ. ಪವಿತ್ರಾಗೆ ರೇಣುಕಾಸ್ವಾಮಿ ಕೆಟ್ಟ ಕೆಟ್ಟದಾಗಿ ಮೆಸೇಜ್ ಮಾಡ್ತಾನೆ ಅಂತಾ, ಅವನನ್ನು ಕೊಂದ ಕಾರಣ, ದರ್ಶನ್ ಮತ್ತು ಅವನ ಬೆಂಬಲಿಗರು ಸದ್ಯ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಜೈಲು ವಾಸ ಅನುಭವಿಸುತ್ತಿದ್ದಾರೆ. ಮೊದಲು ಎಲ್ಲರನ್ನೂ ಪರಪ್ಪನ ಅಗ್ರಹಾರ ಜೈಲಿಗೆ ಹಾಕಲಾಗಿದ್ದು, ಅತ್ಯುತ್ತಮ ಸೌಲಭ್ಯ ಕೊಟ್ಟಿದ್ದು ವೈರಲ್ ಆದಾಗ, ದರ್ಶನ್‌ರನ್ನು ಬಳ್ಳಾರಿ ಜೈಲಿಗೆ, ಉಳಿದವರನ್ನು ಧಾರವಾಡ, ಬೆಳಗಾವಿ ಜೈಲಿಗೆ ಹಾಕಲಾಗಿದೆ.

ತನ್ನ ಪತಿಯನ್ನು ಹೇಗಾದರೂ ಮಾಡಿ ಜೈಲಿನಿಂದ ಹೊರತರಬೇಕು ಎಂದು ಪತ್ನಿ ವಿಜಯಲಕ್ಷ್ಮೀ ಸತತ ಪ್ರಯತ್ನ ಮಾಡುತ್ತಿದ್ದಾರೆ. ಪದೇ ಪದೇ ಬಳ್ಳಾರಿ ಜೈಲಿಗೆ ಭೇಟಿ ನೀಡುವುದು. ಬೇರೆ ಬೇರೆ ದೇವಸ್ಥಾನಕ್ಕೆ ಹೋಗಿ, ದರ್ಶನ್‌ಗೆ ಒಳ್ಳೆಯದಾಗಲಿ ಎಂದು ಹರಕೆ ಹೊರುವುದು, ಪೂಜೆ ಮಾಡಿಸುವುದೆಲ್ಲ ಮಾಡುತ್ತಿದ್ದಾರೆ. ಇದೇ ರೀತಿ ಅಸ್ಸಾಮ್‌ನ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಿ ದೇವಸ್ಥಾನಕ್ಕೆ ಹೋಗಿ, ವಿಜಯಲಕ್ಷ್ಮೀ ಕಾಮಾಕ್ಯ ದೇವಿಯ ದರ್ಶನ ಮಾಡಿದ್ದಾರೆ.

ಒಂದೆಡೆ ವಿಜಯಲಕ್ಷ್ಮೀ ದೇವಿಯ ದರ್ಶನ ಮಾಡಿದ್ದು ಸುದ್ದಿಯಾದರೆ, ಇನ್ನೊಂದೆಡೆ ಅವರು ಧರಿಸಿರುವ ಬಟ್ಟೆಗೆ ತರಹೇವಾರಿಯಾಾಗಿ ಕಾಮೆಂಟ್ ಬರುತ್ತಿದೆ. ಟ್ರೋಲ್ ಆಗುತ್ತಿದೆ. ಯಾಕಂದ್ರೆ ಬನಾರಸಿ ಸಿಲ್ಕ್ ಬಟ್ಟೆ ಧರಿಸಿರುವ ವಿಜಯಲಕ್ಷ್ಮೀ, ಕಾಮಾಕ್ಯ ದೇವಿಯ ದರ್ಶನ ಮಾಡಿದ್ದಾರೆಂದು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗಿದೆ. ಅಲ್ಲದೇ, ಈ ಬಟ್ಟೆಯ ಬೆಲೆ 41 ಸಾವಿರಕ್ಕೂ ಹೆಚ್ಚಿದೆ.

ಹಾಾಗಾಗಿ ದರ್ಶನ್ ಜೈಲಿನಲ್ಲಿದ್ದರೆ, ವಿಜಯಲಕ್ಷ್ಮೀ ಸಹಾಾಯ ಮಾಡಿ ಮಾಡಿ, ಸುಸ್ತಾಗಿ, ಮರಳಿ ಐಷಾರಾಮಿ ಜೀವನಕ್ಕೆ ಮರಳಿದಂತಿದೆ ಅಂತಾ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲದೇ, ಅಣ್ಣ ಜೈಲಲ್ಲಿ ಕೂತಿದ್ದರೆ, ಅತ್ತಿಗೆ ಕಾಸ್ಟ್ಲಿ ಬಟ್ಟೆ ಧರಿಸಿ, ಜೀವನ ಎಂಜಾಯ್ ಮಾಡುತ್ತಿದ್ದಾರೆ ಎಂದು ದರ್ಶನ್ ಫ್ಯಾನ್ಸ್ ಟಿಂಗಲ್ ಮಾಡಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ದರ್ಶನ್, ಪವಿತ್ರಾ ಗೌಡ ಜೊತೆ ನಾನು 10 ವರ್ಷದಿಂದ ಲಿವ್ ಇನ್ ರಿಲೆಶನ್‌ಶಿಪ್‌ನಲ್ಲಿ ಇದ್ದೆ ಎಂದು ಒಪ್ಪಿಕೊಂಡಿದ್ದಾರೆ. ಜೊತೆಗೆ ರೇಣುಕಾಸ್ವಾಮಿಯನ್ನು ಹೇಗೆ ಟ್ರ್ಯಾಕ್ ಮಾಡಿ, ಕೊಲೆ ಮಾಡಿದ್ದು ಎಂದು ವಿವರಿಸಿದ್ದಾರೆ.

- Advertisement -

Latest Posts

Don't Miss