Tuesday, July 1, 2025

Latest Posts

ಭೂಗತ ಪಾತಕಿ ದಾವೂದ್ ಸಹೋದರ ಅರೆಸ್ಟ್

- Advertisement -

www.karnatakatv.net: ರಾಷ್ಟ್ರೀಯ-ಮುಂಬೈ: ಭೂಗತ ಪಾತಕಿ ಹಾಗೂ ದೇಶದ ಮೋಸ್ಟ್ ವಾಟೆಂಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್‍‍ನನ್ನ ಮುಂಬೈ (ಎನ್‍ಸಿಬಿ) ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅರೆಸ್ಟ್ ಮಾಡಿದೆ. ಜಮ್ಮು-ಕಾಶ್ಮೀರದಲ್ಲಿ ನಡೆದಿದ್ದ ಅಂತಾರಾಜ್ಯ ಮಾದಕ ವಸ್ತು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಕ್ಬಾಲ್‍ನನ್ನ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈತ ಜಮ್ಮುಕಾಶ್ಮೀರದಿಂದ ಪಂಜಾಬ್ ಮೂಲಕ ಮುಂಬೈಗೆ ಡ್ರಗ್ಸ್ ತರಿಸಿ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

- Advertisement -

Latest Posts

Don't Miss