- Advertisement -
ಕರ್ನಾಟಕ ಟಿವಿ : ವಿದೇಶದಿಂದ ಈ ವಾರ ಭಾರತೀಯರನ್ನ ಸರ್ಕಾರ ಕರೆತರಲಿದೆ.. ಸಾವಿರಾರು ಜನರನ್ನ ಪರೀಕ್ಷೆ ಮಾಡಿಸದೆ ಕರೆತರೋದು ದೊಡ್ಡ ಆಪತ್ತು ಮೈಮೇಲೆ ಎಳೆದುಕೊಂಡಂತೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.. ಮೊದಲ ಹಂತದಲ್ಲಿ ಕೇರಳದ 3150 ಮಂದಿ ಮರಳಲಿದ್ದು ಅವರನ್ನ ರಾಜ್ಯ ಸರ್ಕಾರ ಕ್ವಾರಂಟೈನ್ ಮಾಡಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ವಿದೇಶಗಳಿಂದ ಒಟ್ಟಾರೆ 80 ಸಾವಿರ ಜನರನ್ನ ಮಾತ್ರ ಕರೆತರಲು ತೀರ್ಮಾನ ಮಾಡಿದೆ. ಆದ್ರೆ, ಕೇರಳ ಒಂದರಲ್ಲೇ 1 ಲಕ್ಷಕ್ಕಿಂತ ಹೆಚ್ಚು ಜನ ವಾಪಸ್ ಭಾರತಕ್ಕೆ ಬರಲು ರಿಜಿಸ್ಟರ್ ಮಾಡಿಸಿದ್ದಾರೆ..

- Advertisement -