www.karnatakatv.net :ರಾಯಚೂರು : ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆಯನ್ನು ಇಂದು ರಾಯಚೂರಿನ ಜಿಲ್ಲಾ ಅಧಿಕಾರಿಗಳ ಕಚೇರಿ ಮುಂದೆ ಚಾಲನೆ ನೀಡಿದರು.
ರಿಮ್ಸ್ ಆಸ್ಪತ್ರೆ , ನವೋದಯ ಆಸ್ಪತ್ರೆ , ನಗರದ ಪ್ಯಾರ ಮೆಡಿಕಲ್ ಕಾಲೇಜು , ಹಾಗೂ ಲಾಯನ್ ಕ್ಲಬ್ , ರಕ್ತ ಕೇಂದ್ರಗಳ ಸಮೂಹದಲ್ಲಿ ಇಂದು ರಕ್ತದಾನ ಕುರಿತು ಜಾಗೃತಿ ಜಾಥ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಅಧಿಕಾರಿಗಳು ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬ ನಾಗರಿಕ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬೇಕು. ಇಂದು ನಗರದ ಕೊರೊನಾ ಲಸಿಕೆ ಮೇಘಾ ಮೇಳ ಇರುವದರಿಂದ ಎಲ್ಲರು ಲಸಿಕೆ ಹಾಕಿಸಿ ಕೊಳಬೇಕು.
ಪ್ಲಾಸ್ಟಿಕ್ ಮುಕ್ತ ರಾಯಚೂರು ಮಾಡೋಣ ಎಂದು ಸಂದೇಶ ನೀಡಿದರು. ನಗರ ಜಿಲ್ಲಾ ಅಧಿಕಾರಿ ಕಛೇರಿ ಯಿಂದ ಬಸವೇಶ್ವರ ವೃತ , ಅಂಬೇಡ್ಕರ್ ವೃತದಿಂದ ಐ ಎಂ ಎ ಸಭಾಂಗಣ ವರೆಗೆ ಜಾಥಾ ನಡೆಸುವುದರ ಮೂಲಕ ಎಲ್ಲಾರು ರಕ್ತದಾನ ಮಾಡಬೇಕು ಎಂದು ಘೋಷಣೆ ಕೂಗುತ್ತಾ ವಿದ್ಯಾರ್ಥಿಗಳು ಜಾಥಾ ಯಶಸ್ವಿ ಗೊಳಿಸಿದರು.
ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು