Friday, June 20, 2025

Latest Posts

ಈ ವಸ್ತುಗಳನ್ನು ಅಪ್ಪಿತಪ್ಪಿಯೂ ಉಚಿತವಾಗಿ ತೆಗೆದುಕೊಳ್ಳಬೇಡಿ..!

- Advertisement -

ಕೆಲವು ವಸ್ತುಗಳನ್ನು ಶನಿವಾರದಂದು ಉಚಿತವಾಗಿ ತೆಗೆದುಕೊಳ್ಳಬಾರದು, ತೆಗೆದುಕೊಂಡರೆ ಶನಿದೇವರು ಕೋಪಗೊಳ್ಳುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ.. ಪ್ರತಿಯೊಬ್ಬರೂ ಶನಿಯನ್ನು ಕ್ರೂರ ಗ್ರಹ ಎಂದು ಪರಿಗಣಿಸುತ್ತಾರೆ. ಯಾಕೆಂದರೆ.. ಶನಿದೇವನ ಕೋಪಕ್ಕೆ ಗುರಿಯಾದ ವ್ಯಕ್ತಿ ಜೀವನವೇ ಸರ್ವನಾಶವಾಗುತ್ತದೆ. ಆದ್ದರಿಂದಲೇ ಹಿಂದೂ ಧರ್ಮದಲ್ಲಿ ಮಾನವರು ಶನಿ ದೇವರಿಗೆ ಭಯಪಡುತ್ತಾರೆ. ಮನುಷ್ಯರಷ್ಟೇ ಅಲ್ಲ ದೇವತೆಗಳು ಭಯಪಡುತ್ತಾರೆ. ಆದ್ದರಿಂದಲೇ ಶನಿದೇವನ ಕೋಪಕ್ಕೆ ಒಳಗಾಗಲು ಯಾರೂ ಬಯಸುವುದಿಲ್ಲ. ಅದಕ್ಕಾಗಿಯೇ ಜನರು ಶನಿದೇವನ ಕೋಪವನ್ನು ತಪ್ಪಿಸಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯ ಪ್ರತಿಕೂಲ ದೃಷ್ಟಿಯನ್ನು ತಪ್ಪಿಸಲು ಕೆಲವು ಕ್ರಮಗಳು ಮತ್ತು ಸಲಹೆಗಳನ್ನು ನೀಡಲಾಗಿದೆ. ಅದರಲ್ಲಿ ಮುಖ್ಯವಾಗಿ ಹೇಳುವುದಾದರೆ, ಕೆಲವು ವಸ್ತುಗಳನ್ನು ಉಚಿತವಾಗಿ ತೆಗೆದುಕೊಳ್ಳಬಾರದು. ಅಪ್ಪಿತಪ್ಪಿ ತೆಗೆದುಕೊಂಡರೆ ಶನಿದೇವರು ಕೋಪಗೊಳ್ಳುತ್ತಾರೆ. ಇದರಿಂದ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈಗ ಆ ವಸ್ತುಗಳು ಮತ್ತು ಆಹಾರ ಪದಾರ್ಥಗಳು ಯಾವುವು ಎಂದು ನೋಡೋಣ.

ಉದ್ದಿನ ಬೇಳೆ :
ನೀವು ಶನಿ ದೇವರ ಕೋಪಕ್ಕೆ ಗುರಿಯಾಗದೆ ಇರಬೇಕೆಂದರೆ ಉದ್ದಿನ ಬೆಳೆಯನ್ನು ಎಂದಿಗೂ ಉಚಿತವಾಗಿ ತೆಗೆದುಕೊಳ್ಳಬಾರದು. ಶನಿ ದೇವರ ಕೃಪೆಗಾಗಿ ಉದ್ದಿನ ಬೇಳೆಯನ್ನು ಬೇಯಿಸಿ ಶನಿ ದೇವರಿಗೆ ನೈವೇದ್ಯವಾಗಿ ಅರ್ಪಿಸಬೇಕು.

ಸಾಸಿವೆ ಎಣ್ಣೆ:
ಶನಿವಾರದಂದು ಶನಿ ದೇವರ ಮುಂದೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚುವುದು ತುಂಬಾ ಮಂಗಳಕರ. ಆದರೆ ಸಾಸಿವೆ ಎಣ್ಣೆಯನ್ನು ಉಚಿತವಾಗಿ ತೆಗೆದುಕೊಳ್ಳಬೇಡಿ. ತೆಗೆದುಕೊಂಡರೆ ನೀವು ಶನಿಯ ಕೋಪಕ್ಕೆ ಒಳಗಾಗುತ್ತೀರಿ.

ಕಬ್ಬಿಣ:
ಶನಿವಾರದಂದು ಯಾವುದೇ ಕಬ್ಬಿಣವನ್ನು ಖರೀದಿಸಬಾರದು ಅಥವಾ ಮಾರಾಟ ಮಾಡಬಾರದು. ಅದೇ ಸಮಯದಲ್ಲಿ ಕಬ್ಬಿಣವನ್ನು ಎಂದಿಗೂ ಉಚಿತವಾಗಿ ತೆಗೆದುಕೊಳ್ಳಬಾರದು. ಕಬ್ಬಿಣವನ್ನು ಖರೀದಿಸಿದರೆ ಅಥವಾ ತೆಗೆದುಕೊಂಡರೆ, ಶನಿ ದೇವರ ಕೋಪವನ್ನು ಎದುರಿಸಬೇಕಾಗುತ್ತದೆ. ಅದರೊಂದಿಗೆ ಜೀವನದಲ್ಲಿ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಎಳ್ಳು:
ಎಳ್ಳನ್ನು ಉಚಿತವಾಗಿ ಸೇವಿಸುವುದರಿಂದ ಶನಿದೇವನ ಕೋಪ ಬರುತ್ತದೆ. ಅದಕ್ಕಾಗಿಯೇ ಎಳ್ಳನ್ನು ಎಂದಿಗೂ ಉಚಿತವಾಗಿ ತೆಗೆದುಕೊಳ್ಳಬಾರದು. ಅಪ್ಪಿ ತಪ್ಪಿ ತೆಗೆದುಕೊಂಡರೆ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಹೊಸ ವರ್ಷದ ಮೊದಲ ದಿನ ಹೀಗೆ ಮಾಡಿದರೆ..ಇಡೀ ವರ್ಷ ಹಣದ ಸುರಿಮಳೆ…!

ಚಾಣಕ್ಯನ ಪ್ರಕಾರ ವೈವಾಹಿಕ ಜೀವನ ಸುಖಮಯವಾಗಿರಲು ಏನು ಮಾಡಬೇಕು..?

ಸೂರ್ಯ ದೇವರಿಗೆ ಅರ್ಘ್ಯವನ್ನು ಏಕೆ ಅರ್ಪಿಸುತ್ತಾರೆ..?ಇದರಿಂದಾಗುವ ಲಾಭವೇನು ಗೊತ್ತಾ..?

 

- Advertisement -

Latest Posts

Don't Miss