Saturday, July 5, 2025

Latest Posts

ಕೇಂದ್ರದಿಂದ ವಿಶಿಷ್ಠ ಪ್ಯಾಕೇಜ್ ಘೋಷಣೆ

- Advertisement -

www.karnatakatv.net:ರಾಷ್ಟ್ರೀಯ: ನವದೆಹಲಿ- ಕೊರೊನಾ ಆರ್ಥಿಕ ಬಿಕ್ಕಟ್ಟು ಎದುರಿಸಲು ಮತ್ತೊಂದು ಸುತ್ತಿನ ಪ್ಯಾಕೇಜ್ ನ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದಾರೆ. ಇಂದು ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ವಿವಿಧ ವಿಚಾರಗಳ ಬಗ್ಗೆ ವಿವರಿಸಿದ ಅವರು ಕೊರೊನಾ ಜಾಗತಿಕ ಬಿಕ್ಕಟ್ಟಿನಿಂದ ಪರಿಣಾಮ ಕೇಂದ್ರದಿಂದ 8 ಅಂಶಗಳ ನೆರವು ಘೋಷಿಸಿದ್ದಾರೆ. ಆ 8 ಅಂಶಗಳ ನೆರವು ಹೀಗಿದೆ…

  1. 25 ಲಕ್ಷ ಸಾಲ ಪಡೆಯಬಹುದು, ಆರ್ ಬಿಐಗಿಂತ 2 ಪರ್ಸೆಂಟ್ ಕಡಿಮೆ ಬಡ್ಡಿ ದರದಲ್ಲಿ ಸಾಲ, ಸಾಲದ ಅವಧಿ 3 ವರ್ಷ, ಅಂತೆಯೇ 5 ಲಕ್ಷ ಮಂದಿಗೆ ಉಚಿತ ವಿಮೆ ನೀಡುವ ಯೋಜನೆ
  2. ಪ್ರವಾಸೋದ್ಯಮವನ್ನ ಪುನರುಜ್ಜೀವನಗೊಳಿಸುವ ಹೊಸ ಯೋಜನೆ-11,000ಕ್ಕೂ ಹೆಚ್ಚು ನೋಂದಾಯಿತ ಪ್ರವಾಸಿ ಮಾರ್ಗದರ್ಶಿಗಳು, ಪ್ರಯಾಣ ಮತ್ತು ಪ್ರವಾಸೋದ್ಯಮ ಮಧ್ಯಸ್ಥಗಾರರಿಗೆ ಆರ್ಥಿಕ ಸಹಾಯ ವಿಸ್ತರಣೆ. ಲೈಸೆನ್ಸ್ ಹೊಂದಿರುವ ಟೂರಿಸ್ಟ್ ಗೈಡ್ ಗಳಿಗೆ 1 ಲಕ್ಷದವರೆಗೆ ಸಾಲ.ಪ್ರವಾಸಿ ವೀಸಾ ವಿತರಣೆಯನ್ನು ಪುನರಾರಂಭಿಸಿದ ನಂತರ ಮೊದಲ 5 ಲಕ್ಷ ಪ್ರವಾಸಿ ವೀಸಾಗಳು ಸಂಪೂರ್ಣ ಉಚಿತ.
  3. ಆರೋಗ್ಯ ವಲಯಕ್ಕೆ 50,000 ಕೋಟಿ ರೂಪಾಯಿ, ಇತರೆ ವಲಯಗಳಿಗೆ 60,000 ಕೋಟಿ ರೂಪಾಯಿ.
  4. 15 ಲಕ್ಷ ಕೋಟಿ ರೂಪಾಯಿ ಹೆಚ್ಚುವರಿ ಮೊತ್ತ ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್.
  5. ಮೈಕ್ರೋ ಫೈನಾನ್ಸ್ ಮೂಲಕ 25 ಲಕ್ಷ ಮಂದಿಗೆ ಒದಗಿಸುವ ವ್ಯಕ್ತಿಗಳಿಗೆ ಕ್ರೆಡಿಟ್ ಗ್ಯಾರಂಟಿ ಯೋಜನೆ ಮೂಲಕ ಸಾಲ ಒದಗಿಸಲಾಗುತ್ತದೆ.
  6. ಆತ್ಮನಿರ್ಭರ ಭಾರತ್ ರೋಜ್ ಗಾರ್ ಯೋಜನೆ ಅವಧಿ ವಿಸ್ತರಣೆ.
  7. ರೈತರಿಗೆ ಹೆಚ್ಚುವರಿ ಪ್ರೊಟೀನ್ ಆಧಾರಿತ ರಸಗೊಬ್ಬರ ಸಹಾಯಧನ-15,000 ಕೋಟಿ
  8. ಈ ಹಿಂದೆ ಘೋಷಿಸಿದಂತೆ ಪ್ರಧಾನಮಂತ್ರಿ ಆತ್ಮನಿರ್ಭರ ಗರೀಭ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಬಡವರಿಗೆ ಉಚಿತ ಆಹಾರ ಧಾನ್ಯ ವಿತರಣೆ- ಮೇ ತಿಂಗಳಿಂದ ನವೆಂಬರ್ 2021ರವರೆಗೆ ಅನ್ವಯ.
- Advertisement -

Latest Posts

Don't Miss