Friday, June 20, 2025

Latest Posts

ಬಾಡಿಗೆ ಗಂಡನ ರೀತಿ ಸಚಿವರು ನಮಗೆ ಬೇಡ – ರಾಯಚೂರು ಜನರ ಆಕ್ರೋಶ

- Advertisement -

ರಾಯಚೂರು : ಸಿಎಂ  ಬೊಮ್ಮಾಯಿ  ಅವರ  ಸಚಿವ ಸಂಪುಟದಲ್ಲಿ ರಾಯಚೂರು ಜಿಲ್ಲೆಗೆ ಸಚಿವ ಸ್ಥಾನ ಸಿಗದ ಹಿನ್ನಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಕಾರ್ಯಕರ್ತರಿಂದ‌ ಪ್ರತಿಭಟನೆ ಮಾಡಿದ್ರು. ಕಳೆದ ೨ ದಶಕಗಳಿಂದ ಸಚಿವ ಸ್ಥಾನ ನೀಡುವಲ್ಲಿ ನಮ್ಮ ಜಿಲ್ಲೆಯನ್ನು ಎಲ್ಲಾ ಪಕ್ಷಗಳು ಕಡೆಗಣಿಸಿ ನಮ್ಮ ಜಿಲ್ಲೆಗೆ ದೊಡ್ಡ ಅನ್ಯಾಯ ಮಾಡಿದ್ದಾರೆ. ನಮ್ಮ ಜಿಲ್ಲೆಯ ಅಭಿವೃದ್ಧಿಯಲ್ಲಿ  ಕುಂಠಿತವಾಗಿದೆ. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲೂ ಜಿಲ್ಲೆಗೆ ಸಚಿವ ಸ್ಥಾನ ಸೀಗಲಿಲ್ಲ.ಎಂದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾಕಾರರ ಧಿಕ್ಕಾರ ಕೂಗಿದರು. ಕಲ್ಯಾಣ ಕರ್ನಾಟಕ ಭಾಗಕ್ಕೆ ಅಭಿವೃದ್ಧಿಗಾಗಿ ಸಚಿವ ಸ್ಥಾನ ಸಿಗುತ್ತದೆ ಎಂದು ಬಹಳ ಆಸೆಯಿಂದ ರಾಯಚೂರು ಜನ ಇದ್ದರು . ಬೇರೆ ಜಿಲ್ಲೆಯ ಸಚಿವರನ್ನು ನಮ್ಮ ಜಿಲ್ಲೆಗೆ ಉಸ್ತುವಾರಿ ಯಾಗಿ ಬಂದರೆ ನಮ್ಮ ಜಿಲ್ಲೆಗೆ ಬಾಡಿಗೆ ಗಂಡ ಇದ್ದಾಗೆ , ನಮ್ಮ ಜಿಲ್ಲೆಗೆ ಸಚಿವ ಸ್ಥಾನ ಕೊಟ್ಟರೆ ಅಭಿವೃದ್ಧಿಯಲ್ಲಿ ಆಗುತ್ತದೆ  ಎಂದು ಸಂಘಟನೆ ನಾಯಕರು ತಮ್ಮ ಅಳಲು ವ್ಯಕ್ತಪಡಿಸಿದರು.

ನಂಜುಂಡಪ್ಪ ವರದಿ ಪ್ರಕಾರ ಕಲ್ಯಾಣ ಕರ್ನಾಟಕ ಕ್ಕೆ ೮ ಸಚಿವ ಸ್ಥಾನ ನೀಡಬೇಕೆಂದು ಇದೆ ಆದರೂ  ೨ ಕೊಟ್ಟಿದ್ದಾರೆ . ಜಿಲ್ಲೆಯನ್ನು ಕಡೆಗಣಿಸುತ್ತಿರೊ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಕೂಗಿದರು. ಜಿಲ್ಲೆ ಪ್ರಗತಿ ಕುಂಠಿತವಾಗೋದಕ್ಕೆ ನೇರವಾಗಿ ಸರ್ಕಾರವೇ ಕಾರಣ. ಎಂದರು . ಮುಂದಿನ ದಿನಗಳಲ್ಲಿ  ಸಿಎಂ ಬೊಮ್ಮಾಯಿ ಅವರು ಜಿಲ್ಲೆಗೆ ಸಚಿವ ಸ್ಥಾನಮಾನ ನೀಡಲು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ಅನಿಲ್ ಕುಮಾರ್, ಕರ್ನಾಟಕ ಟಿವಿ, ರಾಯಚೂರು

- Advertisement -

Latest Posts

Don't Miss