Astrology:
ಮೇಷರಾಶಿ
ವ್ಯಾಪಾರದಲ್ಲಿ ನೀವು ಬಯಸಿದ ಲಾಭವನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ಸಕಾರಾತ್ಮಕ ನಿರೀಕ್ಷೆಗಳು ಇರುತ್ತವೆ, ಆದರೆ ಈ ಸಮಯದಲ್ಲಿ ನಿಮ್ಮಲ್ಲಿ ದುರಹಂಕಾರದ ಭಾವನೆ ಹೆಚ್ಚಾಗಬಹುದು. ತಿಂಗಳ ಎರಡನೇ ವಾರದಲ್ಲಿ, ಕೆಲಸದ ಸ್ಥಳದಲ್ಲಿ ನಿಮ್ಮ ವಿರೋಧಿಗಳಿಂದ ಎಚ್ಚರದಿಂದಿರಿ. ಉದ್ಯೋಗ ಬದಲಾವಣೆಯ ನಿರೀಕ್ಷೆಯಲ್ಲಿದ್ದವರು ಉತ್ತಮ ಅವಕಾಶಗಳನ್ನು ಪಡೆಯುತ್ತಾರೆ, ಆದರೆ ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಪರೀಕ್ಷೆ-ಸ್ಪರ್ಧೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ತಮ್ಮ ಶ್ರಮಕ್ಕೆ ತಕ್ಕಂತೆ ಫಲಿತಾಂಶವನ್ನು ಪಡೆಯುತ್ತಾರೆ.ತಿಂಗಳ ದ್ವಿತೀಯಾರ್ಧದಲ್ಲಿ, ನಿಮ್ಮ ವಿರೋಧಿಗಳಿಂದ ನೀವು ಜಾಗರೂಕರಾಗಿರಬೇಕು. ತಿಂಗಳ ಮಧ್ಯದಲ್ಲಿ, ಪ್ರೀತಿಯ ಸಂಗಾತಿಯೊಂದಿಗೆ ತಪ್ಪು ತಿಳುವಳಿಕೆ ಉಂಟಾಗಬಹುದು. ಈ ಸಮಯದಲ್ಲಿ ಯಾರಾದರೂ ನಿಮ್ಮ ಪ್ರೀತಿಯ ಸಂಬಂಧದಲ್ಲಿ ಅಡೆತಡೆಗಳನ್ನು ಸೃಷ್ಟಿಸಲು ಪ್ರಯತ್ನಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ಬುದ್ಧಿವಂತಿಕೆಯಿಂದ ವಿಷಯಗಳನ್ನು ಪರಿಹರಿಸಿ ಮತ್ತು ಇದಕ್ಕಾಗಿ ನಿಮ್ಮ ಹಿತೈಷಿಗಳ ಸಹಾಯವನ್ನು ತೆಗೆದುಕೊಳ್ಳಿ. ವೈವಾಹಿಕ ಜೀವನವು ಹುಳಿ ಮತ್ತು ಸಿಹಿ ವಿವಾದಗಳೊಂದಿಗೆ ಸಂತೋಷವಾಗಿರುತ್ತದೆ.
ತುಲಾರಾಶಿ ಗೆ ಶುಕ್ರನ ಪ್ರವೇಶವಾದ ನಂತರ ನಿಮ್ಮ ರಾಶಿಗೆ ಶುಭಫಲಗಳು ಸಂಪೂರ್ಣವಾಗಿ ದೊರೆಯುತ್ತದೆ. ಸೂರ್ಯನ ತುಲಾರಾಶಿ ಪ್ರವೇಶ ನಿಮಗೆ ಕೊಂಚ ಒತ್ತಡವನ್ನು ಕೊಡುತ್ತಾನೆ. ಗಂಡ ಹೆಂಡತಿಯರ ನಡುವೆ ಸ್ವಲ್ಪ ವೈಮನಸ್ಯಕ್ಕೂ ಕಾರಣ ಆಗಬಹುದು. ಮನೆಯಲ್ಲಿ ಜಗಳವಾಗದಂತೆ ಎಚ್ಚರಿಕೆ ವಹಿಸಿ.ಮೂರನೇ ಮನೆಗೆ ಕುಜನ ಪ್ರವೇಶದಿಂದ ನಿಮ್ಮ ಯಶಸ್ಸು ಇಮ್ಮಡಿಯಾಗುತ್ತದೆ.
ವೃಷಭರಾಶಿ:
ವೃಷಭ ರಾಶಿಯವರಿಗೆ ಅಕ್ಟೋಬರ್ ತಿಂಗಳು ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಈ ಅವಧಿಯಲ್ಲಿ ವಾದಗಳಿಂದ ದೂರವಿರಿ.
ರಾಶಿಯಲ್ಲೇ ಇರುವ ಕುಜ ಪರಾಕ್ರಮದಿಂದ ಕೆಲಸ ಕಾರ್ಯಗಳಲ್ಲಿ ಜಯ ಕೊಡಿಸುತ್ತಾನೆ. ನೀವು ಕೈಹಾಕಿದ ಕೆಲಸಗಳಲ್ಲಿ ಯಶಸ್ಸು ಇದೆ. ವಿದೇಶ ಪ್ರಯಾಣಯೋಗ ಇದೆ. ನೌಕರಿಯಲ್ಲಿ ಬಡ್ತಿ ಸಿಗುತ್ತದೆ. ಹೊಸ ಕೆಲಸ ಆರಂಭಿಸಲು ಇದು ಸಕಾಲ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ ಇದೆ. ಆಸ್ತಿ ವಾಹನ ಖರೀದಿಸುವ ಯೋಗ ಇದೆ.ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ಕಾಲ. ಮನೆಯಲ್ಲಿ ವಾತಾವರಣ ಅನುಕೂಲವಾಗಿರುತ್ತದೆ. ನಿಮ್ಮನ್ನು ದೂರ ಮಾಡಿದ ಬಂಧುಗಳು ಅವರ ತಪ್ಪನ್ನರಿತು ನಿಮ್ಮ ಬಳಿ ಬರುತ್ತಾರೆ. ನಿಮ್ಮ ಮಾತುಗಳಿಗೆ ಗೌರವ ಕೊಡುತ್ತಾರೆ. ಸಮಾಜದಲ್ಲಿ ನಿಮಗೆ ಈಗ ಸನ್ಮಾನ ಪಾರಿತೋಷಕಗಳು ಸಿಗುವ ಸಮಯ. ರಾಶ್ಯಾಧಿಪತಿ ಶುಕ್ರ 24 ರವರೆಗೂ ಸಿಂಹರಾಶಿಯಲ್ಲಿ ನಂತರ ಕನ್ಯಾದಲ್ಲಿ ಸಂಚಾರ ನಿಮಗೆ ಒಳ್ಳೆಯ ಲಾಭ ಕೀರ್ತಿ ತಂದುಕೊಡುತ್ತದೆ. 25ರ ನಂತರ ಐದನೇ ಮನೆಯಲ್ಲಿ ಒಂದು ರಾಜಯೋಗದಿಂದ ನಿಮಗೆ ನೀವು ಬಹುದಿಗಳಿಂದ ಸಾಧಿಸಬೇಕೆಂದುಕೊಂಡಿದ್ದ ಕೆಲಸಗಳು ಸುಲಭವಾಗಿ ನೆರವೇರುತ್ತದೆ. ಧನಲಾಭ ಇದೆ. ಮಕ್ಕಳಿಂದ ಮನಸ್ಸಿಗೆ ಸಂತೋಷ ಇದೆ.
ಮಿಥುನರಾಶಿ:
ನಿಮ್ಮ ರಾಶಿಗೆ ಕುಜನ ಪ್ರವೇಶ ನಿಮಗಷ್ಟು ಒಳ್ಳೆಯದಲ್ಲ. ಒತ್ತಡ ಹೆಚ್ಚಾಗುತ್ತದೆ. ನಾಲ್ಕರ ಬುಧ ನಿಮ್ಮ ಸೌಕರ್ಯಗಳನ್ನು ಹೆಚ್ವಿಸುತ್ತಾನೆ. ವಿದ್ಯಾರ್ಥಿಗಳಿಗೆ ಶುಭ. ಪರೀಕ್ಷೆ ಬರೆದು ಕಾಯುತ್ತಿರುವವರಿಗೆ ಈಗ ಶುಭಕಾಲ.18 ರ ನಂತರ ಶುಕ್ರನ ತುಲಾ ಪ್ರವೇಶದಿಂದ ನಿಮಗೆ ಮತ್ತಷ್ಟು ಲಾಭ ಇದೆ. ಹಣದ ಹರಿವು ಉತ್ತಮವಾಗುತ್ತದೆ. ಹೆಣ್ಣು ಮಕ್ಕಳು, ಸೊಸೆಯರು ತಾಯಿ, ಸಹೋದರಿ ಮೊದಲಾದವರಿಂದ ಲಾಭ ಇದೆ. ಅವರ ಬೆಂಬಲ ಸಹಕಾರ ಸಿಗುತ್ತದೆ. ಸೂರ್ಯನ ನೀಚರಾಶಿಯ ಪ್ರವೇಶದಿಂದ ಗಂಡುಮಕ್ಕಳಿಗೆ ಕೊಂಚ ಹಿನ್ನಡೆ ಇದೆ. ವೃತ್ತಿ ಸ್ಥಾನದಲ್ಲಿ ಒತ್ತಡ ಇರುತ್ತದೆ. ಹನ್ನೊಂದರ ರಾಹು ನಾಲ್ಕರ ಬುಧ, ಐದರ ಶುಕ್ರ ಈ ತಿಂಗಳಲ್ಲಿ ನಿಮಗೆ ಶುಭಫಲಗಳನ್ನು ನೀಡುತ್ತಾರೆ. ಗುರು ತಟಸ್ಥ. ಸೂರ್ಯನಿಂದ ಕೆಲಸಕಾರ್ಯಗಳಲ್ಲಿ ಹಿನ್ನಡೆ ಇದೆ .ಅಷ್ಠಮ ಶನಿಯ ಪ್ರಭಾವ ಕಡಿಮೆಯಾಗಿದೆ. ಶನಿ ಒಂಬತ್ತನೇ ಮನೆ ಹಾಗೂ ಗುರು ಹನ್ನೊಂದನೇ ಮನೆಗೆ ಪ್ರವೇಶವಾದಾಗ ನಿಮಗೆ ಭಾಗ್ಯೋದಯವಾಗುವ ಸಮಯ. ಯಾವುದಕ್ಕೂ ತಾಳ್ಮೆ ಯಿಂದ ಕಾಯಬೇಕು. ಯಾವುದೇ ಕೌಟುಂಬಿಕ ಸಮಸ್ಯೆಯನ್ನು ಪರಿಹರಿಸಲು ಇದು ಶುಭ ಸಮಯ. ವಿರಾಮದ ನಂತರ ನಿಮ್ಮ ಅಧ್ಯಯನವನ್ನು ಮುಂದುವರಿಸಲು ನೀವು ಯೋಚಿಸುತ್ತಿದ್ದರೆ, ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ನಿಮ್ಮ ಪ್ರೀತಿಪಾತ್ರರ ಜೊತೆ ಯಾವುದೇ ವಿವಾದದಲ್ಲಿ ಭಾಗಿಯಾಗಬೇಡಿ ಇಲ್ಲದಿದ್ದರೆ ತಪ್ಪು ತಿಳುವಳಿಕೆ ಹೆಚ್ಚಾಗಬಹುದು. ಮಾತನಾಡುವ ಮುನ್ನ ಯೋಚಿಸಿ. ವೃತ್ತಿಯಲ್ಲಿ ಆತ್ಮವಿಶ್ವಾಸದ ಕೊರತೆಯು ಕೆಟ್ಟ ಕೆಲಸದ ವಾತಾವರಣಕ್ಕೆ ಕಾರಣವಾಗಬಹುದು.
ಕಟಕ ರಾಶಿ:
ಮೂರರ ಬುಧ, ನಾಲ್ಕರ ಶುಕ್ರ ಒಂಬತ್ತರ ಗುರು ನಿಮಗೆ ಭಾಗ್ಯವನ್ನು ತಂದುಕೊಡುತ್ತಾರೆ. ಹನ್ನೆರಡರ ಕುಜ ಭೂಮಿಯಿಂದ ನಷ್ಟವಾಗುವಂತೆ ಮಾಡುತ್ತಾನೆ. ಈ ರಾಶಿಯ ಕ್ರೀಡಾಪಟುಗಳಿಗೆ ಹಿನ್ನಡೆ ಇದೆ. ನಾಲ್ಕನೇ ಮನೆಗೆ ಬರುವ ಸೂರ್ಯ ಬಲಹೀನನಾಗಿ ಕೊಂಚ ಕಿರಿಕಿರಿ ಮಾಡುತ್ತಾನೆ. ಸಹೋದರರಿಂದ ಲಾಭ ಇದೆ. ಸಹೊದರರ ಸಹಕಾರ ಬೆಂಬಲ ಇದೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ಹತ್ತನೇ ಮನೆ ವೃತ್ತಿ ಸ್ಥಾನ ಅಧಿಪತಿ ಕುಜ ಹನ್ನೆರಡನೇ ಮನೆಯಲ್ಲಿದ್ದು ವೃತ್ತಿಯಲ್ಕಿ ಕಿರಿಕಿರಿ ಮಾಡುತ್ತಾನೆ. ಬೇಡದ ಸ್ಥಳಕ್ಕೆ ವರ್ಗಾವಣೆ ಆಗಬಹುದು. ಕೈಗೆ ಸಿಗುವಂತಿದ್ದ ಬಡ್ತಿ ಮುಂದಕ್ಕೆ ಹೋಗಬಹುದು. ವೃತ್ತಿಯಲ್ಲಿಒತ್ತಡವೂ ಹೆಚ್ಚು. ಆದರೆ ಗುರುಬಲ ಇರುವುದರಿಂದ ಪರಿಸ್ಥಿತಿ ಸಮತೋಲನದಲ್ಲಿ ಇರುತ್ತದೆ. ರಿಯಲ್ ಎಸ್ಟೇಟ್ ಉದ್ಯಮದವರಿಗೆ ನಷ್ಟವಿದೆ. ಶೇರ್ಸ್ ವ್ಯವಹಾರ ಮಾಡುವವರಿಗೆ ಧನಲಾಭ ಇದೆ. ಗೃಹಾರಂಭ, ವಿವಾಹಾದಿ ಶುಭಕಾರ್ಯಗಳಿಗೆ ಈಗ ನಿಮಗೆ ಸುಸಮಯ. ನಂತರ ಶನಿಯ ಅಷ್ಠಮ ಸ್ಥಾನಪ್ರವೇಶದಿಂದ ಎಲ್ಲ ಕೆಲಸಗಳಿಗೂ ಹಿನ್ನಡೆ ಆಗುತ್ತದೆ. ಸಕಾಲದಲ್ಲಿ ಲೋನ್ ಕೂಡ ಸಿಗದೆ ಪರಿತಪಿಸುವಂತಾಗುತ್ತದೆ. ಹಾಗಾಗಿ ಯಾವುದೇ ಮುಖ್ಯವಾದ ಕೆಲಸ ಕಾರ್ಯಗಳನ್ಬು ಈಗ ಮಾಡಿ ಮುಗಿಸಿ. ಈಗ ನಿಮಗೆ ದೈವ ಹಾಗು ಗುರುಗಳ ಅನುಗ್ರಹ ಇದೆ. ವಿವಾಹಿತ ದಂಪತಿಗಳು ಸ್ಮರಣೀಯ ಕ್ಷಣಗಳನ್ನು ಒಟ್ಟಿಗೆ ಕಳೆಯಲು ಸಣ್ಣ ಪ್ರವಾಸಕ್ಕೆ ಹೋಗಬಹುದು. ನೀವು ಆರೋಗ್ಯವಾಗಿರುತ್ತೀರಿ ಆದರೆ ನಿಮ್ಮ ಆಹಾರ ಮತ್ತು ಪಾನೀಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು.
ಸಿಂಹರಾಶಿ
ನಿಮ್ಮ ರಾಶಿಯ ಅಧಿಪತಿ ಸೂರ್ಯ 18 ರಂದು ಮೂರನೇ ಮನೆಗೆ ಪ್ರವೇಶವಾಗುತ್ತಾನೆ. ತುಲಾರಾಶಿ ಸೂರ್ಯನಿಗೆ ನೀಚರಾಶಿ ಆದರೂ ಮೂರನೆ ಮನೆ ಪರಾಕ್ರಮ ಸ್ಥಾನ. ನೀವು ಬಹಳ ಕಷ್ಟ ಎಂದುಕೊಂಡ ಕೆಲಸಗಳು ಸಲೀಸಾಗಿ ಆಗುತ್ತದೆ. ಸರ್ಕಾರದಿಂದ ಲಾಭ ಇದೆ. ಹನ್ನೊಂದನೇ ಮನೆಗೆ ಬರುವ ಕುಜ ಸಹ ನಿಮಗೆ ಹಣದ ಹರಿವನ್ನು ಉತ್ತಮ ಪಡಿಸುತ್ತಾನೆ. ಭೂಮಿಯಿಂದ ಲಾಭ ಇದೆ. ಭೂಮಿ ಖರೀದಿ ಮಾಡುವ ಯೋಗ ಇದೆ. ಯಾವುದಾದರೂ ಭೂಮಿಯನ್ನು ಬೆಲೆ ಕುದುರದೆ ಖರೀದಿ ಮಾಡದೆ ಹಾಗೆ ಬಿಟ್ಟಿದ್ದರೆ ಅದುಈಗ ನಿಮಗೆ ಬಹಳ ಸುಲಭ ಬೆಲೆಗೆ ದೊರೆಯುತ್ತದೆ. ಭೂಮಿಯ ಮೇಲೆ ಹಣ ಹೂಡಿದರೂ ಈಗ ನಿಮಗೆ ಲಾಭ ಇದೆ. ಮೂರರ ಕೇತು ಸಹ ನಿಮಗೆ ಕಷ್ಟಸಾಧ್ಯ ಎಂದುಕೊಂಡ ಕೆಲಸಗಳನ್ನು ಸುಲಭ ಮಾಡಿಕೊಡುತ್ತಾನೆ. ಹಣದ ಹರಿವನ್ನೂ ಹೆಚ್ಚಿಸುತ್ತಾನೆ. ಸಹೋದರರಿಂದ ನಷ್ಟ ಹಾಗೂ ಸಹೋದರಿಯರಿಂದ ಲಾಭ ಇದೆ. ಮನೆಗೆ ಅಲಂಕಾರದ ವಸ್ತುಗಳನ್ನು ಖರೀದಿ ಮಾಡುತ್ತೀರಿ.ಈ ರಾಶಿಯ ರಾಜಕೀಯ ನಾಯಕರಿಗೆ ಕೊಂಚ ಹಿನ್ನಡೆ ಇದೆ.. ನಿಮ್ಮ ಹಿರಿಯರೊಂದಿಗೆ ನೀವು ಯಾವುದೇ ರೀತಿಯ ವಾದಕ್ಕೆ ಇಳಿಯಬೇಡಿ ಮತ್ತು ಹೂಡಿಕೆ ಮಾಡುವಾಗ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ವೈಯಕ್ತಿಕ ಮಟ್ಟದಲ್ಲಿ ಕುಟುಂಬದ ಸದಸ್ಯರೊಂದಿಗೆ ಕೆಲವು ಭಿನ್ನಾಭಿಪ್ರಾಯಗಳು ಇರಬಹುದು. ನಿಮ್ಮ ಜ್ಞಾನವನ್ನು ವಿಸ್ತರಿಸಲು ಆಳವಾದ ಅಧ್ಯಯನಕ್ಕೆ ಇದು ಸರಿಯಾದ ಸಮಯ. ಸಣ್ಣ ಅಪಘಾತಗಳ ಬಗ್ಗೆ ಎಚ್ಚರದಿಂದಿರಿ.
ಕನ್ಯಾರಾಶಿ
ಎರಡನೆಯ ಮನೆಯಲ್ಲಿ ಶುಕ್ರ, ಸೂರ್ಯ, ಕೇತು ಸೇರಿ ಒಂದು ರಾಜಯೋಗವಾಗಿದೆ. ಇದು ನಿಮಗೆ ಕುಟುಂಬದಲ್ಲಿ ಸೌಖ್ಯವನ್ನು ಹಣದ ಹರಿವನ್ನೂ ವೃದ್ಧಿಸುತ್ತದೆ. ಐದನೇ ಮನೆ ಶನಿಯಿಂದ ಯೋಜಿತ ಕೆಲಸಗಳು ನಿಧಾನ ವಾಗುತ್ತದೆ. ಸ್ವಲ್ಪ ದಿನ ತಡೆಯಿರಿ ಶನಿ ಕುಂಭರಾಶಿ ಯ ಪ್ರವೇಶದ ನಂತರ ನಿಮ್ಮ ಅನೇಕ ಯೋಜನೆಗಳು ಮುಂಚೂಣಿಗೆ ಬರುತ್ತವೆ. ಯಾವ ಅಡೆತಡೆಯಿಲ್ಲದೆ ಕೆಲಸ ಸಾಗುತ್ತದೆ. ಒಳ್ಳೊಳ್ಳೆಯ ಯೋಜನೆಗಳು ನಿಮ್ಮನ್ನು ಹುಡುಕಿ ಬರುತ್ತದೆ. ಎಲ್ಲವೂ ನಿಮಗೆ ಗೆಲುವನ್ನು ಯಶಸ್ಸನ್ಬೂ ತಂದುಕೊಡುತ್ತದೆ. ಏಳರ ಗುರು ನಿಮಗೆ ಒಳ್ಳೆಯ ಹೆಸರನ್ನು ಸಮಾಜದಲ್ಲಿ ಒಳ್ಳೆಯ ಸ್ಥಾನಮಾನವನ್ನು ಕೊಡಿಸುತ್ತಾನೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ವೃತ್ತಿಯಲ್ಲಿ ಉನ್ನತ ಸ್ಥಾನಮಾನ ಲಭ್ಯವಾಗುತ್ತದೆ. ಜನಗಳು ನಿಮ್ಮ ಪ್ರಭಾವಕ್ಕೆ ಆಕರ್ಷಿತರಾಗಿ ನಿಮ್ಮ ಬಳಿ ಬರುತ್ತಾರೆ. ನಿಮ್ಮ ಮಾತು ಬಹಳ ಪ್ರಭಾವಶಾಲಿಯಾಗಿರುತ್ತದೆ. ನೀವು ಯಾರಿಗಾದರೂ ಕೆಲಸ ಮಾಡಿಕೊಡಬೇಕೆಂದರೆ ನಿಮ್ಮ ಮಾತು ಬಹಳ ಮುಖ್ಯ. ಮಾತಿಗೂ ಬೆಲೆಯಿರುವ ಕಾಲ. ನಿಮ್ಮ ಒಂದು ಮಾತಿನಿಂದಲೇ ಎಷ್ಡೋ ಕೆಲಸಗಳು ನಡೆಯುತ್ತದೆ. ರಾಶಿಯಲ್ಲೇ ಇರುವ ಬುಧ ನಿಮಗೆ ಜ್ಞಾನವನ್ನು ಚಿಂತನೆಯನ್ನು ಹೆಚ್ಚಿಸುತ್ತಾನೆ. ಸತ್ಸಂಗಳು ಸಿಗುತ್ತವೆ. ಸಜ್ಜನರ ಸಹವಾಸದಿಂದ ಮನಸ್ಸಿಗೆ ಅಲೌಕಿಕ ಆನಂದ.
ತುಲಾ ರಾಶಿ
15 ನೇ ತಾರೀಖಿನ ನಂತರ ಕುಜ ಒಂಬತ್ತನೇ ರಾಶಿಪ್ರವೇಶದಿಂದ ನಿಮಗೆ ಪಿತ್ರಾರ್ಜಿತ ಆಸ್ತಿ ಬರುವ ವಿಷಯದಲ್ಲಿ ಇದ್ದ ಕಿರಿಕಿರಿ ಗಳು ದೂರವಾಗಿ ನಿಮ್ಮ ದಾರಿ ಸುಗಮವಾಗುತ್ತದೆ. ಭೂಮಿ ವ್ಯವಹಾರದಲ್ಲಿ, ವ್ಯವಸಾಯದಲ್ಲಿ ಲಾಭ ಇದೆ. ವೃತ್ತಿಯಲ್ಲಿ ಅನುಕೂಕರ ವಾತಾವರಣ ಇದೆ. ಗುರು ಐದನೇ ಮನೆ ನಿಮ್ಮ ವೃತ್ತಿಸ್ಥಾನವನ್ನು ನೋಡುವುದರಿಂದ ನಿಮ್ಮ ವೃತ್ತಿಯಲ್ಲಿ ಯಶಸ್ಸೂ ಲಾಭವೂ ಇದೆ. ನಿಮ್ಮ ರಾಶಿಗೇ ಕುಜನ ಪ್ರವೇಶವಾದನಂತರ ನಿಮ್ಮ ಆರೋಗ್ಯದಲ್ಲೂ ಸುಧಾರಣೆ ಕಾಣುತ್ತದೆ. ಸೂರ್ಯ ಈ 17 ರ ನಂತರ ನಿಮ್ಮ ರಾಶಿಗೆ ಪ್ರವೇಶವಾದ ನಂತರ ನಿಮ್ಮ ರಾಶಿಯ ಸರ್ಕಾರಿ ನೌಕರರಿಗೆ ಕೊಂಚ ಹಿನ್ನಡೆ ಇದೆ. ರಾಜಕೀಯ ನಾಯಕರಿಗೂ 17 ರ ನಂತರ ಪರಿಸ್ಥಿತಿ ಅನುಕೂಲ ವಾಗಿರುವುದಿಲ್ಲ. ಬುಧ 12 ನೇ ಮನೆಯಲ್ಲಿರುವುದು ಬಂಧುಗಳಿಂದ ವೃಥಾಪವಾದ. ಆದರೆ ಯಾರಿಗೂ ಅಂಜಬೇಡಿ. ದುರ್ಗಾಸ್ತುತಿ ಪಠಿಸಿ. ಏಳರ ರಾಹುವಿನಿಂದ ಸಂಗಾತಿಯೊಂದಿಗೆ ವಿರೋಧದ ವಾತಾವರಣ ಇದೆ. ಅಕ್ಟೋಬರ್ 27 ನಿಮ್ಮ ರಾಶಿಯಲ್ಲಿ ನಾಲ್ಕು ಗ್ರಹಗಳ ಸಂಯೋಗ ನಿಮಗೆ ರಾಜಯೋಗವನ್ನು ತಂದುಕೊಡುತ್ತದೆ.
ದೀರ್ಘಾವಧಿಯ ಬಾಕಿ ಇರುವ ಯೋಜನೆಯನ್ನು ಪೂರ್ಣಗೊಳಿಸಲು ನಿಮಗೆ ಅವಕಾಶ ಸಿಗುತ್ತದೆ. ಹೂಡಿಕೆ ಮತ್ತು ವ್ಯಾಪಾರ ಪಾಲುದಾರರೊಂದಿಗೆ ಜಾಗರೂಕರಾಗಿರಿ. ನಿಮ್ಮಲ್ಲಿ ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದವರು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ.ಆರ್ಥಿಕವಾಗಿ, ನಿಮ್ಮ ವೆಚ್ಚಗಳು ಹೆಚ್ಚಾಗುವ ಸಾಧ್ಯತೆಯಿದೆ. ಈ ಸಮಯದಲ್ಲಿ ಪ್ರಯಾಣಿಸುವುದನ್ನು ತಪ್ಪಿಸಿ. ನಿಮ್ಮ ಸಂಗಾತಿಯ ಬೆಂಬಲವನ್ನು ನೀವು ಪಡೆಯುತ್ತೀರಿ ಮತ್ತು ಅವರ ಉದ್ಯೋಗದಲ್ಲಿ ಬದಲಾವಣೆಯಾಗಬಹುದು. ಚರ್ಮ ಮತ್ತು ಸ್ನಾಯುಗಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ನೋಡಿಕೊಳ್ಳಿ.
ವೃಶ್ಚಿಕರಾಶಿ
ಐದರ ಗುರು, ಆರರ ರಾಹು, ಹನ್ನೊಂದರ ಕೇತು, ಶುಕ್ರ ಮೂರರ ಶನಿ ಹತ್ತರ ಸೂರ್ಯ-ಬುಧ ಎಲ್ಲರೂ ನಿಮಗೆ ಅನುಕೂಲಕರ ವಾಗಿದ್ದಾರೆ. ಶತೃಧ್ವಂಸವಾಗುತ್ತದೆ. ವೃತ್ತಿಯಲ್ಲಿ ಯಶಸ್ಸು, ಭಾಗ್ಯೋದಯವಾಗುವ ಸಮಯ. ಸರ್ಕಾರಿ ಕೆಲಸಗಾರರಿಗೂ ಶುಭಲಾಭ ಇದೆ. ಅವಿವಾಹಿತರಿಗೆ ವಿವಾಹವಾಗುವ ಸಮಯ. ನೌಕರಿಯಲ್ಲಿ ಯಶಸ್ಸು ಪ್ರಸಿದ್ಧಿ ಕೀರ್ತಿ ಸಿಗುವ ಸಮಯ. ಹೊಸ ನೌಕರಿ ಹುಡುಕುತ್ತಿರುವವರೆಗೂ ಈಗ ಸುಸಮಯ. ವಿದೇಶ ಪ್ರವಾಸ ಯೋಗ ಇದೆ. ಸನ್ಮಾನಗಳು ಪ್ರಶಸ್ತಿಗಳು ಸಿಗುವ ಸಮಯ. ನಿಮ್ಮನ್ನು ದೂರ ಮಾಡಿರುವವರೂ ಈಗ ನಿಮನ್ನು ಹುಡುಕಿ ಬರುವ ಸಮಯ. ನಿಮ್ಮ ಮಾತಿಗೆ ಬೆಲೆ ಇದೆ. ನಿಮ್ಮ ಒಂದು ಮಾತಿನಿಂದ ಎಷ್ಟೋ ಮುಖ್ಯವಾದ ಕೆಲಸಗಳು ಸಲೀಸಾಗಿ ಆಗುತ್ತದೆ. ಹಣದ ಹರಿವು ಉತ್ತಮವಾಗಿದೆ. ಸಾಲ ತೀರಿಸಿ ಋಣಮುಕ್ತಗುವಿರಿ. ತಂದೆಗೆ ಬೆಂಬಲ ಕೊಡುವಿರಿ. ವಾಹನ ಚಲಾಯಿಸುವಾಗ ಕೊಂಚ ಎಚ್ಚರ ಇರಲಿ. ನರಸಿಂಹನ ಪ್ರಾರ್ಥನೆ ಮಾಡಿ.
ನೀವು ಯಶಸ್ಸು ಮತ್ತು ಖ್ಯಾತಿಗೆ ಸಾಕ್ಷಿಯಾಗುತ್ತೀರಿ ಮತ್ತು ಸರಿಯಾದ ವಿಧಾನಗಳ ಮೂಲಕ ಸಂಪತ್ತನ್ನು ಪಡೆಯುತ್ತೀರಿ. ಉದ್ಯಮಿಗಳು ತಮ್ಮ ವ್ಯವಹಾರವನ್ನು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಾಗುತ್ತದೆ ಆದರೆ ಉದ್ಯೋಗಾಕಾಂಕ್ಷಿಗಳು ಉನ್ನತ ಅಧಿಕಾರಿಗಳಿಂದ ಪ್ರಶಂಸೆ ಪಡೆಯುತ್ತಾರೆ.ನಿಮ್ಮ ಕುಟುಂಬ, ಮಕ್ಕಳು ಮತ್ತು ಸ್ನೇಹಿತರೊಂದಿಗೆ ನೀವು ಸೌಹಾರ್ದಯುತ ಸಂಬಂಧವನ್ನು ಹೊಂದಿರುತ್ತೀರಿ. ವಿವಾಹಿತರು ಕೂಡ ಆನಂದಮಯ ಸಮಯವನ್ನು ಕಳೆಯುತ್ತಾರೆ. ಆರೋಗ್ಯವು ಪರಿಣಾಮಕಾರಿಯಾಗಿರುತ್ತದೆ ಮತ್ತು ಯಾವುದೇ ರೀತಿಯ ಸಮಸ್ಯೆಯ ಸಾಧ್ಯತೆಯಿಲ್ಲ.
ಧನಸ್ಸು ರಾಶಿ
ಅಕ್ಟೋಬರ್27 ರ ನಂತರ ನಿಮ್ಮ ರಾಶಿಯ ಹನ್ನೊಂದನೇ ಮನೆಯಲ್ಲಿ ನಾಲ್ಕು ಗ್ರಹಳು ಸೇರಿ ಒಂದು ರಾಜಯೋಗವಾಗಲಿದೆ. ಇದರಿಂದ ನಿಮಗೆ ಹಣದ ಹರಿವು ಉತ್ತಮವಾಗುತ್ತದೆ. ವ್ಯಾಪಾರದಲ್ಲಿ ಲಾಭ ಇದೆ. ಅಲಂಕಾರ ವಸ್ತುಗಳನ್ನು ಮಾರಾಟ ಮಾಡುವವರು, ಸೌದರ್ಯತಜ್ಞರು, ಬೆಳ್ಳಿ ಬಂಗಾರ ಆಭರಣ ವ್ಯಾಪಾರಿಗಳಿಗೆ ಶುಭ ಲಾಭ ಇದೆ. ಎರಡನೇ ಮನೆಯ ಶನಿಯಿಂದ ಕುಟುಂಬದಲ್ಲಿ ಅಸೌಖ್ಯ. ಸಂಗಾತಿಯೊಡನೆ ವಿರಸ. ಇದು ವಿಕೋಪಕ್ಕೆ ಹೋಗದಂತೆ ತಾಳ್ಮೆ ವಹಿಸಿ. ದುರ್ಗಾ ಸ್ತುತಿ ಮಾಡಿ. ಆರರ ಕುಜ ನಿಮಗೆ ಧೈರ್ಯವನ್ನು ಪರಾಕ್ರಮವನ್ನೂ ಕೊಡುತ್ತಾನೆ. ಮುನ್ನುಗ್ಗಿ ಯಾವುದೇ ಕೆಲಸ ಮಾಡಿದರೂ ನಿಮಗೆ ಜಯವಿದೆ. ಸಿಎ, ಬ್ಯಾಂಕಿಂಗ್ ಕ್ಷೇತ್ರ, ಅಕೌಂಟಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಶುಭಲಾಭ ಇದೆ. ಹತ್ತರ ಬುಧ ವೃತ್ತಿಯಲ್ಲಿ ಯಶಸ್ಸನ್ನು ಕೊಡುತ್ತಾನೆ. ನಾಲ್ಕರ ಗುರು ಕೊಂಚ ಮಾನಸಿಕ ಕಿರಿಕಿರಿ ನೀಡುತ್ತಾನೆ. ಶ್ರೀ ದತ್ತಾತ್ರೇಯ ಸ್ತೋತ್ರ ಪಠಿಸಿ. ಕಡಲೆಬೇಳೆಯನ್ನು ದಾನವಾಗಿ ಕೊಡಿ. ಕಡಲೆ ಬೆಲ್ಲವನ್ನು ಬಿಳಿ ಹಸುವಿಗೆ ತಿನ್ನಿಸಿ. ಭೂಮಿ ವ್ಯವಹಾರದಲ್ಲಿ ಲಾಭ ಇದೆ. ಹೊಸ ಆಸ್ತಿ ಖರೀದಿ ಯೋಗ ಇದೆ. ಶನಿ ಮೂರನೇ ಮನೆಗೆ ಪ್ರವೇಶವಾದ ನಂತರ ಮತ್ತಷ್ಟು ಶುಭಫಲಗಳು ದೊರೆಯಲಿದೆ.
ನೀವು ಉದ್ಯೋಗ ಬೆಳವಣಿಗೆಯ ಅವಕಾಶಗಳು ಮತ್ತು ಬಡ್ತಿಗಳನ್ನು ಪಡೆಯುವ ಸಾಧ್ಯತೆಯಿದೆ. ಆರ್ಥಿಕವಾಗಿ, ಹೂಡಿಕೆಗೆ ಸಂಬಂಧಿಸಿದಂತೆ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ ಮತ್ತು ನಿಮ್ಮ ವೆಚ್ಚಗಳು ಸಹ ನಿಯಂತ್ರಣದಲ್ಲಿರುತ್ತವೆ. ಉದ್ಯಮಿಗಳು ಲಾಭದಲ್ಲಿ ಹೆಚ್ಚಳವನ್ನು ಕಾಣಬಹುದು.
ನಿಮ್ಮ ಪ್ರೀತಿಪಾತ್ರರ ಜೊತೆ ನೀವು ಗುಣಮಟ್ಟದ ಸಮಯವನ್ನು ಕಳೆಯಬಹುದು. ಈ ತಿಂಗಳು ನೀವು ಸ್ವಯಂ ಪ್ರೇರಣೆಯನ್ನು ಅನುಭವಿಸುವಿರಿ ಮತ್ತು ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸಲು ಇನ್ನಷ್ಟು ಕಲಿಯಲು ಬಯಸುತ್ತೀರಿ. ಹೊಟ್ಟೆ ಮತ್ತು ಕೆಳ ಬೆನ್ನಿನ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ವಿದ್ಯಾರ್ಥಿಗಳು ನಿರೀಕ್ಷೆಗಿಂತ ಉತ್ತಮ ಸಾಧನೆ ಮಾಡುತ್ತಾರೆ.
ಮಕರರಾಶಿ
ಗ್ರಹಗಳು ನಿಮಗೆ ವ್ಯತಿರಿಕ್ತವಾಗಿ ಇವೆ. ಆದರೆ ಸೂರ್ಯ ಬುಧ ಅನುಕೂಲವಾಗಿದ್ದಾರೆ. ಗುರು ಕೂಡ ಅರ್ಧ ಬೆಂಬಲ ತೋರಿಸುತ್ತಾನೆ. ವಿದೇಶ ಪ್ರಯಾಣ ಯೋಗ ಇದೆ. ಆದರೆ ಕೆಲಸಗಳು ಬಹಳ ನಿಧಾನಗತಿಯಲ್ಲಿ ಸಾಗುತ್ತಿದೆ. ಆದರೂ ಯಾರಾದರೂ ಒಬ್ಬರು ದೈವಾನುಗ್ರಹದಿಂದ ನಿಮ್ಮ ಸಹಾಯಕ್ಕೆ ಒದಗಿ ಬರುತ್ತಾರೆ. 15 ರ ನಂತರ ನಿಮ್ಮ ಕೆಲಸಗಳು ಸರಾಗವಾಗಿ ಮುಂದುವರೆಯುತ್ತದೆ. 27 ರ ನಂತರ ಮತ್ತಷ್ಟು ಅಭಿವೃದ್ಧಿ ಇದೆ. ದುರ್ಗಾ ಸ್ತುತಿ ಪಾರಾಯಣ ಮಾಡಿ. ಆರೋಗ್ಯದಲ್ಲಿ ಎಚ್ಚರಿಕೆ ಇರಲಿ. ಸಹೋದರರಿಂದ ಸಹಾಯ ಇದೆ. ಚಂದ್ರನ ಸಂಚಾರದಿಂದಲೂ ನಿಮಗೆ ಶುಭಫಲಗಳು ಸಿಗುತ್ತವೆ. ಆದರೂ ಈಗ ನಿಮಗೆ ಪ್ರಯತ್ನ ಹೆಚ್ಚು ಫಲ ಕಡಿಮೆ ಎಂಬಂತೆ ಆಗಿದೆ. ದತ್ತಾತ್ರೇಯ ಸ್ತೋತ್ರ ಹೇಳಿಕೊಳ್ಳಿ.
ವಂಚನೆಯ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಜಾಗರೂಕರಾಗಿರಿ. ನಿಮ್ಮ ವೃತ್ತಿಗೆ ಸಂಬಂಧಿಸಿದ ಯಾವುದೇ ರಹಸ್ಯವನ್ನು ಹಂಚಿಕೊಳ್ಳಬೇಡಿ ಏಕೆಂದರೆ ಕೆಲವರು ಈ ಮಾಹಿತಿಯನ್ನು ನಿಮ್ಮ ವಿರುದ್ಧ ಬಳಸಬಹುದು. ನೀವು ಉದ್ಯೋಗಗಳನ್ನು ಬದಲಿಸಲು ಅಥವಾ ವ್ಯಾಪಾರಕ್ಕೆ ವೈವಿಧ್ಯಗೊಳಿಸಲು ಯೋಜಿಸುತ್ತಿದ್ದರೆ ಈ ಕಲ್ಪನೆಯನ್ನು ಸದ್ಯಕ್ಕೆ ತಡೆಹಿಡಿಯಿರಿ. ಈ ಅವಧಿಯಲ್ಲಿ ಶಾಂತವಾಗಿರಿ ಮತ್ತು ನಿಮ್ಮ ಸ್ಥಾನವನ್ನು ಸ್ಥಿರವಾಗಿರಿಸಿಕೊಳ್ಳಿ ಮತ್ತು ಯಾವುದೇ ಬದಲಾವಣೆಗಳನ್ನು ಮಾಡಬೇಡಿ ಏಕೆಂದರೆ ಅದು ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು.
ಯಾವುದೇ ರೀತಿಯ ಊಹೆಗಳನ್ನು ತಪ್ಪಿಸಿ ಏಕೆಂದರೆ ಅದು ನಷ್ಟಕ್ಕೆ ಕಾರಣವಾಗಬಹುದು. ವಿವಾಹಿತ ಸ್ಥಳೀಯರಿಗೆ ಮಾನಸಿಕ ಶಾಂತಿಯ ಕೊರತೆ ಇರಬಹುದು.
ಕುಂಭರಾಶಿ
ನಿಮಗೆ ಎರಡರ ಗುರು ಮೂರರ ರಾಹು ಪ್ರಭಾವಶಾಲಿಗಳು. ನೀವು ನೆನೆಸಿದ ಕಾರ್ಯಗಳು ಚಿಟಿಕೆ ಹೊಡೆಯುವುದರಲ್ಲಿ ನೆರವೇರುತ್ತದೆ. ಐದರ ಕುಜನಿಂದ ಮಕ್ಕಳಿಂದ ಲಾಭ. ಮನೆಯಲ್ಲಿ ಶುಭಕಾರ್ಯ ನಡೆಯುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ವೃತ್ತಿಯಲ್ಲಿ ನಿಮ್ಮ ಕೀರ್ತಿ ಹೆಚ್ಚಾಗುವ ಸಮಯ. ವೃತ್ತಿಯಸ್ಥಾನದ ಅಧಿಪತಿ ಕುಜ ಐದರಲ್ಲಿ ಇದ್ದಾನೆ. ಇದು ನಿಮಗೆ ವೃತ್ತಿಯಲ್ಲಿ ಅನುಕೂಲಕರ. ವಾತಾವರಣ ಕೊಡುತ್ತದೆ. 27 ರ ನಂತರ ಶುಕ್ರ ಸ್ವಂತ ಮನೆಗೆ ಬಂದಾಗ ನಿಮಗೆ ಒಂಬತ್ತನೆ ಮನೆಯಲ್ಲಿಒಂದು ರಾಜಯೋಗ ಆಗುತ್ತದೆ. ಇದರಿಂದ ಬಹಳಷ್ಟು ಶುಭಫಲಗಳನ್ನು ಕಾಣುವಿರಿ.
ನಿಮ್ಮಲ್ಲಿ ಕೆಲವರು ಈ ತಿಂಗಳು ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಸವಾಲುಗಳನ್ನು ಎದುರಿಸಬಹುದು. ವೃತ್ತಿಪರವಾಗಿ, ಸ್ಥಳೀಯರಿಗೆ ಹಿರಿಯರ ಬೆಂಬಲ ಸಿಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಕೆಲಸದ ಸ್ಥಳದಲ್ಲಿ ಆಂತರಿಕ ರಾಜಕೀಯದಲ್ಲಿ ತೊಡಗುವುದು ತಪ್ಪಾಗುತ್ತದೆ.
ನಿಮ್ಮಲ್ಲಿ ಕೆಲವರು ಕಾನೂನು ವಿಷಯಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ವೃತ್ತಿ ಜೀವನದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನೀವು ಆರ್ಥಿಕವಾಗಿ ಹಠಾತ್ ಲಾಭ ಪಡೆಯುವ ಸಾಧ್ಯತೆಗಳಿವೆ.ಹೊಸ ಪ್ರಣಯ ಸಂಬಂಧವನ್ನು ಆರಂಭಿಸಲು ಇದು ಸರಿಯಾದ ಸಮಯ. ನಿಮ್ಮ ಕುಟುಂಬದ ಸದಸ್ಯರೊಂದಿಗಿನ ನಿಮ್ಮ ಸಂಬಂಧಗಳು ಸುಧಾರಿಸುತ್ತವೆ ಮತ್ತು ಈ ಅವಧಿಯಲ್ಲಿ ನೀವು ಆನಂದವಾಗಿರುತ್ತೀರಿ.
ಮೀನರಾಶಿ
ಹನ್ನೊಂದರ ಶನಿ, ಏಳರ ಬುಧ ನಿಮಗೆ ಅನುಕೂಲರು. ನಿಮ್ಮ ರಾಶಿಯಲ್ಲೆ ಇರುವ ಗುರು ಕೊಂಚ ಕಿರಿಕಿರಿ ಯನ್ನೂ ನಷ್ಟವನ್ನೂ ಕೊಡುತ್ತಾನೆ. ಈಗ ಮೂರನೇ ಮನೆಯಲ್ಲಿರುವ ಕುಜ 15 ರ ನಂತರ ನಾಲ್ಕನೇ ಮನೆ ಪ್ರವೇಶವಾಗುತ್ತಾನೆ. ಈ ಎರಡೂ ಮನೆಗಳೂ ಕುಜನ ಸಂಚಾರ ನಿಮಗೆ ಶುಭಫಲವೇ ಸಿಗುತ್ತದೆ. ಯಾವುದೋ ಬಾಕಿಯಾಗಿ ಮರೆತುಹೋಗಿದ್ದ ಹಣ ವಾಪಸ್ ಬರುತ್ತದೆ. ಏಳರ ಬುಧನಿಂದ ವಿದ್ವತ್ ಜನರ ಪರಿಚಯವಾಗುತ್ತದೆ. ನಿಮ್ಮ ಹಿರಿಮೆ ಬೆಳೆಯುತ್ತದೆ. ಎರಡನೇ ಮನೆಯ ರಾಹುವಿನಿಂದ ನಿಮ್ಮ ಮಾತು ಕೆಲವರಿಗೆ ಖಾರವಾಗಿ ಕಾಣಬಹುದು. ಮನಸ್ತಾಪಕ್ಕೆ ಎಡೆಮಾಡಿಕೊಡದಂತೆ ಜಾಣತನವಾಗಿ ಮಾತನಾಡಿ. ಹನ್ನೊಂದರ ಶನಿ ನಿಮಗೆ ಅನಿರೀಕ್ಷಿತ ಧನಲಾಭ ವಾಗುವಂತೆ ಮಾಡುತ್ತಾನೆ. ನಿಮಗೆ ಈಗ ಅರ್ಧಲಾಭ ಅರ್ಧ ನಷ್ಟದ ಸಮಯ. ಯೋಚಿಸಿ ಹೆಜ್ಜೆ ಮುಂದಿಡಿ.
ಈ ತಿಂಗಳು ಎದುರಾಳಿಗಳಿಂದಾಗಿ ನೀವು ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು, ಇದು ಮಾನಸಿಕ ಆಯಾಸವನ್ನು ಹೆಚ್ಚಿಸಬಹುದು. ವೃತ್ತಿಪರವಾಗಿ ನೀವು ನಿಮ್ಮ ಕೆಲಸದಲ್ಲಿ ಪ್ರಗತಿ ಸಾಧಿಸುತ್ತೀರಿ ಆದರೆ ಯಾವುದೇ ತಪ್ಪು ತಿಳುವಳಿಕೆಯನ್ನು ತಪ್ಪಿಸಲು ಮೇಲಧಿಕಾರಿಗಳೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸುತ್ತೀರಿ. ವ್ಯಾಪಾರಿಗಳು ಅನುಕೂಲಕರವಾದ ಲಾಭವನ್ನು ನಿರೀಕ್ಷಿಸಬಹುದು.
ಅಹಂನಿಂದಾಗಿ ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸಲು ಪ್ರಯತ್ನಿಸಿ. ವಿದ್ಯಾರ್ಥಿಗಳು ನಿರೀಕ್ಷೆಗಿಂತ ಉತ್ತಮ ಸಾಧನೆ ಮಾಡುತ್ತಾರೆ. ಮಾನಸಿಕ ಒತ್ತಡ ಹೆಚ್ಚಾಗಬಹುದು, ಯೋಗ ಧ್ಯಾನ ಮಾಡಿ.