www.karnatakatv.net : ಭಾನುವಾರದಿಂದ ಆರಂಭವಾಗಲಿರುವ ಭಾರತ ತಂಡದ ವಿರುದ್ದ ಲಂಕಾ ತಂಡವು ಲಿಮಿಟೆಡ್ ಓವರ್ ಗಳ ಸರಣಿಗೂ ಮೋದಲೇ ಹಿನ್ನಡೆಯಾಗಿದೆ. ಮಾಜಿ ನಾಯಕ ವಿಕೆಟ್ ಕೀಪರ್, ಕುಸಾಲ್ ಪೆರೇರಾ ಏಕದಿನ ಮತ್ತು ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಗಾಯದ ಸಮಸ್ಯೆಯಿಂದ
ವೇಗಿ ಬಿನೂರ ಫರ್ನಾಂಡೋ ಕೂಡಾ ಏಕದಿನ ಸರಣಿ ಇಂದ ಕೊರಬಿದ್ದಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಹೇಳಿಕೆ ನೀಡಿದೆ. ಕುಸಾಲ್ ಪೆರೇರಾ ಸರಣಿಯಿಂದ ಹೊರಬಿದ್ದ ಕಾರಣ ಲಂಕಾ ತಂಡಕ್ಕೆ ವಿಕೆಟ್ ಕೀಪಿಂಗ್ ತಲೆನೋವಾಗಿದೆ. ಮತ್ತೋರ್ವ ವಿಕೆಟ್ ಕೀಪರ್ ನಿರೋಶನ್ ಡಿಕವೆಲ್ಲಾ ಅವರು ಇಂಗ್ಲೆಂಡ್ ನಲ್ಲಿ ಬಯೋ ಬಬಲ್ ನಿಯಮ ಉಲ್ಲಂಘಿಸಿದ ಕಾರಣ ಶಿಕ್ಷೆ ಅನುಭವಿಸುತ್ತಿದ್ದಾರೆ. ಜು.18ರಿಂದ ಭಾರತ ಮತ್ತು ಶ್ರೀಲಂಕಾ ಏಕದಿನ ಸರಣಿ ಆರಂಭವಾಗಲಿದೆ. ಮೂರು ಏಕದಿನ ಪಂದ್ಯಗಳ ಬಳಿಕ ಮೂರು ಟಿ20 ಪಂದ್ಯಗಳು ನಡೆಯಲಿದೆ. ಭಾರತ ತಂಡವನ್ನು ಶಿಖರ್ ಧವನ್ ಮುನ್ನಡೆಸಿದರೆ, ಲಂಕಾ ತಂಡವನ್ನು ಆಲ್ ರೌಂಡರ್ ದಸುನ್ ಶನಕಾ ಮುನ್ನಡೆಸಲಿದ್ದಾರೆ.