ನವದೆಹಲಿ : ದಿನಕಳೆದಂತೆ ಪಾಕ್ನ ಉದ್ಧಟತನ ಹಾಗೂ ಭಂಡತನ ಮುಂದುವರಿದಿದ್ದು, ಪ್ರತಿಭಟನಾ ನಿರತರಿಗೆ ಪಾಕಿಸ್ತಾನದ ಅಧಿಕಾರಿಯೊಬ್ಬ ಬೆದರಿಕೆಯ ಸನ್ನೆ ಮಾಡಿದ್ದಾನೆ. ಭಾರತೀಯ ಪ್ರವಾಸಿಗರನ್ನು ಬಲಿ ತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ.
ಈ ನಡುವೆಯೇ ಪಾಕಿಸ್ತಾನ ಸೇನೆಯ ಹಿರಿಯ ಅಧಿಕಾರಿಯೊಬ್ಬ ಲಂಡನ್ನಲ್ಲಿ ಭಾರತದ ಪರ ಪ್ರತಿಭಟನೆ ನಡೆಸುತ್ತಿದ್ದವರ ಕಡೆಗೆ ಸನ್ನೆ ಮಾಡಿ ಕತ್ತು ಸೀಳುವ ಬೆದರಿಕೆ ಹಾಕಿದ್ದಾನೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಲಂಡನ್ನಲ್ಲಿರುವ ಪಾಕಿಸ್ತಾನ ಹೈಕಮಿಷನ್ ಹೊರಗೆ ಬೃಹತ್ ಸಂಖ್ಯೆಯಲ್ಲಿ ಭಾರತೀಯ ಸಮುದಾಯದ ಜನರು ಪ್ರತಿಭಟನೆ ನಡೆಸುತ್ತಿದ್ದಾಗ ಈ ಸನ್ನೆಯನ್ನು ಆತ ತೋರಿಸುವ ಮೂಲಕ ಹುಂಬತನ ಮೆರೆದಿದ್ದಾನೆ.
ಪಾಕ್ಗೆ ತಕ್ಕ ಪಾಠ ಕಲಿಸಿ..
ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಪಾಕಿಸ್ತಾನದ ರಾಯಭಾರ ಕಚೇರಿಯ ಹೊರಗೆ 1000 ಕ್ಕೂ ಹೆಚ್ಚು ಬ್ರಿಟಿಷ್ ಹಿಂದೂಗಳು ಪ್ರತಿಭಟನೆ ನಡೆಸಿದ್ದರು. ಭಾರತೀಯ ಸಮುದಾಯದ ಈ ಎಲ್ಲ ಸದಸ್ಯರು ಭಾರತದ ಧ್ವಜಗಳು, ಬ್ಯಾನರ್ಗಳು ಮತ್ತು ಭಾರತದ ಪರ ಫಲಕಗಳನ್ನು ಹಿಡಿದುಕೊಂಡು ಅಮಾಯಕ ಜೀವಗಳ ಬಲಿಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದರು. ಭಯೋತ್ಪಾದಕ ಗುಂಪುಗಳಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೆ ಉಗ್ರವಾದವನ್ನು ಕಟುವಾಗಿ ಖಂಡಿಸಿದ್ದರು.
ಭಾರತೀಯರನ್ನು ಕೆರಳಿಸಿದ್ದ ಪಾಕ್ ಅಧಿಕಾರಿ..!
ಅಲ್ಲದೆ ಎಲ್ಲ ಹೋರಾಟಗಾರರು ದುಖಃದಲ್ಲಿ ಇರುವಾಗ ಪಾಕಿಸ್ತಾನಿ ಹೈಕಮಿಷನ್ ಜೋರಾಗಿ ಹಾಡುಗಳನ್ನು ಕೇಳುತ್ತಾ, ಭಾರತೀಯರ ವಿರುದ್ಧ ಹೇಳಿಕೆಗಳನ್ನು ನೀಡಿದ್ದಾನೆ. ಮಹಡಿ ಮೇಲೆ ನಗುತ್ತಲೇ ನಿಂತು ಭಾರತೀಯರ ಮುಂದೆ ದುರಹಂಕಾರ ತೋರಿದ್ದಾನೆ. ಅಲ್ಲದೆ ಆತ ಭಾರತೀಯರ ಸಹನೆಯನ್ನು ಪರೀಕ್ಷೆ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿ ಹೋರಾಟಗಾರರಿಗೆ ಅವಮಾನಿಸಿದ್ದಾನೆ. ಆತನ ಕಿವುಡ ವರ್ತನೆಯು ನಮ್ಮನ್ನು ಇನ್ನಷ್ಟು ಕೆರಳಿಸಿತ್ತು. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ಕೆಲಸವಾಗಬೇಕಿದೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ನಮ್ಮ ನೋವಿನ ಹೋರಾಟ ಸಂಭ್ರಮಿಸಿದ್ದಾನೆ..
ನಾವು ನೋವಿನಲ್ಲಿದ್ದರೆ ಅವನು ನಮ್ಮ ಮುಂದೆಯೇ ಸಂಭ್ರಮಿಸಿದ್ದಾನೆ ಎಂದು ಹೋರಾಟಗಾರರು ವಾಗ್ದಾಳಿ ನಡೆಸಿದ್ದಾರೆ. ಭಾರತದ ಒಂದೊಂದು ನಿರ್ಧಾರಕ್ಕೂ ದಿನಕಳೆದಂತೆಲ್ಲ ಬೆಚ್ಚಿ ಬೀಳುತ್ತಿರುವ ಪಾಕಿಸ್ತಾನದ ನಾಯಕರು ಭಾರತದ ಯುದ್ಧಕ್ಕೂ ಮೊದಲೇ ಹೆದರುತ್ತಿದ್ದಾರೆ. ಅಲ್ಲದೆ ತಾನೇ ಭಾರತವನ್ನು ಕೆರಳಿಸುವಂತೆ ಮಾಡುತ್ತಿದೆ. ಆದರೆ ಸಾರ್ವಜನಿಕವಾಗಿಯೇ ಹೋರಾಟಗಾರರಿಗೆ ಕತ್ತು ಸೀಳುವ ಸನ್ನೇ ತೋರಿಸುವ ಮೂಲಕ ಪಾಕ್ ಸೇನಾ ಅಧಿಕಾರಿ ಅಪಾಯಕ್ಕೆ ಆಹ್ವಾನ ಮಾಡಿಕೊಂಡಂತಾಗಿದೆ. ಈಗಾಗಲೇ ಪಾಕಿಸ್ತಾನವನ್ನು ಬಗ್ಗು ಬಡಿಯಲು ಭಾರತವು ಆಪರೇಷನ್ ಆಕ್ರಮಣ್ ಕಾರ್ಯಾಚರಣೆ ಮುಂದುವರೆಸಿದೆ.