ಧಾರವಾಡ : ಜಿಲ್ಲೆಯ ಆರ್.ಎನ್ ಶೆಟ್ಟಿ ಮೈದಾನದ ಬಳಿ ಇರುವ ಕಛೇರಿಯಲ್ಲಿ ನಿವೃತ್ತ ಶಿಕ್ಷಕರಿಂದ ಲಂಚ ಪಡೆಯುತ್ತಿದ್ದ ವೇಳೆ ಡಿಡಿಪಿಯು ಅಧಿಕಾರಿಗಳು ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಶಿಕ್ಷಣ ನೀಡಿ ಮಕ್ಕಳಿಗೆ ಒಳ್ಳೆಯ ಭವಿಷ್ಯ ನೀಡುವ ನಿಸ್ವಾರ್ಥ ನಿವೃತ್ತ ಶಿಕ್ಷಕರ ಪಿಂಚಣಿ ಹಣವನ್ನು ನೀಡಲು ಡಿಡಿಪಿಯು ಅಧಿಕಾರಿಗಳು ಶಿಕ್ಷಕರಿಂದ 15 ಸಾವಿರ ರೂಗಳ ಲಂಚಕ್ಕೆ ಬೇಡಿಕೆ ಇಟ್ಟಿರುತ್ತಾರೆ ಅದರಂತೆ ಲಂಚ ನೀಡಲು ಮುಂದಾದ ನಿವೃತ್ತ ಶಿಕ್ಷಕರಾದ ಸುಭಾಷ್ ಜವರೆಡ್ಡಿ ಎನ್ನುವ ನಿವೃತ್ತ ಶಿಕ್ಷಕರಿಗೆ ಸೆಕ್ಷನ್ ಆಫೀಸರ್ ದುರ್ಗಾದಾಸ್ ಮಸೂತಿ ಮತ್ತು ನಾಗರಾಜ್ ಹೂಗಾರ್ ಎಫ್.ಡಿ.ಎ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿರುತ್ತಾರೆ .
ಮಾಹಿತಿ ತಿಳಿದುಕೊಂಡ ಲೋಕಾಯುಕ್ತ ಅಧಿಕಾರಿಗಳು ನಿವೃತ್ತ ಶಿಕ್ಷಕರಿಂದ ಲಂಚ ಪಡೆಯುವ ವೇಳೆ ಎಸ್ ಪಿ ಸತೀಶ್ ಚಿಟಗುಪ್ಪಿ ನೇತೃತ್ವದ ಅಧಿಕಾರಿಗಳು ತಂಡ ಲಂಚ ಪಡೆಯುತ್ತಿದ್ದ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ.

