Friday, May 17, 2024

Latest Posts

ಮುಸ್ಲಿಂ ಸಮುದಾಯದ ಬಗ್ಗೆ ಪ್ರಧಾನಿ ಸಹಾನುಭೂತಿ!

- Advertisement -

National news :

ದೆಹಲಿಯಲ್ಲಿ ನಡೆದ ಎರಡು ದಿನಗಳ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ಮೋದಿ ಮುಸ್ಲಿಂ ಸಮುದಾಯದದ ಬಗ್ಗೆ ಯಾವುದೇ ಅವಹೇಳನಕಾರಿ ಹೇಳಿಕೆಯನ್ನ ನೀಡಬಾರದು ಎಂದು ಖಡಕ್ ಸೂಚನೆ ನೀಡಿದ್ದಾರೆ. ಮುಸ್ಲಿಂ ಸಮುದಾಯದವರು ನಮ್ಮವರೇ, ಅವರ ಬಗ್ಗೆ ನಮ್ಮಲ್ಲಿ ಸಹಾನೂಭೂತಿ ಇರಬೇಕು ಎಂದು ಹೇಳುವ ಮೂಲಕ ಪ್ರಧಾನಿ ಮುಸ್ಲಿಂ ಸಮುದಾಯದ ಮತಗಳನ್ನು ಪಡೆಯಲು ರಣತಂತ್ರ ಹೆಣೆದಿದ್ದಾರೆ. ಈ ಹಿಂದೆ ಹೈದರಾಬಾದ್‌ನ ಕಾರ್ಯಕಾರಿಣಿ ಸಭೆಯಲ್ಲಿಯೂ ಪ್ರಧಾನಿ ಇದೇ ಮಾತನ್ನ ಹೇಳಿದ್ರು, ಈ ಮಾತಿಂದ ಬಿಜೆಪಿ ತೆಕ್ಕೆಗೆ ಒಂದಷ್ಟು ಮುಸ್ಲಿಂ ಸಮುದಾಯದವರ ಮತ ಬಂದ ಉದಾಹರಣೆಯೂ ಇದೆ. ಹೀಗಾಗಿ ಮುಸ್ಲಿಂ ಸಮುದಾಯದವರನ್ನು ಕೂಡ ತಮ್ಮ ಬೆಂಬಲಕ್ಕೆ ಪಡೆಯಲು ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ಮೋದಿ ಮುಸ್ಲಿಂ ಸಮುದಾಯದ ಬಗ್ಗೆ ಸಾಫ್ಟ್ ಕಾರ್ನರ್ ತೋರಿದ್ದಾರೆ. ಇದರಿಂದ ಬಿಜೆಪಿಯ ಹಲವು ನಾಯಕರಲ್ಲಿ ಗೊಂದಲ ಸೃಷ್ಟಿಯಾಗಿದೆ.

ಎಂದಿಗೂ RSS ಸಿದ್ಧಾಂತವನ್ನು ಒಪ್ಪಿಕೊಳ್ಳಲ್ಲ: ರಾಹುಲ್ ಗಾಂಧಿ

 

ಜಿ.ಪಿ ನಡ್ಡಾ ಅಧಿಕಾರವಧಿ ವಿಸ್ತರಣೆ?

ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ವಿರುದ್ಧ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ

- Advertisement -

Latest Posts

Don't Miss