Banglore News : ಪೋಷಕರ ಮೇಲಿನ ದ್ವೇಷಕ್ಕೆ ಅವರ ಮಕ್ಕಳಿಗೆ ವಿಷ ಉಣಿಸಿದ ಪ್ರಕರಣ ಬೆಂಗಳೂರಿನ ದೇವನಹಳ್ಳಿ ತಾಲೂಕಿನ ದೊಡ್ಡಸಣ್ಣೆ ಗ್ರಾಮದಲ್ಲಿ ನಡೆದಿದೆ. ಇತ್ತೀಚೆಗೆ ನಡೆದ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಸೇಡಿನಿಂದ ಕೃತ್ಯವೆಸಗಲಾಗಿದೆ ಎಂದು ಶಂಕಿಸಲಾಗಿದೆ. ಸದ್ಯ ಮಾನಸ ಆಸ್ಪತ್ರೆಯಲ್ಲಿ ಹೆಣ್ಣುಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ದೊಡ್ಡಸಣ್ಣೆ ಗ್ರಾಮದ ಅಶೋಕ್ ಮತ್ತು ಶಿಲ್ಪಾ ದಂಪತಿ ಆಗಸ್ಟ್ 2ರಂದು ಬೆಳಗ್ಗೆ ಕೆಲಸಕ್ಕೆ ತಮ್ಮ ಹೂತೋಟಕ್ಕೆ ತೆರಳಿದ್ದಾರೆ. ಪೋಷಕರು ತೋಟದ ಕಡೆ ತೆರಳುತ್ತಿದ್ದಂತೆ ಮನೆಗೆ ನುಗ್ಗಿದ ಕಿಡಿಗೇಡಿಗಳು ಮನೆಯಲ್ಲಿದ್ದ ಮಕ್ಕಳಾದ ಪಲ್ಲವಿಯನ್ನ ಹೆದರಿಸಿ ವಿಷದ ಬಾಟಲ್ ಕುಡಿಸಿ ಅಲ್ಲಿಂದ ಹೋಗಿದ್ದಾರೆ.
ಘಟನೆಯಿಂದಲೇ ಆತಂಕಕ್ಕೀಡಾಗಿದ್ದ ದಂಪತಿಗಳು ಚೇತರಿಸಿಕೊಳ್ಳುವ ಮುನ್ನ ಇಂದು ಅಂದರೆ ಆಗಸ್ಟ್ 3 ರಂದು ಬೆಳಗ್ಗೆ ಮತ್ತೆ ಬಂದ ಕಿಡಿಗೇಡಿಗಳು ಪಕ್ಕದ ಮನೆಯ ಪಲ್ಲವಿಯ ಚಿಕ್ಕಪ್ಪನ ಮಗಳಾದ ಅನುಷಾಳಿಗೂ ಇದೇ ರೀತಿ ಹೆದರಿಸಿ ವಿಷ ಕುಡಿಸಿದ್ದು ನಂತರ ಮನೆಯಿಂದ ಕಾಲ್ಕಿತ್ತಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.
Dr K Sudhakar : ರೈತರಿಗೆ ಸರ್ಕಾರ ಅನ್ಯಾಯ ಮಾಡಿದೆ : ಡಾ.ಕೆ.ಸುಧಾಕರ್…!