Chithradurga News:
ಇಬ್ಬರು ಅಪ್ರಾಪ್ತರ ಮೇಲೆ ಲೈಂಗಿಕ ಆರೋಪದ ಹಿನ್ನಲೆ ಮುರುಘ ಮಠದ ಶ್ರೀಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇನ್ನು ಅರೆಸ್ಟ್ ಆಗಿರೋ ಶ್ರೀಗಳನ್ನು ವಿಚಾರಣೆ ಕೂಡಾ ನಡೆಯುತ್ತಿವೆ. ಡಿವೈಎಸ್ ಪಿ ಕಛೇರಿಯಲ್ಲಿಯೇ ಇರುವ ಶ್ರೀಗಳಿಗೆ ಪೊಲೀಸರು ಪ್ರಶ್ನೆಗಳ ಸುರಿಮಳೆಯನ್ನೇ ಕೇಳುತ್ತಿದ್ದಾರೆ. ಪ್ರತಿಯೊಂದು ಪ್ರಶ್ನೆಗಳಿಗೂ ಶ್ರೀಗಳು ಮಾತ್ರ ತುಟಿ ಬಿಚ್ಚುತ್ತಿಲ್ಲ. ಏನೆ ಪ್ರಶ್ನೆ ಕೇಳಿದರೂ ಶ್ರೀಗಳು ಮೌನ ತಾಳಿದ್ದಾರೆ. ಈ ಕಾರಣದಿಂದಾಗಿ ಪೊಲೀಸರಿಗೆ ವಿಚಾರಣೆ ದೊಡ್ಡ ಸವಾಲಾಗಿ ನಿಂತಿವೆ. ಡಿವೈಎಸ್ ಪಿ ಅನಿಲ್ ಕುಮಾರ್ ಹಾಗು ಎಸ್ ಪಿ ಪರಶುರಾಮ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ. 2 ಗಂಟೆಗಳ ವರೆಗೆ ವಿಚಾರಣೆಗೆ ಒಳಪಡಿಸಲಾಗಿತ್ತು.
ಶ್ರೀಗಳಿಗೆ ಪ್ರಶ್ನೆ ಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಪೊಲೀಸರು ಶ್ರೀಗಳಿಗೆ ಹಾಸ್ಟೆಲ್ ಗಳು ಯಾವ್ಯಾವ ಕಡೆ ಇದೆ? ಯಾವ ರೀತಿ ರಕ್ಷಣೆ ನೀಡಲಾಗುತ್ತಿದೆ..? ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಅನುಮತಿಗಳಿವೆಯೇ ಎಷ್ಟು ಮಕ್ಕಳಿದ್ದಾರೆ ಎಂಬ ಹತ್ತು ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಈ ಪ್ರಶ್ನೆಗಳಿಗೆಲ್ಲ ಮೌನವೇ ಶ್ರೀ ಗಳ ಉತ್ತರವಾಗಿದೆ.
ಉತ್ತರ ನೀಡಲು ಶ್ರೀಗಳು ಹಿಂದೇಟು…! ಪೊಲಿಸರಿಗೆ ಸವಾಲಾಗಿದೆ ಶ್ರೀಗಳ ವಿಚಾರಣೆ..!
ನಾಚಿಕೆ ಆಗಲ್ವಾ ನಿನಗೆ..? ಎಂದು ಮಹಿಳೆಗೆ ಅವಾಜ್ ಹಾಕಿದ ಶಾಸಕ ಅರವಿಂದ ಲಿಂಬಾವಳಿ..!
“ಮತ್ತದೇ ಹಳೇ ಕ್ಯಾಸೆಟ್, ಆತ್ಮವಂಚನೆಯ ಮಾತುಗಳು”: ಮೋದಿ ಭಾಷಣಕ್ಕೆ ಕಾಂಗ್ರೆಸ್ ಲೇವಡಿ