Sunday, June 22, 2025

Latest Posts

ಮಹಿಳೆಯರ ಸಬಲೀಕರಣಕ್ಕೆ ಪುಟ್ಟಸ್ವಾಮಿಗೌಡ ಪಣ.!

- Advertisement -

Political News:

Feb:24: ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಅಖಾಡ ರಂಗೇರ್ತಿದೆ. ವಿಶೇಷವಾಗಿ ಗೌರಿಬಿದನೂರಿನ ಪಕ್ಷೇತರ ಅಭ್ಯರ್ಥಿ ಆಗಿರೋ ಕೆ.ಹೆಚ್. ಪುಟ್ಟಸ್ವಾಮಿಗೌಡರ ಇಡೀ ಕ್ಷೇತ್ರಾದ್ಯಂತ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡು, ಅಬ್ಬರದ ಪ್ರಚಾರವನ್ನೂ ಮಾಡ್ತಿದ್ದಾರೆ. ಜೊತೆ ಶ್ರೀನಿವಾಸ ಕಲ್ಯಾಣದಂತಹ ಕಾರ್ಯಕ್ರಮ ಹಾಗೂ ಮಹಿಳೆಯರಿಗೆ ಉಚಿತ ಟೈಲರಿಂಗ್ ಯಂತ್ರಗಳನ್ನ ನೀಡುವಂತಹ ಸಾಮಾಜಿಕ ಸೇವೆ ಮಾಡ್ತಿದ್ದಾರೆ.

ಗೌರಿಬಿದನೂರು ಕ್ಷೇತ್ರದಲ್ಲಿ ಚುನಾವಣೆ ಈ ಬಾರಿ ರೋಚಕತೆಯಿಂದ ಕೂಡಿರಲಿದೆ. ಕಾಂಗ್ರೆಸ್ ಶಾಸಕ ಶಿವಶಂಕರ್ ರೆಡ್ಡಿಗೆ ಸೋಲಿನ ರುಚಿ ತೋರಿಸೋಕೆ ಪಕ್ಷೇತರ ಅಭ್ಯರ್ಥಿ ಕೆ.ಹೆಚ್. ಪುಟ್ಟಸ್ವಾಮಿಗೌಡರು ತಯಾರಿ ನಡೆಸಿದ್ದಾರೆ. ಹಲವು ಕಾರ್ಯಕ್ರಮಗಳನ್ನ ಕ್ಷೇತ್ರದಲ್ಲಿ ಹಮ್ಮಿಕೊಂಡಿರೋ ಪುಟ್ಟಸ್ವಾಮಿಗೌಡರು, ಚುನಾವಣಾ ಕಣದಲ್ಲಿ ಅಬ್ಬರ ಎಬ್ಬಿಸಿದ್ದಾರೆ. ಇದೇ ಮಾರ್ಚ್ 4ರಂದು ಗೌರಿಬಿದನೂರು ನಗರದ ಹೊರವಲಯದ ಬೈಪಾಸ್ ಬಳಿಯಿರುವ ಗೊಟಕನಾಪುರದ ದೇವರಾಜ್ ರವರ ಜಮೀನಿನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ಕಾರ್ಯಕ್ರಮ ನಡೆಯಲಿದೆ. ಕೆ.ಹೆಚ್.ಪಿ ಫೌಂಡೇಷನ್ ವತಿಯಿಂದ ನಡೆಯಲಿರುವ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಭೂಮಿ ಪೂಜೆ ಮಾಡಿ, ಚಾಲನೆ ನೀಡಲಾಗಿದೆ.

ಧಾರ್ಮಿಕ ಕಾರ್ಯಕ್ರಮಗಳ ಜೊತೆ ಸಾಮಾಜಿಕ ಕಾರ್ಯದಲ್ಲು ತೊಡಗಿಸಿಕೊಂಡಿರೋ ಪುಟ್ಟಸ್ವಾಮಿಗೌಡರು, ಗೌರಿಬಿದನೂರು ಕ್ಷೇತ್ರದ ಹಳ್ಳಿಗಳಿಗೆ ಶುದ್ಧ ಕುಡಿಯುನ ನೀರಿನ ಘಟಕಗಳನ್ನ ಹಾಕಿಸ್ತಿದ್ದಾರೆ. ಆರೋಗ್ಯದಲ್ಲಿ ಶುದ್ಧ ಕುಡಿಯುವ ನೀರು ಸಹ ಬಹು ಮುಖ್ಯವಾದ ಪಾತ್ರ ವಹಿಸುತ್ತೆ. ಹೀಗಾಗಿ, ಜನಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ ಗೌರಿಬಿದನೂರು ವಿಧಾನಸಭಾ ಕ್ಷೇತ್ರ ಹೊಸೂರು ಹೋಬಳಿ ಸೊನಗಾನಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪುಟ್ಟಸ್ವಾಮಿಗೌಡರ ಜೊತೆ ಕೆ ಹೆಚ್ ಪಿ ಬಣದ ಮುಖಂಡರು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು, ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು .

ಮತ್ತೊಂದೆಡೆ ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ತಾಲ್ಲೂಕಿನಾದ್ಯಂತ ಮಹಿಳೆಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಟೈಲರಿಂಗ್ ಹಾಗೂ ಕಂಪ್ಯೂಟರ್ ತರಬೇತಿ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಮೂರನೇ ಹಂತವಾಗಿ ಗೌರಿಬಿದನೂರು ನಗರ ನದಿ ಗಡ್ಡೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಾoಗಣದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಟೈಲರಿಂಗ್ ತರಬೇತಿ ಪಡೆದ ಮಹಿಳೆಯರಿಗೆ ಟೈಲರಿಂಗ್ ಯಂತ್ರ ಹಾಗೂ ಕಂಪ್ಯೂಟರ್ ತರಬೇತಿ ಪಡೆದ ವಿಧ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಹಾಗೂ ಗೌರಿಬಿದನೂರು ತಾಲ್ಲೂಕು ಟೈಲರ್ ಕ್ಷೇಮ ಅಭಿವೃದ್ಧಿ ಸಂಘದ ಸದಸ್ಯತ್ವ ಹೊಂದಿರುವ 500 ಜನರಿಗೆ ಹೊಲಿಗೆ ಮೋಟಾರ್ ವಿತರಣೆ ಮಾಡಲಾಯಿತು.

ಒಟ್ನಲ್ಲಿ ಗೆದ್ದೇ ಗೆಲ್ಲುವ ವಿಶ್ವಾಸದೊಂದಿಗೆ ಇರೋ ಪುಟ್ಟಸ್ವಾಮಿಗೌಡರು, ಗೌರಿಬಿದನೂರು ಕ್ಷೇತ್ರದಲ್ಲಿ ಸಮಾಜಸೇವೆ ಮಾಡ್ತಿದ್ದು, ಜನರ ಜೊತೆ ಇರ್ತೇನೆ.. ಈ ಬಾರಿ ನನಗೆ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡ್ತಿದ್ದಾರೆ.. ಗೌರಿಬಿದನೂರು ಕ್ಷೇತ್ರದ ಜನ ಕೂಡ ಬದಲಾವಣೆ ನಿರೀಕ್ಷೆಯಲ್ಲಿದ್ದು, ಪುಟ್ಟಸ್ವಾಮಿಗೌಡರನ್ನ ಗೆಲ್ಲಿಸ್ತೇವೆ ಎಂಬ ಭರವಸೆ ನೀಡ್ತಿದ್ದಾರೆ..

ಪೊಲಿಟಿಕಲ್ ಬ್ಯೂರೋ, ಕರ್ನಾಟಕ ಟಿವಿ, ಗೌರಿಬಿದನೂರು..

ಶೀಘ್ರವೇ ಕಾಂಗ್ರೆಸ್ ಸೇರಲಿರೋ ಶಾಸಕ ಶ್ರೀನಿವಾಸ್..!

ಎಎಪಿ ಅಭ್ಯರ್ಥಿ ಆಗಿರೋ ಆನೇಕಲ್ ದೊಡ್ಡಯ್ಯಗೆ ಜನರೇ ನೀಡಿದ್ರು ಭರ್ಜರಿ ಗಿಫ್ಟ್…!

ಹಾಸನದಲ್ಲಿ ಚುನಾವಣಾ ಪ್ರಚಾರಕ್ಕೆ ಇಳಿದ ರೇವಣ್ಣ ಕುಟುಂಬ

- Advertisement -

Latest Posts

Don't Miss