Tuesday, April 15, 2025

Latest Posts

Pradeep Shetter: ಲಿಂಗಾಯತ ನಾಯಕರನ್ನು ಬಿಜೆಪಿಯಲ್ಲಿ ತುಳಿಯುತ್ತಿದ್ದಾರೆ..!

- Advertisement -

ಹುಬ್ಬಳ್ಳಿ: ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ. ಪಕ್ಷ ನಿಷ್ಠೆ ಬಿಟ್ಟು ಬಕೆಟ್ ಹಿಡಿದವರಿಗೆ ಮನ್ನಣೆ ನೀಡಲಾಗುತ್ತಿದೆ, ಇದೇ ಮೊದಲ ಬಾರಿಗೆ ಬಹಿರಂಗವಾಗಿ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು,ರಾಜ್ಯದಲ್ಲಿ ಲಿಂಗಾಯತರಿಗೆ ನಾಯಕತ್ವ ಕೊಡಬೇಕು, ಲಿಂಗಾಯತ ನಾಯಕರನ್ನು ತುಳಿದಿದ್ದೆ ವಿಧಾನಸಭಾ ಚುನಾವಣೆ ಸೋಲಿಗೆ ಕಾರಣ.ಮಾಜಿ ಸಚಿವರಾದ ಮುನೇನಕೊಪ್ಪ,ಮಾಧುಸ್ವಾಮಿ, ರೇಣುಕಾಚಾರ್ಯ,ಮಾಜಿ ಶಾಸಕ ಚಿಕ್ಕನಗೌಡರು ಇದೀಗ ಅನೇಕ ಲಿಂಗಾಯತ ನಾಯಕರು ಒಂದು ಕಾಲು ಪಕ್ಷದಿಂದ ಹೊರಗಡೆ ಇಟ್ಟಿದ್ದಾರೆ ಎಂದರು.

ಇನ್ನೂ ನಾನು ವಿಧಾನಪರಿಷತ್ ಸದಸ್ಯ ಇದ್ರೂ ಕೆಲ ಕಾರ್ಯಕ್ರಮಗಳಿಗೆ ಕಡೆಗಣನೆ ಮಾಡಿದ್ದಾರೆ. ಗ್ರಾಪ‌ಂ‌ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮಗಳಿಗೆ ನನ್ನನ್ನು ಕರೆದಿಲ್ಲ. ಇದೊಂದೇ ಕಾರ್ಯಕ್ರಮ ಅಲ್ಲ ನಾಲ್ಕೈದು ಕಾರ್ಯಕ್ರಮಕ್ಕೆ ಕಡೆಗಣನೆ ಮಾಡಿದ್ದಾರೆ ಇದು ಸಹಜ ನನಗೆ ಬೇಸರವಾಗಿದೆ.ಯಾಕೆ ಹೀಗೆ ಆಗ್ತಿದೆ ಅನ್ನೋದು ಅರ್ಥ ಆಗತಿಲ್ಲ. ಆದ್ರೆ ವೀರಶೈವ ಲಿಂಗಾಯತ ನಾಯಕರಿಗೆ ನಾಯಕತ್ವ ಕೊಟ್ರೆ ಮಾತ್ರ ಬಿಜೆಪಿ ಗೆಲ್ಲಲು‌ ಸಾಧ್ಯ.

ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ವೀರಶೈವ ಲಿಂಗಾಯತರಿಗೆ ಕೊಡಬೇಕು. ನಾನು ಪಕ್ಷ ಬಿಟ್ಟು ಹೋಗಲ್ಲ ಲಿಂಗಾಯತ ನಾಯಕರಿಗೆ ಆಗ್ತಿರೋ ಬಗ್ಗೆ ರಾಷ್ಟ್ರೀಯ ನಾಯಕರ ಗಮನಕ್ಕೆ ತರ್ತೀನಿ
ಅನೇಕ ಕಾಂಗ್ರೆಸ್ನ ದೊಡ್ಡ ನಾಯಕರು ನನ್ನ ಸಂಪರ್ಕ ಮಾಡಿದ್ದಾರೆ. ಜಗದೀಶ್ ಶೆಟ್ಟರ್ ಬಿಜೆಪಿ ತೊರೆದಿದ್ದು ಸಮಸ್ಯೆ ಆಗಿದೆ ಗ್ರಾಪಂ ಅಧ್ಯಕ್ಷರಿಂದಲೇ ಆಯ್ಕೆಯಾಗಿದ್ದು ಪಕ್ಷದಲ್ಲಿ ಹೇಳೋರ ಇಲ್ಲ, ಕೇಳೋರ ಇಲ್ಲದಂತಾಗಿದೆ. ಪಕ್ಷದಲ್ಲಿ ನಾಯಕತ್ವದ ಕೊರತೆ ಇದೆ ನನನ್ನು ಪಕ್ಷದವರು ಅವೈಡ್ ಮಾಡಿದ್ದಾರೆ ಬಿಜೆಪಿಯಲ್ಲಿ ಲಿಂಗಾಯತ ನಾಯಕರೇ ಇಲ್ಲ. ಬಿಜೆಪಿ ಲಿಂಗಾಯತ ನಾಯಕರನ್ನು ತುಳಿಯುತ್ತಿದ್ದಾರೆ.ಇದನ್ನು ನಾನು ಒಪ್ಕೋತಿನಿ, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ರು. ಬಿಜೆಪಿಯಲ್ಲಿ ಇರೋದೆ ಅಲ್ಪ ಸ್ವಲ್ಪ ಲಿಂಗಾಯತ ನಾಯಕರು. ಅವರನ್ನು ಅವೈಡ್ ಮಾಡಿದ್ರೆ ಬಿಜೆಪಿ ಕೆಟ್ಟ ಸ್ಥಿತಿಗೆ ಹೋಗುತ್ತೆ
ರಾಜ್ಯದ ಬಿಜೆಪಿ ಉಸ್ತುವಾರಿಗಳು ಬದಲಾಗಬೇಕೆಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

Law: ಒಂದು ರಾಷ್ಟ್ರ, ಒಂದು ಕಾನೂನಿನಲ್ಲಿ ಸಾಕಷ್ಟು ಅನುಮಾನ- ಕಾನೂನು ಸಚಿವ ಎಚ್ ಕೆ ಪಾಟೀಲ್

Sonia Gandhi: ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು ಆಸ್ಪತ್ರೆಗೆ ದಾಖಲು..!

- Advertisement -

Latest Posts

Don't Miss