- Advertisement -
Manglore News:
ಪ್ರವೀಣ್ ನೆಟ್ಟಾರ್ ಹಂತಕರಿಬ್ಬರ ಸುಳಿವು ಇದೀಗ ಎನ್ಐಎ ಗೆ ದೊರೆತ ಹಿನ್ನಲೆ ಆರೋಪಿಗಳು ವಿದೇಶದಲ್ಲಿರುವುದು ಖಚಿತವಾಗಿದೆ. ಎನ್ಐಎಗೆ ಸುಳಿವು ದೊರೆತ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿದ ತಂಡ ಇಬ್ಬರನ್ನು ವಶಕ್ಕೆ ಪಡೆದಿದೆ. ಈ ಇಬ್ಬರು ಆರೋಪಿಗಳನ್ನು ಭಾರತಕ್ಕೆ ಕರೆ ತರುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ.
ಒಟ್ಟು ಆರು ಮಂದಿ ಆರೋಪಿಗಳು ವಿದೇಶಕ್ಕೆ ಪರಾರಿಯಾಗಿದ್ದು, ಈ ಪೈಕಿ ಐವರನ್ನು ಎನ್ಐಎ ಈಗಾಗಲೇ ವಶಕ್ಕೆ ಪಡೆದಿದೆ ಎನ್ನಲಾಗುತ್ತಿದೆ. ಆದರೆ ಇವರೆಲ್ಲರನ್ನು ವಿದೇಶದಿಂದಲೇ ಪತ್ತೆ ಹಚ್ಚಿ ವಶಕ್ಕೆ ಪಡೆದರೆ ಅಥವಾ ಭಾರತದಲ್ಲೇ ವಶಕ್ಕೆ ಪಡೆದರೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಶರೀಫ್ ಮತ್ತು ಕೆ.ಎ. ಮಸೂದ್ ಸೌದಿಯಲ್ಲಿ ಅಡಗಿರುವ ಸುಳಿವು ಎನ್ಐಎಗೆ ಲಭ್ಯವಾಗಿದೆ. ಅವರನ್ನು ಪತ್ತೆ ಹಚ್ಚಿ ಭಾರತಕ್ಕೆ ಕರೆ ತರುವ ಪ್ರಯತ್ನಗಳು ನಡೆಯುತ್ತಿವೆ. ಇನ್ನೂ ಒಬ್ಬ ಆರೋಪಿ ಪತ್ತೆಯಾಗಬೇಕಿದೆ.
- Advertisement -