ರಾಜ್ಯಸಭೆ ಚುನಾವಣೆ ಮುಗಿಯುತ್ತಿದ್ದಂತೆಯೇ ಮುಂದಿನ ತಿಂಗಳು ರಾಷ್ಟ್ರಪತಿ ಚುನಾವಣೆ ಎದುರಾಗಲಿದೆ. ಚುನಾವಣಾ ಆಯೋಗವು ರಾಷ್ಟ್ರಪತಿ ಚುನಾವಣೆಗೆ ಗುರುವಾರ ವೇಳಾಪಟ್ಟಿ ಪಕ್ರಟಿಸಿದ್ದು, ಜುಲೈ 18ರಂದು ಚುನಾವಣೆ ನಡೆಯಲಿದೆ. ಹಾಗೂ ಜುಲೈ 21ಕ್ಕೆ ಫಲಿತಾಂಶ ಹೊರಬೀಳಲಿದ್ದು, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅಧಿಕಾರವಧಿ ಜುಲೈ 24ಕ್ಕೆ ಕೊನೆಯಾಗಲಿದೆ. ಜುಲೈ 25 ರಂದು ನೂತನ ರಾಷ್ಟ್ರಪತಿ ಅಧಿಕಾರ ಸ್ವೀಕರಿಸಲಿದ್ದಾರೆ.
ರಾಜ್ಯಸಭೆ ಮತ್ತು ಲೋಕಸಭೆಯ ಸಂಸದರು, ಕೇಂದ್ರಾಡಳಿತ ಪ್ರದೇಶ, ಎಲ್ಲ ರಾಜ್ಯಗಳ ವಿಧಾನಸಭೆಯ ಸದಸ್ಯರು ಸೇರಿ ಒಟ್ಟು 4,809 ಸದಸ್ಯರಿಂದ ರಾಷ್ಟ್ರಪತಿ ಆಯ್ಕೆ ನಡೆಯಲಿದೆ.
ತಮ್ಮದೇ ಲೆಕ್ಕಾಚಾರದ ಮೂಲಕ ಅಚ್ಚರಿಯ ಅಭ್ಯರ್ಥಿ ಆಯ್ಕೆ ಮಾಡುವ ನರೇಂದ್ರ ಮೋದಿ ಅವರು, ಈ ಬಾರಿ ಎನ್.ಡಿ.ಎ ಯಿಂದ ಹೊಸ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಯಲ್ಲೂ ಕೂಡ ಕುತೂಹಲ ಮೂಡಿಸಿದ್ದಾರೆ. ಕಾಂಗ್ರೆಸ್, ಟಿಎಂಸಿ, ಟಿ.ಆರ್.ಎಸ್ ಸೇರಿ ತೃತೀಯ ರಂಗ ರಚನೆಗೆ ಕಸರತ್ತು ನಡೆಸುತ್ತಿರುವ ಪ್ರತಿಪಕ್ಷಗಳು ಒಬ್ಬರನ್ನು ಕಣಕ್ಕಿಳಿಸಬಹುದು.
ಎಂಬಿಬಿಎಸ್ ಅಂತಿಮ ವರ್ಷಕ್ಕೆ ಹೊಸ ಪ್ರಾಯೋಗಿಕ ಪರೀಕ್ಷೆ.
ಬೆಂಗಳೂರು: ಎಂಬಿಬಿಎಸ್ ಪದವಿಯ ಅಂತಿಮ ವರ್ಷದ 41 ವಿದ್ಯಾರ್ಥಿಗಳಿಗೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಲವು ಹೊಸದಾಗಿ
ಪ್ರಯೋಗಿಕ,ಕ್ಲಿನಿಕಲ್ ಪರೀಕ್ಷೆಯನ್ನು ನಡೆಸಲಿದೆ.
ಈ ವಿಷಯವನ್ನು ಆರ್ಜಿಯುಹೆಚ್ಎಸ್, ಹೈಕೋರ್ಟ್ ಗೆ ತಿಳಿಸಿರುವ ಹಿನ್ನೆಲೆಯಲ್ಲಿ ಸಂಯೋಜಿತ ಕಾಲೇಜುಗಳ ವಿಧ್ಯಾರ್ಥಿಗಳಿಗೆ ಈ ಹಿಂದೆ ನಡೆಸಲಾಗಿದ್ದ ಪ್ರಯೋಗಿಕ ಪರೀಕ್ಷೆಯ ಅಂಕಗಳನ್ನು ಹೈಕೋರ್ಟ್ ರದ್ದುಪಡಿಸಿದೆ.
ವಿಶ್ವವಿದ್ಯಾಲಯ ನಡೆಸಿರುವ ಪ್ರಯೋಗಿಕ ಪರೀಕ್ಷೆಯು ವಿಶ್ವವಿದ್ಯಾಲಯ ಮಾರ್ಗಸೂಚಿಗಳಿಗೆ ವಿರುದ್ದವಾಗಿದೆ ಎಂದು ರಾಯಚೂರಿನ ಬಸವರಾಜ ಇಟಗಿ ಮತ್ತು ಚಿಕ್ಕಬಳ್ಳಾಪುರದ ಜಿ.ಕೈಲಾಸ್ ಸೇರಿ ಹಲವು ವಿಧ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ, ನ್ಯಾಯ ಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ಮಾಡಿತ್ತು. ಅರ್ಜಿದಾರ ವಿಧ್ಯಾರ್ಥಿಗಳಿಗೆ ಮೂರು ವಾರದೊಳಗೆ ಹೊಸದಾಗಿ ಪ್ರಯೋಗಿಕ ಪರೀಕ್ಷೆ ನಡೆಸುವುದಾಗಿ
ಆರ್ ಜಿಯುಎಚ್ಎಸ್,ಮುಚ್ಚಳಿಕೆ ನೀಡಿದನ್ನು ಪರಿಗಣಿಸಿ ಕೋರ್ಟ್ ಈ ಆದೇಶ ಮಾಡಿದೆ.