Dehali News : ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ರಾಘವ್ ಚಡ್ಡಾಗೆ ಇತ್ತೀಚೆಗೆ ಸಂಸತ್ ಭವನದ ಹೊರಗಡೆ ಅಹಿತಕರ ಎನಿಸುವಂತೆ ಘಟನೆ ನಡೆದಿದೆ. ಮಂಗಳವಾರ ಸಂಸತ್ ಭವನದ ಹೊರಗಡೆ ಫೋನ್ನಲ್ಲಿ ಮಾತನಾಡುವ ವೇಳೆ, ಕಾಗೆಯೊಂದು ಅವರ ಮೇಲೆ ದಾಳಿ ಮಾಡಿದೆ.
ರಾಘವ್ ಚಡ್ಡಾ ಅವರ ತಲೆಗೆ ಕಾಗೆಯೊಂದು ಕುಕ್ಕಿ ಹೋಗುವ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹೆಚ್ಚಿನವರು ರಾಘವ್ ಚಡ್ಡಾಗೆ ದುರಾದೃಷ್ಟ ಆರಂಭವಾಗಿದೆ ಎನ್ನುವ ಅರ್ಥದಲ್ಲಿ ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ರಾಘವ್ ಚಡ್ಡಾ ಶೀಘ್ರವಾಗಿ ತಮಗೆ ಯಾವುದಾದರೂ ಶನಿ ದೋಷವಿದೆಯೇ ಅನ್ನೋದರ ಬಗ್ಗೆ ಜ್ಯೋತಿಷ್ಯರನ್ನು ಕೇಳುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.
ಇನ್ನು ಬಿಜೆಪಿ ದೆಹಲಿ ಈ ಚಿತ್ರವನ್ನು ಟ್ವೀಟ್ ಮಾಡಿದ್ದು, ಸುಳ್ಳುಗಾರನಿಗೆ ಕಾಗೆ ಕಚ್ಚುತ್ತದೆ ಎನ್ನುತ್ತದೆ ಎನ್ನುವ ಮಾತನ್ನು ಕೇಳಿದ್ದೆವು. ಈಗ ಅದನ್ನು ನಿಜವಾಗಿಯೂ ನೋಡಿದ್ದೇವೆ’ ಎಂದು ಟ್ವೀಟ್ ಮಾಡಿದೆ.
‘रामचन्द्र कह गए सिया से ऐसा कलयुग आएगा,
हंस चुगेगा दाना दुनका और कौवा मोती खाएगा’आज तक सिर्फ़ सुना था, आज देख भी लिया https://t.co/skKUCm4Kbs
— Raghav Chadha (@raghav_chadha) July 26, 2023
Narendra Modi : ಮೂರನೇ ಅವಧಿಯಲ್ಲಿ ಅಗ್ರಸ್ಥಾನದ ಆರ್ಥಿಕತೆ ಗ್ಯಾರಂಟಿ ಘೋಷಿಸಿದ ನಮೋ..?!
Satish jarakihole: ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ