Saturday, September 21, 2024

Latest Posts

ರಾಹುಲ್ ಗಾಂಧಿಯವರೇ ಕರ್ನಾಟಕಕ್ಕೆ ಬಂದು ಮೊಹಬ್ಬತ್‌ಕಾ ದುಕಾನ್ ನೋಡಿ: ಪ್ರಹ್ಲಾದ್ ಜೋಶಿ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ತಿರುಪತಿ ಪ್ರಸಾದದ ವಿಷಯದಲ್ಲಿ ಬಹಳ ಗಂಭೀರ ಆರೋಪ ಕೇಳಿ ಬಂದಿದೆ. ಹಿಂದಿನ ಸರ್ಕಾರ ಮೊದಲು‌ ನಂದಿನಿ ತುಪ್ಪ ಖರೀದಿ ಮಾಡ್ತೀದ್ರು. ನಂತರ ಅದನ್ನು ಬಂದ್ ಮಾಡಿದ್ರು. ನಂದಿನಯ ತುಪ್ಪ ಖರೀದಿ ಬಂದ್ ಮಾಡಿದ ಬಳಿಕ ಕೃತ್ಯ ನಡೆದಿದೆ ಅನ್ನೋ ಆರೋಪ ಕೇಳಿ ಬಂದಿದೆ ಎಂದು ಜೋಶಿ ಹೇಳಿದ್ದಾರೆ.

ಲ್ಯಾಬ್ ರಿಪೋರ್ಟ್ ಚಂದ್ರಬಾಬು ನಾಯ್ಡು ಬಿಡುಗಡೆ ಮಾಡಿದ್ದಾರೆ. ನಾಯ್ಡು ಒಳ್ಳೆಯ ಆಡಳಿತಗಾರ,ಅವರ ಹೇಳಿದ್ದಾರೆ ಅಂದ್ರೆ ಸತ್ಯ ಇರಲಬೇಕು. ಲ್ಯಾಬ್ ರಿಪೋರ್ಟ್ ಬಂದಿರೋ ಕಾರಣ ಸಮಗ್ರ ತನಿಖೆ ಆಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಅಲ್ಲಿನ ಹಿಂದಿನ ಸರ್ಕಾರ ಹಿಂದೂ ವಿರೋಧಿ ಕೆಲಸ ಮಾಡಿದೆ. ಕಾಂಗ್ರೆಸ್ ಕೂಡಾ ಇಡೀ ದೇಶದಲ್ಲಿ ಹಿಂದೂ ವಿರೋಧಿ ಕೆಲಸ ಮಾಡ್ತಿದೆ. ಇದನ್ನು ನಾವು ತಾರ್ಕಿಕ ಅಂತ್ಯಕ್ಕೆ ತಗೆದುಕೊಂಡು ಹೋಗ್ತೀವಿ. ಎಲ್ಲ ಕಡೆಯೂ ಜನರ ಶ್ರದ್ದೆಗೆ ಧಕ್ಕೆ ತರೋ ಕೆಲಸ ಮಾಡಬಾರದು. ಎಲ್ಲ ಕಡೆಯೋ ಪ್ರಸಾದವನ್ನು ಕಾಲ ಕಾಲಕ್ಕೆ ತಪಾಸಣೆ ಮಾಡಬೇಕು ಎಂದು ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.

ಕರ್ನಾಟಕದಲ್ಲಿ 100 ಪರ್ಸೆಂಟ್ ದ್ವೇಷದ ರಾಜಕಾರಣ ನಡೆದಿದೆ. ಎಲ್ಲರನ್ನು ಹುಡಕಿ ಹುಡಕಿ FIR ಮಾಡೋ ಕೆಲಸ ಮಾಡ್ತಿದೆ. ಕೃಷ್ಣ ಬೈರೇಗೌಡರ ಆರೋಪಕ್ಕೆ ಕುಮಾರಸ್ವಾಮಿ ವಿವರವಾಗಿ ಮಾತಾಡಿದ್ದಾರೆ‌‌. ಕುಮಾರಸ್ವಾಮಿ ಅವರು 2006-07 ರಲ್ಲಿ ಸಿಎಮ್ ಆಗಿದ್ರು.,ಯಡಿಯೂರಪ್ಪ ಅವರ ಮೇಲೆ ಆರೋಪ ಮಾಡಿದ್ದಾರೆ. ಹಾಗಾದ್ರೆ ನೀವ ಯಾಕೆ ಕುಮಾರಸ್ವಾಮಿ ಅವರನ್ನು ಕರೆದುಕೊಂಡು ಹೋಗಿ ಸಿಎಮ್ ಮಾಡಿದ್ರೀ.
ನಿಮ್ಮದೆ ಅಧಿಕಾರ ಇದ್ದಾಗ ಯಾಕೆ ಸುಮ್ಮನೆ ಇದ್ರೀ..? ಇದು ದ್ವೇಷದ ರಾಜಕಾರಣ, ಕಳ್ಳರು‌ ಅಂತಾ ಗೊತ್ತಾದಾಗ ಬೇರೆದವರು‌ ಕಳ್ಳರು ಅನ್ನೋ ಪ್ರಯತ್ನ. ರಾಹುಲ್ ಗಾಂಧಿ ಅವರು ಮೊಹಬತ್ ಕಾ ದುಖಾನ್ ಅಂತಾರೆ.
ನಾನು ಅವರಿಗೆ ಅಹ್ವಾನ ಕೊಡ್ತೀನಿ ,ಕರ್ನಾಟಕಕ್ಕೆ ಬಂದು ಮೊಹಬ್ಬತ್ ದುಖಾನ್ ನೋಡಿ. ನಿಮ್ಮ ಸಿಎಮ್ ಸಿಕ್ಕಿಹಾಕಿಕೊಂಡಿದ್ದಾರೆ. ಹೊರ ದೇಶಕ್ಕೆ ಹೋಗಿ ಮಾತಾಡ್ತೀರಿ, ಕರ್ನಾಟಕಕ್ಕೆ ಬಂದು ನೋಡಿ ಎಂದು ಪ್ರಹ್ಲಾದ್ ಜೋಶಿ, ಸವಾಲ್ ಹಾಕಿದ್ದಾರೆ.

ರಾಹುಲ್ ಗಾಂಧಿ ಕೂಡಾ ದ್ವೇಷದ ರಾಜಕಾರಣ ಮಾಡಿದ್ರೆ, ಇಲ್ಲಿ ರಾಜಕಾರಣ ಹಗೆತನ ಸಾಧಸ್ತೀದಾರೆ. ಗಣಪತಿ ವಿಸರ್ಜನೆಯಲ್ಲಿ ಲಾಂಗ್ ಮಚ್ಚು ತಂದೀದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಇನ್ನು ಅರೆಸ್ಟ್ ಮಾಡಿಲ್ಲ ಎಂದು ಜೋಶಿ ಅಸಮಾಧಾನ ಹೊರಹಾಕಿದ್ದಾರೆ.

ಮುನಿರತ್ನ ವಿಚಾರದಲ್ಲಿ ನಾನು ಮಾತಾಡಿದಾಗ ಅನೇಕ ಬೆಳವಣಿಗೆ ಆಗಿವೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಅವರ ಮೇಲೆ ಗಂಭೀರ ಆರೋಪ ಇವೆ, ತನಿಖೆ ಆಗಲಿ. ಆರ್ ಅಶೋಕ,ಶೋಭಾ ಕರಂದ್ಲಾಜೆ ಮೇಲೆ ದ್ವೇಷ ಮಾಡ್ತೀದಿರಿ. ನಿಮ್ಮ ಶಾಸಕರ ಮೇಲೆ ಕೇಸ್ ಹಾಕಿದ್ರು, ಅರೆಸ್ಟ್ ಮಾಡಿಲ್ಲ. ಮುನಿರತ್ನ ಮೇಲೆ ರೇಪ್ ಇತ್ಯಾದಿ ಆರೋಪ ಇದೆ. ತನಿಖೆ ಮಾಡಲಿ, ಹಾಗೆ ಉಳಿದವರನ್ನು ಅರೆಸ್ಟ್ ‌ಮಾಡಲಿ ಎಂದು ಜೋಶಿ ಆಗ್ರಹಿಸಿದ್ದಾರೆ.

ಗಣೇಶ ವಿಸರ್ಜನೆ ವೇಳೆ ಗಲಾಟೆ ಆಗಿವೆ. ಸಿಎಮ್ ಎರಡು ಘಟನೆ ನಡೆದಿವೆ ಅಂತಾರೆ, ಎರಡು ಯಾಕೆ ಘಟನೆ ನಡೆಯಬೇಕು..? ಕೊಪ್ಪಳ ದಲ್ಲಿ ಮಸೀದಿ ಬಂದ್ರೆ ಗಣೇಶ ನಿಲ್ಲಸಬೇಕಂತೆ. ನಾವು ಬೆಳಿಗ್ಗೆ ಪೂಜೆ ಮಾಡೋವಾಗ ನಮಾಜ್ ಮಾಡ್ತಾರೆ. ಹಾಗಾದ್ರೆ ನಮಾಜ್ ನಿಲ್ಲಸ್ತಾರಾ..? ಕೊಪ್ಪಳ,ನಾಗಮಂಗಲದಲ್ಲಿ ನಡೆದ ಘಟನೆ ಸರ್ಕಾರದ ಹಿಂದೂ ವಿರೋಧಿ ನೀತಿಗೆ ಉದಾಹರಣೆ. ನಾವು ಯಾವ ಗೊಡ್ಡು ಬೆದರಿಕೆ ಬಗ್ಗೋದಿಲ್ಲ. ವಿದೇಶ ನೆಲದಲ್ಲಿ ನಿಂತು ಭಾರತವನ್ನು ಅಪಮಾನ ಮಾಡೋದು ಸರಿ ಅಲ್ಲ. ಇದು ಅವರ ಅಪ್ರಬುದ್ದತೆಗೆ ಸಾಕ್ಷಿ. ಮುಸಲ್ಮಾನರು ಭಾರತ್ ಮಾತಾ ಕೀ ಜೈ ಅಂತಾರೋ ಅಲ್ಲಿವರೆಗೂ ನಮ್ಮ ಅಭ್ಯಂತರ ಇಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಹುಬ್ಬಳ್ಳಿಯ‌ ಮಂಟೂರ ರಸ್ತೆಯಲ್ಲಿರೋ ಸ್ಮಶಾನದಲ್ಲಿ ನಿರ್ಮಾಣ ‌ಮಾಡಲಾಗಿರೋ ಇಂದಿರಾ ಕ್ಯಾಂಟೀನ್ ಬಗ್ಗೆ ಪ್ರತಿಕ್ರಿಯೆ ನೀಡಿದ ಜೋಶಿ, ಹುಬ್ಬಳ್ಳಿಯ ಇಂದಿರಾ ಕ್ಯಾಂಟಿನ್ ವಿಚಾರ ನನಗೆ ಸಂಪೂರ್ಣ ಮಾಹಿತಿ‌ ಇಲ್ಲ. ನಾವ ಇಂದಿರಾ ಕ್ಯಾಂಟಿನ್ ಮಾಡಬೇಡಿ ಅಂತಾ ಹೇಳಲ್ಲ. ಸ್ಮಶಾನ ಇದ್ರೆ ಪಾಲಿಕೆ ಅದನ್ನು ಸರಿ ಮಾಡಬೇಕು.
ಸೌಹಾರ್ದಯುತವಾಗಿ‌ ಎಲ್ಲ ಸರಿ ಮಾಡಬೇಕು ಎಂದಿದ್ದಾರೆ.

ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಏನು ಮಾಡಿದೆ..? ಇವತ್ತು ಬಹಳ ಮಾಡ್ತೀದಾರೆ. ಆದ್ರೆ ಕಾಂಗ್ರೆಸ್ ಸರ್ಕಾರ ಏನೂ ಮಾಡಿಲ್ಲ. ಒಂದು ಹನಿ ನೀರು ಕೊಡಲ್ಲ ಅಂದಿದ್ದಾರೆ. ಟ್ರಿಬ್ಯುನಲ್ ಗೆ ಕೊಟ್ಟರು ಕಾಂಗ್ರೆಸ್ ನ್ಯಾಯಾಧೀಶರನ್ನು ನೇಮಕ ಮಾಡಿಲ್ಲ. ಎಲ್ಲವನ್ನು ಮಾಡಿದ್ದು, ನಾವು. ಡಿಪಿರ್ ಅಪ್ರೂವ್ ಮಾಡಿದ್ದು,ನಾವೇ. ಕಾರಿಡಾರ್ ಇರೋ ಕಾರಣಕ್ಕೆ ಸಮಸ್ಯೆ ಆಗಿದೆ. ನಮ್ಮ‌ ಪ್ರಯತ್ನ ಮುಂದುವರೆದಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

- Advertisement -

Latest Posts

Don't Miss