Saturday, June 21, 2025

Latest Posts

ನದಿಗೆ ವಿಷಕಾರಿ ಕೆಮಿಕಲ್ಸ್ ಸುರಿದು ವಿಕೃತಿ : ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಾರ್ವಜನಿಕರ ಆಕ್ರೋಶ:

- Advertisement -

State News:

ದೇಶದ  ಆರ್ಥಿಕ ಅಭಿವೃದ್ದಿಗೆ ಕೈಗಾರಿಕೆಗಳ ಪಾತ್ರ ಅತಿ ಮುಖ್ಯ . ಹೇಗೆಂದರೆ ಒಂದು ಕೈಗಾರಿಕೆ ಸ್ತಾಪನೆಯಿಂದ ಹಉವಾರು ಉದ್ಯೋಗಗಳು ಸೃಷ್ಟಿಯಾಗುತ್ತವೆ   ಜನರ ಜಿವನದಲ್ಲಿ ಬೆಳವಣಿಗೆ ಆಗುತ್ತದೆ ಸರ್ಕಾರಕ್ಕೆ ಇದರಿಂದ ಅಧಿಕ ಮೊತ್ತದ ತೆರಿಗೆ ಪಾವತಿಯಾಗುತ್ತದೆ. ಇದೆಲ್ಲ ಸರಿ ಆದರೆ ಅದೇ ಕೈಗಾರಿಕೆಗಳಿಂದ  ಅಕ್ರಮ ನಡೆದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದರೆ ಎಷ್ಟು ಸಂಪಾದನೆ ಮಾಡಿ ಏನು ಪ್ರಯೋಜನ . ಇದೇ ರೀತಿ ಘಟನೆಯೊಂದು ರಾಜ್ಯದಲ್ಲಿ ಸಂಭವಿಸಿದೆ. ಕೈಗಾರಿಕೆಯಲ್ಲಿ ವಸ್ತುಗಳನ್ನು ತಯಾರಿಸಲು ಹಲವಾರು ಕಚ್ಚಾವಸ್ತುಗಳನ್ನು ಬಳಕೆ ಮಾಡಲಾಗುತ್ತದೆ . ಅದೇ ರೀತಿ  ಕಚ್ಚಾವಸ್ತುಗಳ ಮಿಶ್ರಣಕ್ಕೆ ನೀರನ್ನು ಬಳಕೆ ಮಾಡಲಾಗುತ್ತದೆ . ನೀರನ್ನು ಬಳಕೆ ಮಾಡಿದ ನಂತರ ಊಳಿದ ನೀರು  ರಾಸಾಯನಿಕ ಮಿಶ್ರಣದಿಂದಾಗಿ ಕಲುಷಿತಗೊಂಡು ವಿಷಕಾರಿಯಾಗಿರುತ್ತದೆ ಅಂತಹ ವಿಷಕಾರಿ ನೀರನ್ನು ಬೇರೆಡೆಗೆ ಬಿಡಲಾಗುತ್ತದೆ ಆದರೆ  ಇಲ್ಲಿರುವ ಕೈಗಾರಿಕೆಯಲ್ಲಿ ಹಾಗಿಲ್ಲ ವಿಷಕಾರಿ  ನೀರನ್ನು ಜನರು ಕುಡಿಯಲು ಬಳೆಸುವ ನದಿ ನೀರಿಗೆ ಹರಿ ಬಿಡಲಾಗುತ್ತಿದೆ.http://ಬೆಂಗಳೂರಿನಲ್ಲಿ ಮೈಕೊರೆಯೋ ಚಳಿ..! ಆರೆಂಜ್ ಅಲರ್ಟ್ ಘೋಷಣೆ..!

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರದ ಉತ್ತರ ಪಿನಾಕಿನಿ ನದಿ ಬ್ರಿಡ್ಜ್ ಬಳಿ ದುಷ್ಕರ್ಮಿಗಳು ವಿಷಕಾರಿ ಕೆಮಿಕಲ್ಸ್ ಯುಕ್ತ ನೀರನ್ನು ನದಿಗೆ ಸುರಿದು ವಿಕೃತಿ ಮೆರೆದಿರುವ ಘಟನೆ ನಡೆದಿದೆ . ಯಾರೂ ಇಲ್ಲದ ರಾತ್ರಿಯ ವೇಳೆ  ಕೈಗಾರಿಕೆಗಳ ವಿಷಕಾರಿ ಕೆಮಿಕಲ್ಸ್ ತ್ಯಾಜ್ಯ ನೀರನ್ನು ತಂದು ಉತ್ತರ ಪಿನಾಕಿನಿ ನದಿ ಒಡಲಿಗೆ ಸುರಿದ ಪರಿಣಾಮ ನದಿಯಲ್ಲಿನ ಮೀನುಗಳು ಸೇರಿದಂತೆ ಜಲಚರಗಳು ಸಾವನ್ನಪ್ಪಿವೆ.. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ .. ಘಟನೆ ಸಂಬಂಧ ಗೌರಿಬಿದನೂರು ನಗರಸಭೆಯ ಆರೋಗ್ಯ ನಿರೀಕ್ಷಕ ಶಿವಣ್ಣ ಎನ್ನುವವರು ಗೌರಿಬಿದನೂರು ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.. ದೂರು ಪಡೆದ ಗೌರಿಬಿದನೂರು ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಗ್ರಾಮ ಪಂಚಾಯತ್ ನಿರ್ಲಕ್ಷ್ಯಕ್ಕೆ  ಬಲಿಯಾದ್ರಾ ಬಡ ಮಕ್ಕಳು…?!

ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಬ್ಯಾಗವಾಟ ಗ್ರಾಮದ ಶಾಲೆಗೆ ಮಳೆನೀರು ಬರುತ್ತಿದೆ. ಆ ನೀರು ಶಾಲೆ ಆವೆಣಕ ನುಗ್ಗಬಾರದು ಅಂತ ತಡೆಗೋಡೆ ನಿರ್ಮಾಣಕ್ಕಾಗಿ 8 ರಿಂದ 10 ಅಡಿ ಆಳದ ಗುಂಡಿ ಅವೈಜ್ಞಾನಿಕವಾಗಿ ತೊಡಲಾಗಿತ್ತು. ಗುಂಡಿ ತೊಡಿದ ಗ್ರಾ. ಪಂ. ಪಿಡಿಒ ತಾರಕೇಶ್ವರಿ ಮತ್ತು ಗ್ರಾ.ಪಂ. ಅಧ್ಯಕ್ಷೆ ಬಸಲಿಂಗಮ್ಮ ಕಾಮಗಾರಿ ಶುರು ಮಾಡಬೇಕಾಗಿತ್ತು. ಆದ್ರೆ ಗುಂಡಿ ತೊಡಿದ ಜಾಗದಲ್ಲಿ ಇದ್ದ ನೀರಿನ ಪೈಪ್ ಒಡೆದು ಇಡೀ ಗುಂಡಿ ತುಂಬ ನೀರು ತುಂಬಿಕೊಂಡಿತ್ತು. ಆ ಕಾಮಗಾರಿಗಾಗಿ ತೊಡಿದ ಗುಂಡಿ ಸುತ್ತಮುತ್ತ ಯಾವುದೇ ಸೂಚನೆ ಫಲಕವೂ ಇರಲಿಲ್ಲ. ಹೀಗಾಗಿ ಅಜಯ್ (5), ಯಲ್ಲಾಲಿಂಗ(8) ಎಂಬ ಇಬ್ಬರುಬಾಲಕರು ಆಟವಾಡಲು ಹೋಗಿ ನೀರು ಪಾಲಾಗಿ ಜೀವ ಬಿಟ್ಟಿದ್ದಾರೆ. ಶಾಲೆಯ ಬಳಿಯ ಗುಂಡಿಗೆ ಬಿದ್ದು ಬಲಿಯಾಗಿದ್ದಾರೆ. ಸುರೇಶ್ ಮತ್ತು ರಮೇಶ್ ಇಬ್ಬರು ಸಹೋದರ ಒಬ್ಬ ಮಕ್ಕಳು ಈಗ ನೀರು ಪಾಲಾಗಿದ್ದಾರೆ. ಅಣ್ಣತಮ್ಮಂದಿರು ಒಂದೊಂದು ಗಂಡು ಮಕ್ಕಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.

ಮೃತರ ಕುಟುಂಬಕ್ಕೆ ಸ್ವಾಂತನ ಹೇಳಿದ ಶಾಸಕರು ಮತ್ತು ಅಧಿಕಾರಿಗಳು:

ಮಾನ್ವಿ ತಾಲೂಕಿನ ಬ್ಯಾಗವಾಟ ಗ್ರಾಮದಲ್ಲಿ ಗುಂಡಿಗೆ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿದರು. ಈ  ಸುದ್ದಿ ತಿಳಿದು ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಮಾನ್ವಿ ತಹಸೀಲ್ದಾರ್ ಶ್ರೀನಿವಾಸ್ ಹಾಗೂ ತಾ.ಪಂ. ಇಒ ಸೈಯದ್ ಪಟೇಲ್ ಸೇರಿ ಪಿಡಿಒ ಹಾಗೂ ಗ್ರಾಮಸ್ಥರು ಮೃತರ ಕುಟುಂಬಕ್ಕೆ ಭೇಟಿ ನೀಡಿದರು. ಕುಟುಂಬಸ್ಥರನ್ನ ಸ್ವಾಂತನ ಹೇಳಿದ ಶಾಸಕ ರಾಜಾ ವೆಂಕಟಪ್ಪ ನಾಯಕ ಮೃತರ ಕುಟುಂಬಸ್ಥರಿಗೆ ವೈಯುಕ್ತಿಕವಾಗಿ 10ಸಾವಿರ ರೂ. ನಗದು ನೀಡಿದರು. ಅಷ್ಟೇ ಅಲ್ಲದೇ ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ಕೊಡಿಸುವುದಾಗಿ ಕುಟುಂಬಸ್ಥರಿಗೆ ಭರವಸೆ ನೀಡಿದರು.

ಜನವರಿ 12 ಮತ್ತು 19 ರಂದು ರಾಜಕ್ಕೆ ಆಗಮಿಸಲಿರುವ ಪ್ರಧಾನ ಮಂತ್ರಿ

ಗ್ರಾಮ ಪಂಚಾಯತ್ ನಿರ್ಲಕ್ಷ್ಯಕ್ಕೆ  ಬಲಿಯಾದ್ರಾ ಬಡ ಮಕ್ಕಳು…?!

“ಚಡ್ಡಿ ಹಾಕಿ ಕೊಂಡವರೂ ನನ್ನನ್ನು ಭೇಟಿ ಮಾಡಬಹುದು”… RSS ಗೆ ಟಾಂಗ್ ಕೊಟ್ರಾ ಸಿದ್ದು..?!

- Advertisement -

Latest Posts

Don't Miss