ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಡಿಮೆ ಸ್ಥಾನಗಳನ್ನು ಪಡೆದ ನಂತರ ಆರ್ಎಸ್ಎಸ್ ಸದಾ ಸುದ್ದಿಯಲ್ಲಿದೆ. ದೇಶದ ಜನರು ಹೆಚ್ಚು ಮಕ್ಕಳನ್ನು ಹೆರಬೇಕು. ಪ್ರತಿಯೊಂದು ಕುಟುಂಬ ನಾಲ್ಕು ಮಕ್ಕಳನ್ನು ಹೊಂದುವುದು ಒಳ್ಳೆಯದು ಎಂದು ಆರ್ಎಸ್ಎಸ್ ಮುಖಂಡ ಸತೀಶ್ ಕುಮಾರ್ ಹೇಳಿರೋದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.
ಜೈಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸ್ವದೇಶಿ ಜಾಗರಣ ಮಂಚ್ನ ಸಹ ಸಂಘಟಕ ಸತೀಶ್ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಯುವಜನತೆ ಕಡಿಮೆ ಇರುವ ದೇಶಗಳಲ್ಲಿ ಜಿಡಿಪಿ ಕುಸಿತ ಕಂಡಿರುವುದು ಸಂಶೋಧನೆಯಿಂದ ತಿಳಿದು ಬಂದಿದೆ. ಹಾಗಾಗಿ ನಮ್ಮ ದೇಶದಲ್ಲಿ ಯುವಕರ ಸಂಖ್ಯೆ ಹೆಚ್ಚಿರಬೇಕು. 2047 ರಲ್ಲಿ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಬೇಕಾದರೆ, ಯುವಕರ ಸಂಖ್ಯೆಯನ್ನು ಹೆಚ್ಚಾಗಬೇಕೆಂದು ಎಂದು ಆರ್ಎಸ್ಎಸ್ ನಾಯಕ ಹೇಳಿದ್ದಾರೆ.
ಸಂಸಾರ ಚಿಕ್ಕದಾಗದೆ, ದೊಡ್ಡದಾಗಿ, ನೆಮ್ಮದಿಯಿಂದ ಇರಬೇಕು. 5-6 ಮಕ್ಕಳು ಹುಟ್ಟಬೇಕು ಎಂದು ನಾನು ಪ್ರತಿಪಾದಿಸುತ್ತಿಲ್ಲ. ಆದರೆ ಖಂಡಿತವಾಗಿಯೂ ಎರಡು ಅಥವಾ ಮೂರು ಮಕ್ಕಳು ಇರಬೇಕು ಎಂದು ನಾನು ಹೇಳುತ್ತಿದ್ದೇನೆ. ನಾಲ್ಕು ಮಕ್ಕಳನ್ನು ಹೊಂದುವುದು ಒಳ್ಳೆಯದು. ನಾನು ಸಂಶೋಧನೆಯ ಆಧಾರದ ಮೇಲೆ ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದೇನೆ. ನಾಲ್ಕು ಮಕ್ಕಳ ಕುರಿತು ಸ್ವದೇಶಿ ಸಂಸ್ಥಾನ ಹಲವು ದೇಶಗಳಲ್ಲಿ ಅಧ್ಯಯನ ನಡೆಸಿದೆ. ಯುವಜನತೆ ಕಡಿಮೆ ಇರುವಲ್ಲಿ ಜಿಡಿಪಿ ಕೂಡ ಕಡಿಮೆಯಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ ಎಂದು ಸತೀಶ್ ಕುಮಾರ್ ತಿಳಿಸಿದ್ದಾರೆ.
2047ರಲ್ಲಿ ನಾವು ಅಭಿವೃದ್ಧಿ ಹೊಂದಿದ ಭಾರತವಾಗಲಿದ್ದೇವೆ. ಅಲ್ಲಿಯವರೆಗೆ ನಾವು ಹಳೆಯ ಜನರ ರಾಷ್ಟ್ರವಾಗಲು ಬಯಸುವುದಿಲ್ಲ. ನಮ್ಮ ಜನಸಂಖ್ಯೆಯು ಯುವಕರಾಗಿರಬೇಕು. 2047ರ ವೇಳೆಗೆ ನಾವು ಯುವ ಜನತೆಯನ್ನು ದೇಶಕ್ಕೆ ಹಸ್ತಾಂತರಿಸಬೇಕಾಗಿದೆ. ನಮ್ಮ ದೇಶದಲ್ಲಿ, ಮಕ್ಕಳು, ಚಿಕ್ಕವರು ಮತ್ತು ಹಿರಿಯರು ಎಲ್ಲರೂ ಒಟ್ಟಿಗೆ ವಾಸಿಸುವ ಮನೆಯನ್ನು ಉತ್ತಮವೆಂದು ಪರಿಗಣಿಸಲಾಗಿದೆ. 2047 ರಲ್ಲಿ ನಾವು ಕ್ರಿಯಾತ್ಮಕ ಜನಸಂಖ್ಯೆಯನ್ನು ಹೊಂದಿರುವ ಭಾರತವನ್ನು ಬಯಸುತ್ತೇವೆ. ನಾವು ಅಭಿವೃದ್ಧಿ ಹೊಂದಿದ ಭಾರತವಾಗಬೇಕು. 2047ರಲ್ಲಿ ನಾವು ವೃದ್ಧರ ದೇಶವಾಗಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.