www.karnatakatv.net : ಮೈಸೂರು : ಹೋಟೆಲ್ ಸಿಬ್ಬಂದಿ ಮೇಲೆ ಡಿ ಬಾಸ್ ದರ್ಶನ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದಿ ಸಂದೇಶ್ ಪ್ರಿನ್ಸ್ ಹೋಟೆಲ್ ಮಾಲೀಕ ಸಂದೇಶ್ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ಹೋಟೆಲ್ ಸಿಬ್ಬಂದಿ ಮೇಲೆ ಬೈದಿದ್ದಾರೆ ಆದ್ರೆ, ಹಲ್ಲೆ ಮಾಡಿಲ್ಲ. ಹಲ್ಲೆ ಮಾಡಿದ ಆರೋಪ ಸುಳ್ಳು ಎಂದು ಸಂದೇಶ್ ಸ್ಪಷ್ಟನೆ ನೀಡಿದ್ದಾರೆ.. ನಾನು ಯಾವುದೇ ಜಾತಿ ನೋಡಿ ಸಿಬ್ಬಂದಿ ತೆಗೆದುಕೊಳ್ಳುವುದಿಲ್ಲ ಎಂದು ಸಂದೇಶ ಹೇಳಿದ್ದಾರೆ. ಲಾಕ್ ಡೌನ್ ಗೂ ಮುನ್ನ ಈ ಘಟನೆ ನಡೆದಿದೆ. ಆತನಿಗೆ ಕನ್ನಡ ಬರ್ತಿರಲಿಲ್ಲ. ಹೀಗಾಗಿ ಕನ್ನಡದಲ್ಲಿ ಮಾತನಾಡು ಎಂದು ದರ್ಶನ್ ಗದರಿದ್ದಾರೆ.. ಏ ದರ್ಶನ್ ಹೀಗೆ ಮಾಡಬೇಡ ನಮಗೆ ಎಂಪ್ಲಾಯ್ಸ್ ಸಿಗೋದೆ ಕಷ್ಟ.. ಹೀಗೆ ಬೈಯಬೇಡ ಅಂತ ನಾನು ಹೇಳಿದ್ದಾರೆ.. ಜೊತೆಗೆ ಅಂದು ಯಾರ್ಯಾರು ಇದ್ದರು ಅಂತ ನನಗೆ ಗೊತ್ತಿಲ್ಲ. ಯಾಕಂದ್ರೆ ದರ್ಶನ್ ಜೊತೆ ಯಾವಾಗಲೂ 15-20 ಜನ ಬರ್ತಿರ್ತಾರೆ. ಈ ವಿಚಾರದಲ್ಲಿ ನಾನು ನನ್ನ ಸಿಬ್ಬಂದಿ ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ರು. ಆ ಬೈಸಿಕೊಂಡ ಸಿಬ್ಬಂದಿ ಮಹಾರಾಷ್ಟ್ರದವನು.. ಆತ ಟ್ರೈನಿಯಾಗಿದ್ದ ಕಾರಣ ಆ ವ್ಯಕ್ತಿ ಊರಿಗೆ ತೆರಳಿದ್ದಾನೆ ಎಂದು ಸಂದೇಶ್ ಹೇಳಿದ್ರು..
ಕರ್ನಾಟಕ ಟಿವಿ, ಮೈಸೂರು