ಹುಬ್ಬಳ್ಳಿ: ಮಳೆಯಿಂದಾಗಿ ಸಮಸ್ಯೆಗಳಿಗೆ ಈಡಾದ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ ನೀಡಿ ಜನರ ಕಷ್ಟಕ್ಕೆ ಸ್ಪಂದಿಸಿದರು. ಹುಬ್ಬಳ್ಳಿಯ ಬೇಂಗೇರಿಯ ಗಾಂಧಿನಗರ, ಕೆರೆ ಒಂಡಿ ಓಣಿ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಶೀಲನೆ ನಡೆಸಿದ ಸ್ಥಳಗಳಲ್ಲಿ ಮಳೆಯಿಂದ ಹಾನಿಗೀಡಾದ ಮನೆಗಳನ್ನು ವೀಕ್ಷಣೆ ಮಾಡಿದರು. ಮಳೆಯಿಂದ ತೊಂದರೆಗೀಡಾದ ಮನೆಗಳಿಗೆ ತೆರಳಿ ಕ್ಷೇತ್ರದ ಜನರ ಕಷ್ಟಗಳನ್ನು ಆಲಿಸಿದರು. ಇನ್ನು ಇದೇ ವೇಳೆ ಪ್ರದೇಶದಲ್ಲಿ ಓಡಾಡುವಾಗ ಗಾಂಧಿನಗರದಲ್ಲಿ ಅಜ್ಜಿಯ ವಯಸ್ಸು ಕೇಳಿ ಸಂತಸ ಪಟ್ಟ ಲಾಡ್
ಅಜ್ಜಿ ನಿನಗೆ ಎಷ್ಟು ಎಂದು ಸಚಿವರು ಪ್ರಶ್ನಿಸಿದಾಗ ಆ ಅಜ್ಜಿ 63 ಎಂದಳು. ಆಗ ಕೇಳಿದರೂ ಕೇಳಿಸದ ಹಾಗೆ ಆಗ ಸಚಿವರು ನಿನಗೆ 23 ಎಂದು ಆಶ್ಚರ್ಯ ತೋರಿದರು ನಂತರ ಅಜ್ಜಿ ಇಲ್ಲ 63 ಎಂದು ಸರಿಯಾದ ಉತ್ತರ ನೀಡಿದಳು ಏನಮ್ಮಾ ನಿನಗೆ 63 ನೊಡದರೆ 23 ರ ಪ್ರಾಯದ ಹಾಗೆ ಕಾಣ್ತಿರಾ ಎಂದು ಸಚಿವರು ಹಾಸ್ಯ ಚಟಾಕಿ ಹಾರಿಸಿದರು ಇದಕ್ಕೆ ಅಚಿವರು ಸೇರಿ ನೆರೆದಿದ್ದ ಜನರು ಸೇರಿ ಖುಷಿ ಪಟ್ಟರು.
Shakthi yojne: ಬೆಂಗಳೂರು ಬಂದ್ ಗೆ ಕರೆ ನೀಡಿದ್ದ ಸಾರಿಗೆ ನೌಕರರು ಕರೆ ವಾಪಸ್
Manjunath : ಕೆಸಿ ವ್ಯಾಲಿ ಯೋಜನೆ ಬಗ್ಗೆ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ ಜೆಡಿಎಸ್ ಶಾಸಕ