Saturday, October 19, 2024

Latest Posts

ಶಾಲಾ ಬಾಲಕಿ ನಿಗೂಢ ರೀತಿಯಲ್ಲಿ ನಾಪತ್ತೆ

- Advertisement -

ಹಾಸನ: ಏಳನೇ ತರಗತಿ ಓದುತ್ತಿದ್ದ ಬಾಲಕಿ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದಾಳೆ. ಮುದ್ದು ಮಗಳನ್ನ ಕಳೆದುಕೊಂಡು ಕುಟುಂಬ ಕಂಗಲಾಗಿದೆ. ಕಾಣೆಯಾಗಿ ಎರಡು ವಾರವಾದರೂ ಸುಳಿವು ಸಿಗುತ್ತಿಲ್ಲ. ಬಾಲಕಿ ಪತ್ತೆಗಾಗಿ ಪೊಲೀಸರ ಹುಡುಕಾಟ ಮುಂದುವರೆದಿದ್ದು, ಘಟನೆಗೆ ಗಿರೀಶ್ ಎಂಬ ಯುವಕನೇ ಕಾರಣ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಬಾಲಕಿ ನಂದಿತಾ(13) ಓದುತ್ತಿದ್ದಳು ಈಗ ನಿಗೂಢ ರೀತಿಯಲ್ಲಿ ಬಾಲಕಿ ಕಾಣೆಯಾಗಿದ್ದಾಳೆ.

ಬೇಲೂರು ಕೃಷಿ ಪತ್ತಿನ ಸಹಕಾರ ಸಂಘ ನೂತನ ಆಡಳಿತ ಮಂಡಳಿ ಉದ್ಘಾಟಿಸಿದ ಸುಮಲತಾ ಅಂಬರೀಷ್

ಅಜ್ಜ-ಅಮ್ಮನ ಊರಿನ ಪಕ್ಕದಲ್ಲಿರುವ ಹಾಸ್ಟೇಲ್ ನಲ್ಲಿದ್ದ ನಂದಿತಾ ಶಾಲೆಗೆಂದು ತೆರಳಿದಾಗ ವಾಪಸ್ ಹಾಸ್ಟೇಲ್ ಗೆ ಹೋಗುವುದಿಲ್ಲ. ಗ್ರಾಮದ ಯುವಕ ಗಿರೀಶ್ ಎಂಬುವರ ಮೊಬೈಲ್ ನಿಂದ ಪೊಷಕರಿಗೆ ಕರೆ ಮಾಡಿದ್ದಾಳೆ. ಹಾಗಾಗಿ ಪೊಷಕರು ಗಿರೀಶ್ ನ ಮೇಲೆ ಅನುಮಾನಿಸುತ್ತಿದ್ದು, ಅವನೇ ನಮ್ಮ ಮಗಳ ನಾಪತ್ತಗೆ ಕಾರಣ ಎಂದು ದೂರು ನೀಡಿದ್ದಾರೆ. ಶಾಲೆಗೆಂದು ಹೋಗಿದ್ದ ಪುಟ್ಟ ಬಾಲಕಿ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದಾಳೆ. ಪೊಲೀಸ್ ತನಿಖೆಯ ನಂತರವೇ ಬಾಲಕಿ ಅಪಹರಣದ ಹಿಂದಿನ ಸತ್ಯ ಬಯಲಾಗಲಿದೆ.

ಮಾಜಿ ಸಚಿವ ವರ್ತೂರು ಪ್ರಕಾಶ್ ಆರೋಪಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ಮುಖಂಡ ರಮೇಶ್

 

- Advertisement -

Latest Posts

Don't Miss