Thursday, June 19, 2025

Latest Posts

ಹೆಚ್ಡಿಕೆ ಅವಮಾನ ಮಾಡಿದ್ದು ನಿಜ – ದೊಡ್ಡಣ್ಣ ಪ್ರತಿಕ್ರಿಕೆ

- Advertisement -

www.karnatakatv.net ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಸಂಸದೆ ಸುಮಲತಾ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ನಡುವೆ ನಡೆಯುತ್ತಿರುವ ವಾಗ್ಯುದ್ಧದ ಬಗ್ಗೆ ಹಿರಿಯ ಚಿತ್ರನಟ ದೊಡ್ಡಣ್ಣ ಪ್ರತಿಕ್ರಿಯಿಸಿದ್ದಾರೆ. ಅಂಬರೀಶ್ ಅವರ ಸ್ಮಾರಕ ನಿರ್ಮಾಣದ ಮನವಿಯನ್ನು ಕುಮಾರಸ್ವಾಮಿ ಅವರ ಬಳಿ ತಗೊಂಡು ಹೋದಾಗ ಅವರು ಪೇಪರ್ ಗಳನ್ನ ನನ್ನ ಮುಖಕ್ಕೆ ಎಸೆದಿದ್ದು ನಿಜ. ಯಾವನ್ರೀ ಅಂಬರೀಶ್, ಅವನೇನು ಮಾಡಿದಾನೆ ಅಂತ ನಾನು ಅವನಿಗೆ ಸ್ಮಾರಕ ನಿರ್ಮಿಸಬೇಕು ಎಂದು ಅವಮಾನ ಮಾಡಿದ್ದರು. ನಾನೊಬ್ಬ ಹಿರಿಯ ನಟನಾಗಿ ಯಾರೂ ನನಗೆ ಈ ರೀತಿ ಅವಮಾನ ಮಾಡಿರಲಿಲ್ಲ. ಆಗ ನನಗೆ ಶಿವರಾಂ ಅವರು ಸಮಾಧಾನ ಮಾಡಿದ್ದರು. ಅವಮಾನ ಆದ ತಕ್ಷಣ ಸುಮಲತಾ ಮನೆಗೆ ಹೋಗಿದ್ದೆ ಎಂದು ಸಂಸದೆ ಸುಮಲತಾ ಅವರ ಹೇಳಿಕೆಯನ್ನು ಪುಷ್ಠೀಕರಿಸಿದ್ದಾರೆ.

- Advertisement -

Latest Posts

Don't Miss