Sunday, June 1, 2025

Latest Posts

“ದಲಿತ ಸಪ್ಲೈಯರ್ ಮೇಲೆ ಹಲ್ಲೆ” ದರ್ಶನ್ ವಿರುದ್ಧ ಗಂಭೀರ ಆರೋಪ

- Advertisement -

www.karnatakatv.net : ಬೆಂಗಳೂರು : 25 ಕೋಟಿ ಲೋನ್ ಸ್ಟೋರಿ ಮರೆಯಾಗುವ ಮುನ್ನವೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಮತ್ತೊಂದು ಚಾಲೆಂಜ್ ಎದುರಾಗಿದೆ. ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ದಲಿತ ಸಪ್ಲೈಯರ್ ಮೇಲೆ ದರ್ಶನ್  ಹಲ್ಲೆ ಮಾಡಿದ್ದಾರೆ ಎಂದು ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ಆರೋಪಿಸಿದ್ದಾರೆ. ಈ ಸಂಬಂಧ ಪೊಲೀಸರು ದಲಿತ ಸಪ್ಲೈಯರ್ ಪರ ನಿಲ್ಲದೇ ಸೆಟಲ್ ಮೆಂಟ್ ಮಾಡಿದ್ದಾರೆ. ದಲಿತ ಸಪ್ಲೈಯರ್ ಹೆಂಡತಿ ಮರುದಿನ ಹೋಟೆಲ್ ಬಳಿ ಪೊರಕೆ ಹಿಡಿದು ಬಂದಿದ್ಲು,  ಸಂದೇಶ್ ಪ್ರಿನ್ಸ್ ಹೋಟೆಲ್ ನ ಸಿಸಿಟಿವಿ ತೆಗೆಸಿದ್ರೆ ವಿಷಯ ಬಯಲಾಗುತ್ತೆ ಎಂದು ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆ. ಹಾಗೆಯೇ ಹೋಟೆಲ್ ಮಾಲೀಕ, ಶಾಸಕ ಸಂದೇಶ್ ನಾಗರಾಜು ತನ್ನ ಸಂಸ್ಥೆಯ ಕಾರ್ಮಿಕ ಪರ ನಿಲ್ಲಬೇಕು ಸೆಲೆಬ್ರೆಟಿ ಪರ ಅಲ್ಲ ಅಂತ  ಇಂದ್ರಜಿತ್ ಒತ್ತಾಯ ಮಾಡಿದ್ದಾರೆ.

ಹಾಗೆಯೇ ಮೊನ್ನೆ ದರ್ಶನ್ ತಳೆ ತೆಗಿತಿನಿ ಅನ್ನುವ ಮಾತುಗೂ ಆಕ್ರೋಶ ವ್ಯಕ್ತಪಡಿಸಿರುವ ಿಂದ್ರಜಿತ್ ಲಂಕೇಶ್ ಇದೆನು ಸಿನಿಮಾನಾ..? ಅಂತ ದರ್ಶನ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.. ಈ ಸಂಬಂಧ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಭೇಟಿಯಾಗಿ ಮಾಹಿತಿ ನೀಡಿರುವ ಇಂದ್ರಜಿತ್ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ..

ವಿನುತಾ ಹವಲ್ದಾರ್, ಕರ್ನಾಟಕ ಟಿವಿ, ಬೆಂಗಳೂರು

- Advertisement -

Latest Posts

Don't Miss