Saturday, June 21, 2025

Latest Posts

ಸಂಜೀವಿನಿ ಹುಡುಕಾಟದಲ್ಲಿದೆ ಪ್ರಪಂಚ..?! ಭಾರತದಲ್ಲಿದೆ ಸಾವೇ ಬಾರದ ನಗರ..?!

- Advertisement -

Special Story:

SHAMBALA NAGARA:

ಭಾರತದಲ್ಲಿದೆ ಆ ಒಂದು ನಿಗೂಢ ನಗರ ಗೂಗಲ್  ಮ್ಯಾಪ್ ಗೂ ಸಿಗಲ್ಲ ಆ ಒಂದು  ಪ್ರದೇಶ.ಕೇವಲ ಪುಣ್ಯವಂತರಿಗೆ  ಮಾತ್ರ ಇದು ಕಾಣಸಿಗುವುದಂತೆ. ಅದು ಸಾಕ್ಷಾತ್ ದೇವ ಭೂಮಿ.. ಆ ಅದ್ಭುತ ತಾಣಕ್ಕೆ ಭೇಟಿ ಕೊಟ್ರೆ ನೀವು ಚಿರಂಜೀವಿಯಾಗ್ತೀರಾ ಈ  ಒಂದು ಕಾರಣದಿಂದಲೇ ಇಡೀ ಪ್ರಪಂಚ ಭಾರತದತ್ತ ತಿರುಗಿ ನೋಡುವಂತೆ  ಮಾಡುತ್ತಿದೆ.ಹಾಗಿದ್ರೆ ಯಾವುದು ಆ ಸಂಜೀವಿನಿ ನಗರ ಇಲ್ಲಿದೆ ಸಂಪೂರ್ಣ ಚಿತ್ರಣ….

ಸಂಜೀವಿನಿಯ ಉಲ್ಲೇಖ ಪುರಾಣಗಳದ್ದು ಆದರೆ ಇದೀಗ ಇಡೀ  ಜಗತ್ತನ್ನೆ ಸಂಜೀವಿನಿ ಬಗ್ಗೆ  ನಿದ್ದೆಗೆಡಿಸಿದೆ. ಮತ್ತೆ  ಈ ಸಂಜೀವಿನಿ ಉಲ್ಲೇಖ  ಯಾಕೆಂದರೆ  ಜಗತ್ತಿನ ಬಹುತೇಕ  ರಾಷ್ಟ್ರಗಳು ಶಕ್ತಿ ಮೀರಿ ಆ ಒಂದು ನಗರದ ಹುಡುಕಾಟದಲ್ಲಿದೆ.ಹೌದು  ಭಾರತದಲ್ಲಿ ಒಂದು ವಿಶೇಷ ನಗರವಿದೆ  ಅದು  ದೇವಲೋಕದಂತಿದೆ ಪುಣ್ಯವಂತರಿಗೆ ಮಾತ್ರ ಆ ಜಾಗ ಕಾಣ ಸಿಗುವುದು. ಅಲ್ಲಿ ಸಾಕ್ಷಾತ್ ದೇವತೆಗಳೇ   ನೆಲೆಸಿದ್ದಾರೆ.ಅಲ್ಲಿ ಚಿರಂಜೀವಿಯಾಗಿರಲು ಸಂಜೀವಿನಿ ದೊರೆಯುತ್ತದೆ.  ಈ  ಕಾರಣದಿಂದಲೇ ಇಡೀ  ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ ಆ ಒಂದು ನಗರ.

ಸಾವನ್ನೇ ತಡೆಯುವ ಸಂಜೀವಿನಿ ಭಾರತದಲ್ಲಿದೆ ಎಂದು ತಿಳಿದ  ತಕ್ಷಣ ಇಡೀ ಜಗತ್ತು ಆ  ಜಾಗವನ್ನು ಪತ್ತೆ ಹಚ್ಚಲು ನಿರ್ಧಾರ ಮಾಡಿದೆ. ಭಾರತದ ಸೌಂದರ್ಯ ತಾಣ ತಪಮಸ್ವಿಗಳ ಪುಣ್ಯ  ಭೂಮಿ ಅಷ್ಟೇ ಯಾಕೆ ಸಾಕ್ಷಾತ್ ಶಿವನೇ ಕೈಲಾಸದಲ್ಲಿ ನೆಲೆಸಿದ್ದಾನೆ ಎಂಬುವುದು ಜನರ ನಂಬಿಕೆ ಕೂಡಾ…ಇಂತಹ  ಭೂಮಿಯ ಸ್ವರ್ಗದಲ್ಲಿ ಇದೀಗ ಯಾರಿಗೂ ಕಾಣದ ಅಪರೂಪದ ನಗರವೊಂದು ಇದೆ ಎಂಬುವುದು ಗೊತ್ತಾಗಿದೆ.ಅದೇ ಸಂಜೀವಿನಿ ನಗರ ಶಂಬಲ..

ಶಂಬಲ ಅಂದಾಕ್ಷಣ  ನೆನಪಾಗೋದೇ ರಾಮಾಯಣ ಹೌದು ರಾಮಲಕ್ಷ್ಮಣ ಸಹೋದರರಲ್ಲಿ ಲಕ್ಕ್ಷ್ಮಣನ ಪ್ರಾಣ ಉಳಿಸುವ ಸಲುವಾಗಿ ಗಿಡಮೂಳಿಕೆಗೋಸ್ಕಕರ ಹನುಮಂತ ಸಂಪೂರ್ಣ ಗಿರಿಯನ್ನೇ ಹೊತ್ತು ತಂದು ಸಹಕರಿಸಿದ್ದ ಆ ಬೆಟ್ಟವೇ ಸಂಜೀವಿನಿ ಬೆಟ್ಟ.

ಇದೀಗ ಮತ್ತೆ ಸಂಜೀವಿನಿಯ ಚರ್ಚೆ ಶುರುವಾಗಿದೆ. ಸಂಜೀವಿನಿ ನಗರವೇ ಶಂಬಲ  ಈ   ಶಂಬಲ ನಗರದ  ಹೆಬ್ಬಾಗಿಲು  ಪ್ರವೇಶಿಸಬೇಕೆಂದರೂ ಪುಣ್ಯ ಮಾಡಿರ್ಬೇಕು ದೇವರ ಇಚ್ಛೆ ಇರಬೇಕು ಹಾಗೆಯೆ ಸತ್ಯವನ್ನೇ ಹೇಳುವವರಾಗಿರಬೇಕು ಮತ್ತು ಎಂದಿಗೂ ಪಾಪವನ್ನು ಮಾಮಡಿರಬಾರದಂತೆ ಅಂತಹವರಿಗೆ ಇಂದಿಗೂ ಈ ನಗರ ಗೋಚರವಾಗುತ್ತಂತೆ.

ಇನ್ನು ಈ ಪುಣ್ಯ ಕ್ಷೇತ್ರಕ್ಕೆ ಅನೇಕ ಕಥೆಗಳೂ  ಇವೆ ಹಾಗೆಯೇ ಅಅವುಗಳಲ್ಲಿ ಇಂದಿಗೂ ಕೆಲವೊಂದು ನಂಬಿಕೆ ಅಚ್ಚಲಿಯದೇ ಹಾಗೇ ಉಳಿದಿವೆ. ಭಗವಾನ್ ಶ್ರೀ ಕೃಷ್ಣನು ತನ್ನ ಕೊನೆಗಾಲದಲ್ಲಿ   ಒಂದು ಮಾತನ್ನು ಹೇಳಿದ್ದ ಯಾವಾಗ  ಜಗತ್ತಿನಲ್ಲಿ ಅಧರ್ಮ  ಹೆಚ್ಚಾಗುತ್ತೋ ಆ ಸಮಯದಲ್ಲಿ ನಾನು ಇನ್ನೊಂದು ಅವತಾರ ಎತ್ತುವುದಾಗಿ ಹೇಳಿದ್ದ ಹಾಗೆಯೆ ವಿಷ್ಣು ಪುರಾಣದ ಪ್ರಕಾರ ಕಲಿಯುಗದ ಅಂತ್ಯಕ್ಕೆ ವಿಷ್ಣು ಎತ್ತುವ ಅವತಾರವೇ ಕಲ್ಕಿ ಈ ಅವತಾರ ಎತ್ತುವ ಸ್ಥಳವೂ ಶಂಬಲವಾಗಿದೆ. ಈ ಅವತಾರಗಳ ಬಗ್ಗೆ ಪುರಾಣಗಳಲ್ಲಿಯೂ  ಉಲ್ಲೇಖವಿದೆ.

ಶಂಬಲ ನಗರವು ಗಂಗಾ ನದಿಯ ಉಗಮ ಸ್ಥಳದಲ್ಲಿದೆ ಎಂಬುವುದಾಗಿ  ಅಂದಾಜಿಸಲಾಗಿದೆ. ಈ ಕಾರಣದಿಂದಲೇ ಗಂಗಾ ಉಗಮ ಸ್ಥಳದಲ್ಲಿ ಅನೇಕ ಸಂಶೋಧನೆಗಳೂ ನಡೆಯುತ್ತಿದೆ. ಅಷ್ಟೇ ಅಲ್ಲ ಶಂಬಲ ನಗರದಲ್ಲಿ  ಯುಗಗಳಿಂದಲೂ ಸಾದುಗಳೂ  ಸನ್ಯಾಸಿಗಳು ದಿವ್ಯಾತ್ಮರು ಇದ್ದಾರೆ  ಎಂದು  ಹೇಳಲಾಗುತ್ತದೆ. ಈ ನಗರಕ್ಕೆ ಹೋದರೆ ನಮಗೆ  ಹಸಿವು ಬಾಯಾರಿಕೆ  ಯಾವುದೂ  ಕಾಡುವುದಿಲ್ಲ ರೋಗವೂ ಸುಳಿಯುವುದಿಲ್ಲ ಹಾಗೆಯೇ ಮುಪ್ಪಾಗುವುದೂ ಇಲ್ಲ. ಇನ್ನು  ಇಲ್ಲೇ ಸಾದುಗಳು ವಾಸವಾಗಿದ್ದಾರೆ ಎಂಬುವುದನ್ನೂ ನಂಬಲಾಗಿದೆ.

ಶಂಬಲ ಪದದ ಅರ್ಥ ಶಾಂತಿ ನಗರ. ಅಘೋರಿಗಳು ಸಾದುಗಳು ನಾಗಸಾದು ಗಳೂ ಇದ್ದಾರೆ  12 ವರ್ಷದಲ್ಲಿ ಒಮ್ಮೆ ಮಾತ್ರ ಕುಂಬ ಮೇಳಕ್ಕೆ ಬಂದು ನಂತರ ಇದ್ದಕ್ಕಿದ್ದಂತೆ ಅಗೋಚರವಾಗುತ್ತಾರೇ ಅವರು  ಎಲ್ಲಿ ಹೋಗ್ತಾರೆ ಹೇಗೆ ಹೋಗ್ತಾರೆ ಅನ್ನೋದೆ ಆಗಾಗ ಚರ್ಚೆಯಾಗೋ ವಿಚಾರ. ಅದ್ರೆ  ಅಚ್ಚರಿ ಕೆಲವೊಂದು ಬೌದ್ಧ ಗ್ರಂಥದಲ್ಲಿ ಹಿಂದು ಪುರಾಣ ಪುಸ್ತಕದಲ್ಲಿ ಒಂದು ನಗರ ಇದೆ .     ಶಂಬಲದಿಂದ ಕಲ್ಕಿ ಹುಟ್ಟೋದು ಎಂಬುವುದಾಗಿಯೂ ಉಲ್ಲೇಖಿಸಲಾಗಿದೆ.

ಥೋದಗಯದಲ್ಲಿ 1985 ರ ಕಾಲಚಕ್ರ ಧೀಕ್ಷೆಯ ಸಮಯದಲ್ಲಿ 14 ನೇ ದಲೈಲಾಮ ಶಂಬ ಎನ್ನುವುದು ಸಾಮಾನ್ಯ ನಗರವಲ್ಲ ಎಂಬುವುದಾಗಿ ಹೇಳಿದ್ರಂತೆ ಮಂಗೋಳಿಯದ ಪಠ್ಯದ ಪ್ರಕಾರ ಶಂಬಲಕ್ಕೆ ಒಂದು ನಿಗೂಢ ದಾರಿ ಇರಬಹುದು ಎನ್ನಲಾಗಿದೆ. ತನಿಖೆ ಮಾಡುತ್ತಿದೆ. ಅಡಾಲ್ಫ್ ಹಿಟ್ಲರ್ ಕೂಡಾ ಇದಕ್ಕಾಗಿ ತಡಕಾಡಿದ್ದ.

ಇನ್ನು ಈ ಸ್ಥಳವನ್ನು ಯಾರಾದರೂ ನೋಡಿದ್ದಾರಾ ಎಂಬುವುದಕ್ಕೂ  ಉತ್ತರವಿದೆ. ಸ್ಕೇರ್ಡ್  ಪಾತ್ ಆಫ್ ವಾರಿಯರ್ ಸ್ಕೈ ಡ್ರಾಮಾ ಎಂಬ ಪುಸ್ತಕದಲ್ಲಿ ಉಲ್ಲೇಖವಿದೆ. ಇದರ ಹೊರತಾಗಿ ಯಾರಾದರೂ ನೋಡಿದ್ದಾರಾ ಹೌದು ಮಾರ್ಕೋ ಪೋಲೋ ಎಂಬಾತ 1254 ರಲ್ಲಿ ಇಟಲಿಯಲ್ಲಿ ಹುಟ್ಟಿದಾತ ತನ್ನ ತಂದೆಯ ಜೊತೆ ಸೇರಿಕೊಂಡು ಮಾರಾಟಕ್ಕಾಗಿ ದೇಶ ಸುತ್ತಿದ್ದ ಇಂತಹ ಸಂದರ್ಭದಲ್ಲಿ ಹಿಮಾಲಯದ ತಪ್ಪಲಿನಲ್ಲೂ ನಡೆದಾಡಿದ್ದ  1271 ನೇ ಇಸವಿಯಿಂದ 1295 ರ ವರೆಗೆ ಏಷ್ಯಾ  ಪೂರ್ತಿ  ಓಡಾಡಿದ್ದ   ಅಂತಹ ಸಂದರ್ಭದಲ್ಲಿ ಇಟೆಲಿಗೆ ವಾಪಸ್ಸಾಗುವ ಸಮಯದಲ್ಲಿ  ಒಂದು ಭವ್ಯವಾದ ನಗರವನ್ನು ಆತ ನೋಡಿದ್ದನಂತೆ  ವಾಪಸ್ಸಾಗೋ ಸಮಯಕ್ಕೇ ಆತನ ರಾಜ್ಯದ ಸೈನಿಕರು ತಮ್ಮಲ್ಲೇ ತಾವು ಹೊಡೆದಾಡಿಕೊಂಡು ಪ್ರಾಣ ಬಿಟ್ಟಿದ್ದರಂತೆ. ಹೀಗೆಂದು ಆತ ತನ್ನ ಪುಸ್ತಕದಲ್ಲಿ ಉಲ್ಲೇಖ  ಮಾಡಿದ್ದಾನೆ

ಇನ್ನು ಶಂಬಲ ನಗರದ ಬಗ್ಗೆ ರಾಮಾಯಣದಲ್ಲೂ ಉಲ್ಲೇಖವಿದೆ. ವಿಶ್ವಾಮಿತ್ರ ಮುನಿಗಳು ರಾಮ ಲಕ್ಷ್ಮಣರನ್ನು ಕರೆದು ಕೊಂಡು ಸಿದ್ದಾಶ್ರಮದತ್ತ ಹೆಜ್ಜೆ ಹಾಕ್ತಾರೆ ಇದು ಕೂಡಾ ಶಂಬಲದಲ್ಲಿದೆ. ಅಷ್ಟೇ ಅಲ್ಲ ಭಗವತ್ ಗೀತೆಯಲ್ಲೂ ಶಂಬಲ ನಗರದ ಉಲ್ಲೇಖವಿದೆ. ಇನ್ನು ಕಲ್ಕಿ ಪುರಾಣದ 2ನೇ ಅಧ್ಯಾಯದಲ್ಲೂ  ಶಂಬಲ ನಗರದ ಕುರಿತಾಗಿ  ಹೇಳಲಾಗಿದೆ.

1938 ರಿಂದ 1939 ರ ವರೆಗೆ ಹಿಟ್ಲರ್ ಹುಡುಕಾಟ ಶುರುವಾಗಿತ್ತು.

2ನೇ ಮಹಾಯುದ್ಧದ ಸಮಯದಲ್ಲಿ ಹಿಟ್ಲರ್ ಗೆ ಆ ನಿಗೂಢ  ಸತ್ಯವೊಂದು  ಗೊತ್ತಾಗುತ್ತದೆ. ಆತನು ತನ್ನ ಸೈನಿಕರಿಗೆ ವಿಜ್ಞಾನಿಗಳಲ್ಲಿ ಇನ್ನಷ್ಟು ಶಕ್ತಿ  ಬರುವ ಗುಳಿಗೆಗಳನ್ನು ತಯಾರಿಸುವಂತೆ ಹಿಂಸಿಸುತ್ತಿದ್ದನಂತೆ  ಇದರ ಜೊತೆ ಹಿಟ್ಲರ್  ಹಿಂದೂ ಪುರಾಣಗಳನ್ನು  ಬಹುವಾಗಿ ಓದುತ್ತಿದ್ದ ಈ ಸಂದರ್ಭದಲ್ಲಿ ಆತನಿಗೆ  ಶಂಬಲದ ಕುರಿತಾದ  ಮಾಹಿತಿ ಸಿಗುತ್ತದೆ. ತಕ್ಷಣ ಆತ ಆ ನಗರದ  ಹುಡುಕಾಟಕ್ಕಾಗಿ  ಒಂದು ತಂಡವನ್ನು  ನಿರ್ಮಿಸಿ ಅವರನ್ನು ಹಿಮಾಲಯದ ತಪ್ಪಲಿಗೆ ಕಳುಹಿಸಿದಾಗ ಅವರಿಗೆ ಸಾದುವೊಬ್ಬ ಎದುರಾಗಿ ಆ  ಸ್ಥಳ ಪಾಪ ಮಾಡಿದವರಿಗೆ  ಸಿಗುವುದಿಲ್ಲ ಎಂಬುವುದಾಗಿ ಹೇಳಿ ಕಳುಹಿಸುತ್ತಾನೆ. ಹಾಗೆಯೇ ಈ ಹುಡುಕಾಟ 1938 ರಿಂದ 1939 ರ ವರೆಗೆ ನಿರಂತರವಾಗಿ  ನಡೆಯುತ್ತದೆ.

ಆದರೆ ತಂತ್ರಜ್ಞಾನ ಅದೆಷ್ಟೇ  ಮುಂದುವರಿದರೂ ಜಗತ್ತು ಆಧುನಿಕತೆಗೆ ತೆರೆದುಕೊಂಡರೂ ಇದುವರೆಗೂ ಮ್ಯಾಪ್  ನಲ್ಲಿ  ಹುಡುಕಾಡಿದರೂ ಶಂಬಲ ಎಂಬ ನಗರ ಮಾತ್ರ ದೊರೆಯುತ್ತಿಲ್ಲ  ಹಾಗಂತ ಈ ನಗರ  ಇಲ್ಲ ಎಂದು  ಹೇಳುವುದಕ್ಕಾಗಲ್ಲ  ಯಾಕೆಂದರೆ ಈ ನಗರದ ಕುರಿತಾಗಿ ಪುರಾಣ ಇತಿಹಾಸಗಳಲ್ಲಿ ನಿರಂತರ ಉಲ್ಲೇಖವಾಗಿದೆ. ಜಗತ್ತೂ ಅದೆಷ್ಟೇ ಮುಂದುವರೆದರೂ ತರ್ಕಕ್ಕೆ ನಿಲುಕದ ಅ ದೆಷ್ಟೋ ಸಂಗತಿಗಳು ಇನ್ನೂ ನಡೆಯುತ್ತಿರುವುದು ವಿಪರ್ಯಾಸ…

-ತಾರಾ ವರ್ಕಾಡಿ

ಜೀವನದಲ್ಲಿ ಅಪ್ಪಿ ತಪ್ಪಿಯೂ ಈ 5 ತಪ್ಪುಗಳನ್ನು ಮಾಡಬೇಡಿ..

ಬೆಳಗ್ಗಿನ ಈ 5 ಅಭ್ಯಾಸಗಳು ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ.

ಎಂಥ ಕಷ್ಟ ಬಂದರೂ ಈ ಎರಡು ಮಾತನ್ನ ನೆನಪಿನಲ್ಲಿಡಿ..

 

 

 

- Advertisement -

Latest Posts

Don't Miss