Thursday, June 19, 2025

Latest Posts

Shivaji Maharaj : ತೆರವುಗೊಳಿಸಿದ ಶಿವಾಜಿ ಪ್ರತಿಮೆಯನ್ನು ಮರುಪ್ರತಿಷ್ಠಾಪಿಸುವಂತೆ ಪ್ರತಿಭಟನೆ..!

- Advertisement -

ಹುಬ್ಬಳ್ಳಿ: ಬಾಗಲಕೋಟೆಯಲ್ಲಿ ಇತ್ತೀಚಿಗೆ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಪುತ್ಥಳಿ ತೆರವುಗೊಳಿಸಿದ್ದನ್ನು ಖಂಡಿಸಿ ಹಾಗೂ ಅದೇ ಸ್ಥಳದಲ್ಲಿಯೇ ಮರುಪ್ರತಿಷ್ಠಾಪನೆ ಮಾಡಬೇಕೆಂದು ಆಗ್ರಹಿಸಿ ಮರಾಠಾ ಶ್ರೀ ಭಾರತಿ ಮಠ ಟ್ರಸ್ ಸಮಿತಿ ವತಿಯಿಂದ ನಗರದ ಮಿನಿ ವಿಧಾನಸೌಧದ ಆವರಣದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.

ನಗರದ ತಾಲೂಕು ತಹಶಿಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಬಳಿಕ, ಮರಾಠಾ ಶ್ರೀ ಭಾರತಿಮಠ ಅಧ್ಯಕ್ಷರಾದ ಸುನೀಲ್ ದಳವಿ ಮಾತನಾಡಿ, ೧೬ ಅಡಿ ಎತ್ತರದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯು ತಯಾರಾಗಿದ್ದು, ಈ ಪುತ್ಥಳಿಯನ್ನು ಮೂರ್ತಿ ತೆರವುಗೊಳಿಸಿದ ಸ್ಥಳದಲ್ಲಿಯೇ ಮರು ಪ್ರತಿಷ್ಠಾಪನೆ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಪಡಿಸುತ್ತೇವೆಂದರು.

ಈ ಸಂದರ್ಭದಲ್ಲಿ ಮರಾಠಾ ಶ್ರೀ ಭಾರತಿಮಠದ ಕಾರ್ಯದರ್ಶಿ ನಾರಾಯಣ ವೈದ್ಯ, ವಿವಿಧ ದಲಿತೊರ ಸಂಘಟನೆಗಳ ಮುಖಂಡ ಗುರುನಾಥ ಉಳ್ಳಿಕಾಶಿ, ಶ್ರೀ ಭಾರತಿ ಮಠ ಟ್ರಸ್ಟ್ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಉಪಸ್ಥಿತರಿದ್ದರು.

Eco friendly Ganesh: ನಮ್ಮ ನಿಮ್ಮ ಮನೆಯಲ್ಲಿ ಬರಲಿ ನೈಸರ್ಗಿಕ ಮಣ್ಣಿನ ಗಣೇಶ: ರಜತ್ ಕರೆ

Special pooja: ಚಂದ್ರಯಾದ ಯಶಸ್ವಿಗಾಗಿ ಸಿದ್ದಾರೂಢಾ ಸ್ವಾಮಿಗೆ ರುದ್ರಾಭಿಷೇಕ

Chandrayana-3: ಚಂದ್ರಯಾನದ ಯಶಸ್ವಿಗಾಗಿ ಕೋಲಾರಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದ ಸಂಸದ ಮುನಿಸ್ವಾಮಿ..!

- Advertisement -

Latest Posts

Don't Miss