Saturday, July 27, 2024

Latest Posts

ಹಣೆಗೆ ನಾಮ ಇಟ್ಟವರನ್ನ ಕಂಡ್ರೆ ಸಿದ್ದರಾಮಯ್ಯಗೆ ಯಾಕೆ ಭಯ..?

- Advertisement -

ಬಾಗಲಕೋಟೆ: ರಸ್ತೆ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮದ ಪೂಜೆ ವೇಳೆ ತಿಲಕ ಇಡಲು ಬಂದ ವ್ಯಕ್ತಿಯನ್ನು ಸಿದ್ದರಾಮಯ್ಯ ತಡೆದೇಬಿಟ್ರು.

ಮಾಜಿ ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರ ಬಾದಾಮಿಗೆ ತೆರಳಿ ನಾನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬಾದಾಮಿ ತಾಲೂಕಿನ ಚಿಮ್ಮನಕಟ್ಟಿಯಲ್ಲಿ ರಸ್ತೆ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮದ ವೇಳೆ ನಡೆದ ಪೂಜೆ ವೇಳೆ ಹಣೆಗೆ ನಾಮ ಇಡಲು ಬಂದ ವ್ಯಕ್ತಿಯನ್ನು ಸಿದ್ದರಾಮಯ್ಯ ತಡೆದು ನಿಲ್ಲಿಸಿದ್ರು. ಈ ಹಿಂದೆ ಇದೇ ಬಾದಾಮಿಗೆ ಬಂದಿದ್ದ ಸಿದ್ದರಾಮಯ್ಯ, ನನಗೆ ನಾಮ ಇಟ್ಟವರನ್ನು ಕಂಡರೆ ಭಯ ಅಂತ ಹೇಳಿದ್ರು. ಆದ್ರೆ ಇಂದು ಸ್ವತಃ ತಾವು ನಾಮ ಇಟ್ಟಿಕೊಳ್ಳೋದಕ್ಕೂ ಭಯಪಟ್ಟವರಂತೆ ಸಿದ್ದರಾಮಯ್ಯನವರ ನಡೆ ಭಾಸವಾಯ್ತು.

ಗಗನಕ್ಕೇರಿತು ಚಿನ್ನದ ರೇಟು.. ಆಷಾಢಕ್ಕಾದ್ರೂ ಕಮ್ಮಿಯಾಗುತ್ತಾ ಬೆಲೆ…!!?? ಈ ವಿಡಿಯೋ ತಪ್ಪದೇ ನೋಡಿ

https://www.youtube.com/watch?v=axQ1xqes1mY
- Advertisement -

Latest Posts

Don't Miss