Banglore News:
ಬೆಂಗಳೂರು ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಸರಕಾರದ ಜನಸ್ಪಂದನ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು. ಹಾಗೆಯೇ ಈ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ತಮ್ಮ ಮಾತಿನಲ್ಲೇ ಕಾಂಗ್ರೆಸ್ಸಿಗರಿಗೆ ಚಾಟಿ ಏಟು ನೀಡಿದ್ದಾರೆ. ಹಾಗೆಯೇ ಈ ವಿಚಾರವಾಗಿ ಕಾಂಗ್ರೆಸ್ ನವರು ಕೂಡಾ ಪ್ರತಿ ಉತ್ತರ ನೀಡಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಸಿಟಿ ರವಿ ಅವರನ್ನು ಲೂಟಿ ರವಿ ಎಂಬುವುದಾಗಿ ಹೇಳಲಾಗುತ್ತೆ ಎಂದಿದ್ದಾರೆ. ಹಾಗೆಯೇ ಇದಕ್ಕೆ ಪ್ರತಿಯಾಗಿ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ. ನನ್ನನ್ನು ಲೂಟಿ ರವಿ ಅನ್ನೋದರ ಬಗ್ಗೆ ಚಿಕ್ಕಮಗಳೂರಿಗೆ ಬಂದು ಅವರು ಜನರಲ್ಲಿ ಕೇಳಲಿ ಯಾರನ್ನು ಏನು ಅನ್ನುತ್ತಾರೆ ಎಂದು ಗೊತ್ತಾಗುತ್ತದೆ. ನಾನು ಸಿದ್ದರಾಮಯ್ಯ ಅವರನ್ನು ಕಚ್ಚೆ ಹರುಕ ಎಂದು ಹೇಳ ಬಹುದಲ್ಲವೇ ಇದು ನಾನು ಹೇಳುತ್ತಿರೋದಲ್ಲ ಜನರು ಹೇಳುತ್ತಿರೋದು. ಅವರು ಒಂದು ಗೌರವಯುತ ಸ್ಥಾನದಲ್ಲಿ ಇರುವಾಗ ಹೀಗೆ ಸಿದ್ದರಾಮಯ್ಯ ಮಾತಾಡೋದು ಶೋಭೆ ತರಲ್ಲ ಎಂಬುವುದಾಗಿ ಸಿ.ಟಿ ರವಿ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.
ರಾಜಾಹುಲಿ ಹೇಳಿಕೆಗೆ ಟಗರು ಡಿಚ್ಚಿ..! ಯಡಿಯೂರಪ್ಪ ಹೇಳಿಕೆಗೆ ಸಿದ್ದು ಸಿಡಿ: