ಚಿತ್ರದುರ್ಗ: ನಾಯಕನಹಟ್ಟಿ ಹೋಬಳಿ ದಕ್ಷಿಣ ವಲಯದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ 2023- 24 ಈ ಕ್ರೀಡಾಕೂಟದಲ್ಲಿ ಚಳ್ಳಕೆರೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಸುರೇಶ್ ರವರು ಮಕ್ಕಳಿಗೆ ಕ್ರೀಡ ಪ್ರೋತ್ಸಾಹ ಮತ್ತು ಶಿಕ್ಷಕರಿಗೆ ಅಭಿನಂದಿಸಿದರು.
ಮಕ್ಕಳಿಗೆ ಕ್ರೀಡೆಯಿಂದ ದೇಹ ಮತ್ತು ಮನಸ್ಸು ಸದೃಢಗೊಳ್ಳುತ್ತದೆ. ಕ್ರೀಡೆ ಎನ್ನುವುದು ಹವ್ಯಾಸ ಮತ್ತು ವೃತ್ತಿ ಆಗಬೇಕು . ಯಾವುದೇ ಸಂದರ್ಭದಲ್ಲಿ ಕ್ರೀಡೆಯನ್ನು ಮರೆಯಬಾರದು. ಕ್ರೀಡೆಯನ್ನು ಒಳ್ಳೆಯ ಮನೋಭಾವ ಮತ್ತು ಶಾಂತಿಯಿಂದ ಆಡಬೇಕು ಯಾವುದೇ ಅಸೂಯೆ ದ್ವೇಷ ಬೆಳೆಸಿಕೊಂಡು ಕ್ರೀಡೆಯನ್ನು ಆಡಬಾರದು ಎಂದು ತಿಳಿಸುತ್ತಾ. ಈ ಬಾರಿಯ ಕ್ರೀಡಾ ಯೋಜನೆಯಾದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವರುವು ಇವರಿಗೆ ಧನ್ಯವಾದಗಳು ತಿಳಿಸಿದರು.
ಸಹ ಶಿಕ್ಷಕರು ಶಿಕ್ಷಕಿಯರು ಮುಖ್ಯ ಮುಖ್ಯೋಪಾಧ್ಯಾಯರು ಮಕ್ಕಳಿಗೆ ಧನ್ಯವಾದಗಳು ತಿಳಿಸಿ ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು ಎಂಬ ಕಿವಿ ಮಾತನ್ನು ಹೇಳಿದರು ಈ ಸಂದರ್ಭದಲ್ಲಿ ತಿಪ್ಪೇಸ್ವಾಮಿ. ಅಕ್ಷರ ದಾಸೋಹ ಅಧಿಕಾರಿ ಚಳ್ಳಕೆರೆ ಈರಣ್ಣ – ವರವು ಶಾಲೆ ಮುಖ್ಯೋಪಾಧ್ಯಾಯರು . ಬೋರಯ್ಯ- ಕಾರ್ತಿಕೆ ನಟ್ಟಿ ಶಾಲಾ ಮುಖ್ಯೋಪಾಧ್ಯಾಯರು. ದೈಹಿಕ ಶಿಕ್ಷಕರು ಮಕ್ಕಳು ಶಿಕ್ಷಕರು ಗ್ರಾಮಸ್ಥರು ಬಾಗಿಯಾಗಿದ್ದರು.
Surendran : ಕೇರಳ ಸ್ಟೇಟ್ ಹೈಯರ್ ಗೂಡ್ಸ್ ಓನರ್ಸ್ ಅಸೋಸಿಯೇಷನ್ ಮಂಜೇಶ್ವರ ಮೇಘಲ ಸಮಿತಿಯ ಕುಟುಂಬ ಸಂಗಮ
DK Shivakumar : ಡಿಸಿಎಂ ಡಿಕೆಶಿಗೆ ಬಿಗ್ ರಿಲೀಫ್ : ಸಿಬಿಐ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್