Saturday, July 27, 2024

Latest Posts

‘ಸಚಿವ ಡಿಕೆಶಿ ಶಕುನಿಯಿದ್ದಂತೆ’- ಶ್ರೀರಾಮುಲು ಟಾಂಗ್

- Advertisement -

ಬೆಂಗಳೂರು: ಬಿಜೆಪಿ ಸೇರ್ಪಡೆಯಾಗಲು ಬಿಜೆಪಿಯ ಒಬ್ಬರು ನನಗೆ ಆಫರ್ ನೀಡಿದ್ದರು ಅಂತ ಪರೋಕ್ಷವಾಗಿ ಶ್ರೀರಾಮುಲು ವಿರುದ್ಧ ಆರೋಪ ಮಾಡಿದ್ದ ಸಚಿವ ಡಿಕೆಶಿಗೆ ಇದೀಗ ಶ್ರೀರಾಮುಲು ಟಾಂಗ್ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರೋ ಶ್ರೀರಾಮುಲು, ಬಳ್ಳಾರಿ ನಂದು ಅಂತ ಹೇಳಿಕೊಂಡು ಓಡಾಡುತ್ತಿದ್ದ ಸಚಿವ ಡಿ.ಕೆ ಶಿವಕುಮಾರ್ ಚುನಾವಣೆಯಲ್ಲಿ ಸೋತು ಇವತ್ತು ರಾಜ್ಯದ ಮಂತ್ರಿಯಾಗಿ ಬಳ್ಳಾರಿಗೆ ಕಾಲಿಡೋದಕ್ಕೆ ಹಿಂದೂಮುಂದೂ ನೋಡ್ತಿದ್ದಾರೆ. ಅಲ್ಲಿನ ಸಮಸ್ಯೆ ಕುರಿತು ತಿಳಿದುಕೊಳ್ಳೋದಕ್ಕೂ ಬರುತ್ತಿಲ್ಲ. ರೈತರು ಸಂಕಷ್ಟದಲ್ಲಿದ್ರೂ ಬರುತ್ತಿಲ್ಲ. ಆದ್ರೆ ಕಾಂಗ್ರೆಸ್ ನಲ್ಲಿ ಸಾಕಷ್ಟ ನಾಯಕರು ಶಕುನಿ ರೀತಿ ಕೆಲಸ ಮಾಡುತ್ತಿದ್ದಾರೆ. ಹೇಗೆ ಕೌರವರಿಗೆ ಶಕುನಿಯ ಕುತಂತ್ರ ಯುದ್ಧ ಮುಗಿದ ಮೇಲೆ ತಿಳಿಯುತ್ತೋ ಅದೇ ರೀತಿ ರಾಜಕೀಯದಲ್ಲಿನ ಶಕುನಿಗಳ ಆಟ ಕಾಂಗ್ರೆಸ್ ಗೆ ಕೊನೆಗೆ ಅರಿವಾಗಲಿದೆ ಅಂತ ಸಚಿವ ಡಿ.ಕೆ.ಶಿವಕುಮಾರ್ ರನ್ನು ರಾಮುಲು ಶಕುನಿಗೆ ಹೋಲಿಕೆ ಮಾಡಿದ್ದಾರೆ.

ದೇವೇಗೌಡರು ಹೀಗೆ ಹೇಳಿದ್ದ್ಯಾಕೆ ಗೊತ್ತಾ?? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=QLQ5pKatVlk
- Advertisement -

Latest Posts

Don't Miss