ಬೀದಿನಾಯಿಗಳಿಗೆ ಊಟ ಹಾಕುತ್ತಿದ್ದೀರಾ..?! ಶಿಕ್ಷೆಯಾದೀತು ಹುಷಾರ್ ..!

Dehali News:

ಬೀದಿನಾಯಿ ಸಮಸ್ಯೆಯನ್ನು ಪರಿಹರಿಸಲು ತರ್ಕಬದ್ಧ ಪರಿಹಾರವನ್ನು  ಕಂಡುಹಿಡಿಯಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ವಿಚಾರಣೆಯನ್ನು ಸೆಪ್ಟೆಂಬರ್  28ಕ್ಕೆ ಮುಂದೂಡಲಾಗಿದೆ. ಈ ವಿಷಯದಲ್ಲಿ ಉತ್ತರಗಳನ್ನು ಸಲ್ಲಿಸಲು ಕಕ್ಷಿದಾರರಿಗೆ ತಿಳಿಸಿದೆ. ಬೀದಿ ನಾಯಿಗಳ ಹಾವಳಿ ಪ್ರತಿ ವರ್ಷ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಬೀದಿ ನಾಯಿಗಳ ಕಾಟಕ್ಕೆ ಪರಿಹಾರ ಕಂಡುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿರುವ ಸುಪ್ರೀಂ ಕೋರ್ಟ್ ಬೀದಿ ನಾಯಿಗಳಿಗೆ ಪ್ರತಿದಿನ ಆಹಾರ ನೀಡುವ ಜನರಿಗೆ ಅವುಗಳ ಲಸಿಕೆಯ ಜವಾಬ್ದಾರಿಯನ್ನು ನೀಡಬಹುದು. ಒಂದುವೇಳೆ ಅವರು ಆಹಾರ ಹಾಕುವ ಬೀದಿ ನಾಯಿಗಳು ಜನರ  ಮೇಲೆ ದಾಳಿ ಮಾಡಿದರೆ ಅವರೇ ಆ ವೆಚ್ಚವನ್ನು ಭರಿಸಬೇಕಾಗುತ್ತದೆ ಎಂದು ಆದೇಶ ನೀಡಿದೆ ಎಂದು  ತಿಳಿದು  ಬಂದಿದೆ.

ಜನಸ್ಪಂದನಕ್ಕೆ ಕಳಶ ಹೊತ್ತು ಬಂದ ಮಹಿಳೆಯರು…!

ಸುಧಾಕರ್ ಕ್ಷೇತ್ರದಿಂದಲೇ ಜನಸ್ಪಂದನಕ್ಕೆ 50ಸಾವಿರ ಜನರು..?!

ಬೆಂಗಳೂರಲ್ಲಿ ಕೇಸರಿ ಜನಸ್ಪಂದನೆ…!

 

 

 

About The Author