- Advertisement -
Film News: ತೆಲುಗು ಚಿತ್ರರಂಗದ ಯುವನಟನೊಬ್ಬ ಪತ್ರಕರ್ತರ ಮೇಲೆ ಸಿಟ್ಟಾಗಿ ಸಿನಿಮಾದ ಸಕ್ಸಸ್ ಮೀಟ್ ಕಾರ್ಯಕ್ರಮದಿಂದ ಎದ್ದು ಹೊರ ಹೋಗಿರುವ ಘಟನೆ ನಡೆದಿದೆ. ನಟನ ಕೋಪದ ಬಗ್ಗೆ ಋಣಾತ್ಮಕ ಕಮೆಂಟ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ನಾಗಶೌರ್ಯ ನಟಿಸಿರುವ ‘ರಂಗಬಲಿ’ ಹೆಸರಿನ ಇತ್ತೆಚೆಗೆ ಬಿಡುಗಡೆ ಆಗಿ ಸಾಧಾರಣ ಹಿಟ್ ಎನಿಸಿಕೊಂಡಿದೆ. ಇದರ ಬೆನ್ನಲ್ಲೆ ಸಿನಿಮಾವು ಪತ್ರಕರ್ತರನ್ನು ಆಹ್ವಾನಿಸಿ ಸಿನಿಮಾದ ಸಕ್ಸಸ್ ಮೀಟ್ ಆಯೋಜನೆ ಮಾಡಿತ್ತು. ಕಾರ್ಯಕ್ರಮದಲ್ಲಿ ಸಿನಿಮಾದ ಯಶಸ್ಸಿನ ಬಗ್ಗೆ, ಸಿನಿಮಾವನ್ನು ಗೆಲ್ಲಿಸಿದ ಪ್ರೇಕ್ಷಕರಿಗೆ ಧನ್ಯವಾದವನ್ನು ಚಿತ್ರತಂಡ ಹೇಳಿತು. ಪತ್ರಕರ್ತರು ಪ್ರಶ್ನೆ ಕೇಳುವ ಸಂದರ್ಭ ಬಂದಾಗ ಸಿನಿಮಾದಲ್ಲಿದ್ದ ಸಮಸ್ಯೆಯೊಂದರ ಬಗ್ಗೆ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದರು. ಇದು ನಾಗಶೌರ್ಯ ಅವರ ಸಿಟ್ಟಿಗೆ ಕಾರಣವಾಯಿತು.
- Advertisement -