ಸಿನಿಮಾ ಸುದ್ದಿ:ನಟ ಸುದೀಪ್ ಮತ್ತು ನಿರ್ಮಾಪಕ ಎಂ ಎನ್ ಕುಮಾರ್ ನಡುವಿನ ವಾದವನ್ನು ಬಗೆಹರಿಸಲು ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಸಾರಾ ಗೋವಿಂದ ಅವರು ಸುದೀಪ್ ಅವರಿಗೆ ವಾಣಿಜ್ಯ ಮಂಡಳಿಗೆ ಬಂದು ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಮನವಿ ಮಾಡಿದರು
ಸಮಸ್ಯೆ ಬಗೆಹರಿಸಿ ಹಣ ಕೊಡಿಸುವಂತೆ ವಾಣಿಜ್ಯ ಮಂಡಳಿ ಮುಂದೆ ಧರಣಿ ಕೂತಿರುವ ನಿರ್ಮಾಪಕ ಎಂ ಎನ್ ಕುಮಾರ್ ಅವರಿಗೆ ಸಾರಾ ಗೋವಿಂದ ಅವರು ನೀವು ಕೇಳಿದ ತಕ್ಷಣ ಹಣ ಕೊಡಿಸಲು ಸಾಧ್ಯವಿಲ್ಲ ಅವರು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಇದ್ದವರು ಅವರು ವಾಣಿಜ್ಯ ಮಂಡಳಿಗೆ ಬಂದಿದ್ದರೆ 15-20 ನಿಮಿಷಗಳಲ್ಲಿ ಸಮಸ್ಯೆ ಬಗೆಹರಿಸಬಹುದಿತ್ತು ಆದರೆ ಅವರು ಕೋರ್ಟ್ ಮೊರೆ ಹೋಗಿದ್ದಾರೆ. ಈ ಹಿಂದೆ ವಾಣಿಜ್ಯ ಮಂಡಳಿ ಹಲವಾರು ಸಮಸ್ಯೆಗಳನ್ನು ಬಗೆಹರಿಸಿದೆ .
ನಮ್ಮವರೇ ಆದ ಸುದೀಪ್ ಕನ್ನಡದ ನಟರು ಸುದೀಪ್ ನಮ್ಮ ಹೆಮ್ಮೆ ವಾಣಿಜ್ಯ ಮಂಡಳಿಗೆ ಬಂದು ಕುಮಾರ್ ಹೇಳುತ್ತಿರುವುದು ಸುಳ್ಳಾ ಅಥವಾ ಸತ್ಯವಾ ಎಂದು ನೀವೆ ಹೇಳಬೇಕು ಒಬ್ಬ ನಿರ್ಮಾಪಕನ ಮೇಲೆ ಹತ್ತು ಕೋಟಿ ಮಾನನಷ್ಟ ಮೊಕದೊಮ್ಮೆ ಹೂಡುವುದು ಸರಿಯಲ್ಲ .ಎಂದಿದ್ದಾರೆ ಮಾಜಿ ಅಧ್ಯಕ್ಷ ಸಾರಾ ಗೋವಿಂದ.
Siddaramaiah : ದಲಿತರ ಹಿತ ಕಾಪಾಡುವಲ್ಲಿ ರಾಜಿ ಇಲ್ಲ: ಸಿಎಂ ಸಿದ್ದರಾಮಯ್ಯ
HD Kumaraswamy : ಕಾಂಗ್ರೆಸ್ ನಿಂದ ಐಎಎಸ್ ಅಧಿಕಾರಿಗಳ ದುರ್ಬಳಕೆ – ಕುಮಾರಸ್ವಾಮಿ ಗಂಭೀರ ಆರೋಪ