Monday, December 22, 2025

#cmsiddaramaiah

CM ನಾನೇ ಅಂತಾ ಎದೆ ಬಡಿದುಕೊಳ್ಳುವ ಪರಿಸ್ಥಿತಿ ಸಿದ್ದರಾಮಯ್ಯಗೆ ಬರಬಾರದಿತ್ತು

ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಸಿದ್ದರಾಮಯ್ಯ ಅವರ ನಾಯಕತ್ವ ಕುರಿತು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ನಾನೇ ಐದು ವರ್ಷ ಮುಖ್ಯಮಂತ್ರಿ ಅಂತಾ ಎದೆ ಬಡಿದುಕೊಂಡು ಹೇಳುವ ಪರಿಸ್ಥಿತಿ ಸಿದ್ದರಾಮಯ್ಯಗೆ ಬರಬಾರದಿತ್ತು ಎಂದು ಕಟುವಾಗಿ ಟೀಕೆ ಮಾಡಿದರು. ಮೈಸೂರಿನಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಈಗ ಎರಡು ಮುಖಗಳ ನಡುವೆ ಸಿಲುಕಿದ್ದಾರೆ ಎಂದು ಹೇಳಿ,...

ಕೈಗೆ ಮತ್ತೊಬ್ಬ ಟ್ರಬಲ್‌ ಶೂಟರ್‌ : ಸಿದ್ದು ʼಕೈʼ ಬಲ ಪಡಿಸಿದ್ಯಾರು ?

ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಕುರಿತು ಚರ್ಚೆಗಳು ಮತ್ತೆ ಜೋರಾಗಿವೆ. ಕಾಂಗ್ರೆಸ್ ಪಾಳಯದಲ್ಲಿ ಡಿಕೆ ಶಿವಕುಮಾರ್ ಬಣ ಮತ್ತು ಸಿದ್ದರಾಮಯ್ಯ ಬಣದ ನಡುವೆ ಮನಸ್ತಾಪ ಹೆಚ್ಚಾಗಿದೆ. ಡಿಕೆಶಿ ಪರ ವಲಯ ಶಾಸಕರನ್ನು ತಮ್ಮ ಕಡೆಗೆ ತರಲು ಶ್ರಮಿಸುತ್ತಿದ್ದರೆ, ಇತ್ತ ಮುಖ್ಯಮಂತ್ರಿಗಳ ಪುತ್ರ ಯತೀಂದ್ರ ಸಿದ್ದರಾಮಯ್ಯ ಉತ್ತರ ಕರ್ನಾಟಕದ ಕಾಂಗ್ರೆಸ್ ಶಾಸಕರನ್ನು ಒಗ್ಗೂಡಿಸುವ ಕೆಲಸದಲ್ಲಿ ತೊಡಗಿದ್ದಾರೆ. ಅಪ್ಪನ...

ಹೈಕಮಾಂಡ್ ಹೇಳಿದ್ರೆ ಸಾಕು ನಾನೂ ಒಪ್ಪಬೇಕು…ಡಿಕೆ ಕೂಡ!

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ ಭೂಮಿ ಪೂಜೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಧ್ಯಮಗಳೊಂದಿಗೆ ಮಾತನಾಡಿ ಸಚಿವ ಸಂಪುಟ ಪುನಾರಚನೆ ಕುರಿತು ಸ್ಪಷ್ಟನೆ ನೀಡಿದ್ದಾರೆ. ಹೈಕಮಾಂಡ್ 4-5 ತಿಂಗಳ ಹಿಂದೆಷ್ಟೇ ಸಂಪುಟ ಪುನರ್‌ರಚನೆ ಮಾಡಬಾರದೆಂದು ಸೂಚಿಸಿತ್ತು. ಎರಡೂವರೆ ವರ್ಷ ಪೂರೈಸಿದ ನಂತರ ವಿಚಾರ ಮಾಡೋಣ ಎಂದು ಹೇಳಲಾಗಿತ್ತು. ಹೈಕಮಾಂಡ್ ಏನು ತೀರ್ಮಾನಿಸುತ್ತದೆಯೋ, ಅದರಂತೆ...

ಸಿಎಂ ಕ್ಷೇತ್ರದಲ್ಲೇ ಶಾಲಾ ಅಕ್ರಮ? ವಿದ್ಯಾರ್ಥಿಗಳಿಂದ ಶೌಚಾಲಯ ಕ್ಲೀನ್

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರದ ಬಿಳಿಗೆರೆಹುಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳಿಂದ ಸಂಪ್‌ನಿಂದ ನೀರು ಸೇದಿಸಿ ಶಾಲೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸಿದ್ದಾರೆಯೆಂಬ ವಿಷಯ ಬೆಳಕಿಗೆ ಬಂದು ಆಕ್ಷೇಪ ಎದುರಿಸುತ್ತಿದೆ. ಘಟನೆ ಕೆಲವು ದಿನಗಳ ಹಿಂದೆ ನಡೆದಿದ್ದು, ನವೆಂಬರ್ 20ರಂದು ಗ್ರಾಮಸ್ಥ ಸಿದ್ದರಾಜು ಅವರು ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ...

ಪವರ್ ಶೇರಿಂಗ್ ಬಗ್ಗೆ ಸುರೇಶ್ ಶಾಕಿಂಗ್ ಹೇಳಿಕೆ : ಸಿದ್ದುಗೆ ಕೊಟ್ಟ ಮಾತು ನೆನಪಿಸಿದ್ರಾ ಡಿಕೆ ಬ್ರದರ್

ಕರ್ನಾಟಕ ರಾಜಕೀಯದಲ್ಲಿ ಪವರ್‌ಶೇರಿಂಗ್ ಪೈಪೋಟಿ ಮತ್ತೆ ತೀವ್ರಗೊಂಡಿದೆ. ಎರಡೂವರೆ ವರ್ಷಗಳ ಕಾಲ ಅಧಿಕಾರ ನಡೆಸಿದ ಬಳಿಕ ಸಿಎಂ ಸಿದ್ದರಾಮಯ್ಯ ಕುರ್ಚಿ ಬಿಟ್ಟು, ಡಿಸಿಎಂ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ ಎಂಬ ರಾಜಕೀಯ ಚರ್ಚೆ ಈಗ ಕಾವೇರುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಪವರ್ ಶೇರಿಂಗ್ ಮಾತು ಕೇಳಿ ಬಂದಿದ್ದರೂ, ಇದೀಗ ‘ಕೊಟ್ಟ ಮಾತು’...

ಸಿದ್ದರಾಮಯ್ಯ 2.0 ಸರ್ಕಾರಕ್ಕೆ 2.5 ವರ್ಷ : ಮುಂದಿನ ಬಜೆಟ್ ನಾನೇ ಮಂಡಿಸ್ತೀನಿ

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ಚರ್ಚೆ ತೀವ್ರಗೊಂಡಿದೆ. ಈ ಹಿನ್ನೆಲೆ, ಕಾಂಗ್ರೆಸ್ ಹೈಕಮಾಂಡ್ ದೊಡ್ಡ ಇಕ್ಕಟ್ಟಿಗೆ ಸಿಲುಕಿದೆ. ಡಿ.ಕೆ.ಶಿ ಅವರ ನಾಯಕತ್ವ ಬೇಡಿಕೆ ಮತ್ತು ‘ನವೆಂಬರ್ ಕ್ರಾಂತಿ’ ವದಂತಿಗಳು ಪಕ್ಷದ ಒಳಾಂಗಣದಲ್ಲಿ ಬಿಸಿ ಹುಟ್ಟಿಸಿದರೂ—ಎಐಸಿಸಿ ಸದ್ಯಕ್ಕೆ ಯಥಾಸ್ಥಿತಿ ‘ಬೆಸ್ಟ್’ ಎಂಬ ನಿರ್ಧಾರಕ್ಕೆ ಬಂದಿದೆ. ನಾಯಕತ್ವ ಬದಲಾವಣೆ ಅಥವಾ...

ಚಾಮರಾಜನಗರದಲ್ಲಿ ಸಿಎಂ ಪವರ್‌ ಶೋ : ಅಧಿಕಾರ ಗಟ್ಟಿ ಎಂಬ ಮುನ್ಸೂಚನೆಯೇ?

ಬಿಹಾರ ಚುನಾವಣಾ ಫಲಿತಾಂಶದ ರಾಜಕೀಯ ಪರಿಣಾಮಗಳ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ‘ಅಧಿಕಾರ ಗಟ್ಟಿಯಾಗುತ್ತಿದೆ’ ಎಂಬ ಸಂದೇಶದೊಡನೆ ನವೆಂಬರ್ 20ರಂದು ಚಾಮರಾಜನಗರಕ್ಕೆ ಆಗಮಿಸುತ್ತಿದ್ದಾರೆ. ರಾಜ್ಯ ಮಟ್ಟದ 72ನೇ ಸಹಕಾರ ಸಪ್ತಾಹ ಸಮಾರೋಪ ಕಾರ್ಯಕ್ರಮಕ್ಕಾಗಿ ಜಿಲ್ಲಾಮಟ್ಟದಲ್ಲಿ ಭಾರೀ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಹಕಾರ ಇಲಾಖೆಯ ಆಶ್ರಯದಲ್ಲಿ ಹಾಗೂ ಜಿಲ್ಲೆಯ ಹಲವಾರು ಹಾಲು ಒಕ್ಕೂಟಗಳ ಸಹಯೋಗದಲ್ಲಿ ಸಮಾರೋಪ ಸಮಾರಂಭವನ್ನು...

ಸಿದ್ದು ತವರು ಮೈಸೂರಲ್ಲಿ ಹಿಂದೂ ಹುಲಿ ಸಂಚಾರ!

ರಾಜ್ಯ ರಾಜಕೀಯದಲ್ಲಿ ಸದಾ ಚರ್ಚೆಯಲ್ಲಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಜಯಪುರ ಶಾಸಕ ಮತ್ತು ಹಿಂದು ಹುಲಿ ಎಂದೇ ಖ್ಯಾತಿ ಪಡೆದವರು. ಬಸನಗೌಡ ಪಾಟೀಲ್ ಯತ್ನಾಳ್, ಈ ಬಾರಿ ನೇರವಾಗಿ ಸಿಎಂ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಿನಲ್ಲೇ ರಾಜಕೀಯ ಪೈಪೋಟಿಗೆ ಪದಾರ್ಪಣೆ ಮಾಡಲಿದ್ದಾರೆ. ಹಿಂದೂ ಜಾಗೃತಾ ವೇದಿಕೆ ಆಯೋಜಿಸಿರುವ ಈ ಮಹಾಸಭೆ ಈಗ ಮೈಸೂರು...

ದೆಹಲಿಯಿಂದ ಬಂದ ಕೂಡಲೇ 2 ದಿನ ಮೈಸೂರಿಗೆ ಸಿದ್ದರಾಮಯ್ಯ

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಗೊಂದಲ ಬಗೆಹರಿದಿಲ್ಲ. ಸಚಿವ ಸಂಪುಟ ಪುನರ್‌ರಚನೆ ಕುರಿತ ಚರ್ಚೆಗಳು ಗರಿಗೆದರಿದೆ. ಕಾಂಗ್ರೆಸ್‌ನಲ್ಲಿ ಬಣಗಳ ರಾಜಕೀಯ ತೀವ್ರಗೊಂಡಿರುವ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್ 20 ಮತ್ತು 21ರಂದು ಮೈಸೂರು ಜಿಲ್ಲೆಯ ಪ್ರವಾಸ ಕೈಗೊಳ್ಳುತ್ತಿದ್ದಾರೆ. ನವೆಂಬರ್ 20ರಂದು ಮಧ್ಯಾಹ್ನ 3.20ಕ್ಕೆ ಸಿಎಂ ಮೈಸೂರಿಗೆ ಆಗಮಿಸಲಿದ್ದು, ನಗರದಲ್ಲೇ ವಾಸ್ತವ್ಯ ಇರಲಿದ್ದಾರೆ. ನವೆಂಬರ್ 21ರಂದು ಬೆಳಗ್ಗೆ...

ದೆಹಲಿಯಲ್ಲಿ ಸಿದ್ದರಾಮಯ್ಯ ಅಂಡ್ ಟೀಂ – ಖರ್ಗೆ ಜೊತೆ ಮಹತ್ವದ ಚರ್ಚೆ ನಡೆಸಿದ ಸಿಎಂ

ಕರ್ನಾಟಕ ರಾಜ್ಯ ರಾಜಕಾರಣದ ಆಟ ದೆಹಲಿಯಲ್ಲಿ ಜೋರಾಗಿದೆ. ರಾಜ್ಯ ರಾಜಕೀಯದಲ್ಲಿ ಚಟುವಟಿಕೆಗಳು ತೀವ್ರವಾಗುತ್ತಿದ್ದಂತೆ ಸಂಪುಟ ಸರ್ಜರಿ ವಿಚಾರ ಮತ್ತಷ್ಟು ವೇಗ ಪಡೆದಿದೆ. ಕೆಲ ದಿನಗಳ ಹಿಂದೆ ದೆಹಲಿಗೆ ತೆರಳಿದ ಸಿಎಂ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ–ಸೋನಿಯಾ ಗಾಂಧಿ ಭೇಟಿ ಮೂಲಕ ಸಂಪುಟ ಪುನರ್‌ರಚನೆಗೆ ಗ್ರೀನ್ ಸಿಗ್ನಲ್ ಪಡೆದಿದ್ದರು. ರಾಹುಲ್ ಗಾಂಧಿ ಕೂಡ ಖರ್ಗೆ ಅವರಿಗೆ...
- Advertisement -spot_img

Latest News

ಗ್ರಾಮ ಅಭಿವೃದ್ಧಿ ಸಭೆಯಲ್ಲಿ ಶಾಸಕರ ತೀವ್ರ ಅಸಮಾಧಾನ!

ಶಿಗ್ಗಾಂವ-ಸವಣೂರು ಶಾಸಕ ಯಾಸೀರ ಖಾನ್ ಪಠಾಣ್ ವಿವಿಧ ಅಭಿವೃದ್ಧಿ ಕಾಮಗಾರಿ ಸಭೆಗಳ ವೇಳೆ ಅಧಿಕಾರಿಗಳ ಕಾರ್ಯವೈಖರಿಯ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥರು ಅಧಿಕೃತ ಕ್ರಮದಲ್ಲಿ...
- Advertisement -spot_img