Monday, March 2, 2026

Congress

‘ಬೆಂಗಳೂರು ಓಡಿಸ್ತೀನಿ, ಊರು ಬಿಡಿಸುತ್ತೀನಿ ಅಂದವರಿಗೆ ಚುನಾವಣೆ ಫಲಿತಾಂಶ ಬರಲಿದೆ’

ಹಾಸನ: ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಾಯಕರು ಹಾಗೂ ಇಡೀ ಕುಟುಂಬವೇ ಬಂದು ನನ್ನ ಮೇಲೆ ಸವಾರಿ ಮಾಡಿದ್ರು ಕೂಡ ಹಾಸನ ಜನತೆ ನನಗೆ ಆಶೀರ್ವದಿಸಿದ್ದಾರೆ ಎಂದು ಚುನಾವಣೆ ಮುಗಿದ ನಂತರ ಹಾಸನ ಶಾಸಕ, ಪ್ರೀತಂ ಗೌಡ ತಮ್ಮ ಮಾತುಗಳನ್ನು ಮಾಧ್ಯಮದ ಮುಂದೆ ಹೇಳಿಕೊಂಡರು. ತಮ್ಮ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನನ್ನವಧಿಯಲ್ಲಿ ಸಾಧ್ಯವಾದಷ್ಟು ಅಭಿವೃದ್ಧಿ ಕೆಲಸ...

‘ಅತಂತ್ರ ಬರುವ ಪ್ರಶ್ನೆ ನಮ್ಮ‌ ಮುಂದೆ ಇಲ್ಲ, ಜೆಡಿಎಸ್ ಅಭ್ಯರ್ಥಿಗಳೇ ಗೆಲ್ಲುವುದು’

ಮಂಡ್ಯ: ಮಂಡ್ಯದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಸುದ್ದಿಗೋಷ್ಠಿ ನಡೆಸಿದ್ದು, ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿಯೂ ಹಲವು ಸಮೀಕ್ಷೆಗಳು ಜೆಡಿಎಸ್‌ ಲೆಕ್ಕಕ್ಕೆ ಇಲ್ಲ ಎಂದು ಹೇಳ್ತಾ ಇದ್ದವು. ಕುಮಾರಸ್ವಾಮಿ ಅವರ ಪಂಚರತ್ನ ಪ್ರವಾಸ ನಮಗೆ ಶಕ್ತಿ ನೀಡಿದೆ. ದೇವೇಗೌಡರು ಚುನಾವಣೆ ಪ್ರಚಾರ ಮಾಡಿರುವುದು ನಮಗೆ ಬಲ ತಂದಿದೆ....

ಧರ್ಮಸ್ಥಳದಲ್ಲಿ ಮದುವೆ ಮುಗಿಸಿ, ಹಾಸನಕ್ಕೆ ಬಂದು ಓಟ್ ಮಾಡಿದ ಮಧುಮಗ

ಹಾಸನ: ಮದುವೆ ದಿನ ಅಂದರೆ, ಅದು ಪ್ರತಿಯೊಬ್ಬರ ಬಾಳಲ್ಲಿ, ವಿಶೇಷವಾಾದ ದಿನವಾಗಿರುತ್ತದೆ. ಆರಾಮವಾಗಿ ಮದುವೆಯಾಗಿ, ಖುಷಿ ಖುಷಿಯಾಗಿ ಮದುವೆಯನ್ನ ಎಂಜಾಯ್‌ ಮಾಡಿಕೊಂಡು, ಆ ದಿನವನ್ನ ಎಂಡ್ ಮಾಡಲಾಗುತ್ತದೆ. ಆದರೆ ಇಲ್ಲೋರ್ವ ವ್ಯಕ್ತಿ ತಮ್ಮ ಮದುವೆಯನ್ನ ಇದಕ್ಕಿಂತ ವಿಶೇಷವಾಗಿ ಮಾಡಿಕೊಂಡಿದ್ದಾರೆ. ಹಾಸನದ ಸಕಲೇಶಪುರದ ಮಹೇಶ್ವರಿ ನಗರದ ನಿವಾಸಿ, ರೋಹಿತ್ ಎಂಬುವವರು ಇಂದು ಧರ್ಮಸ್ಥಳದಲ್ಲಿ, ಶ್ರೀ ಮಂಜುನಾಥೇಶ್ವರನ ಆಶೀರ್ವಾದದೊಂದಿಗೆ...

ಮತದಾನ ಮಾಡಿ, ಕಾಲಿಗೆ ಶಾಹಿ ಹಾಕಿಸಿಕೊಂಡ ವಿಶೇಷಚೇತನ ವ್ಯಕ್ತಿ..

ಬಳ್ಳಾರಿ : ಇಂದು ರಾಜ್ಯದಲ್ಲಿ ನಡೆದ ಚುನಾವಣೆ ನಡೆದಿದ್ದು, ತುಂಬು ಗರ್ಭಿಣಿ, ಬಾಣಂತಿ, ವಿಕಲಚೇತನರು, ಶತಾಯುಷಿಗಳು ಹೀಗೆ ಹಲವಾರು ಜನ ಮತ ಚಲಾಯಿಸಿದ್ದಾರೆ. ಆದರೆ ಬಳ್ಳಾರಿಯಲ್ಲಿ ಓರ್ವ ವಿಶೇಷಚೇತನ ವ್ಯಕ್ತಿ ಮತ ಚಲಾಯಿಸಿದ್ದಾರೆ. ಅವರಿಗೆ ಕೈ ಇಲ್ಲವಾಗಿದ್ದು, ಅವರ ಕಾಲಿಗೆ ಶಾಯಿ ಹಾಕಲಾಗಿದೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕೊಳಗಲ್ಲು ಗ್ರಾಮದ ಮುಸ್ತಫಾ ಎಂಬ ವ್ಯಕ್ತಿ ಈ...

ಮತಗಟ್ಟೆ ಆವರಣದಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ..

ಬಳ್ಳಾರಿ: ಪ್ರತೀ ಬಾರಿ ರಾಜ್ಯದಲ್ಲಿ ಚುನಾವಣೆ ನಡೆಯುವಾಗ ಒಂದಿಲ್ಲೊಂದು ವಿಚಿತ್ರ ಘಟನೆ ನಡೆಯುತ್ತಲೇ ಇರುತ್ತದೆ. ಮತಗಟ್ಟೆಯಲ್ಲೇ ಮರಣ ಹೊಂದುವುದು, ಹೆರಿಗೆಯಾಗುವುದು ಇಂಥ ಅಪರೂಪದ ಘಟನೆ ನಡೆಯುತ್ತಲೇ ಇರುತ್ತದೆ. ಇಂದು ಕೂಡ ಬಳ್ಳಾರಿಯ ಮತಗಟ್ಟೆ ಆವರಣದಲ್ಲಿ ಓರ್ವ ಗರ್ಭಿಣಿ, ಮಗುವಿಗೆ ಜನ್ಮ ನೀಡಿದ್ದಾಳೆ. ಇಲ್ಲಿಯ ಕುರುಗೋಡು ತಾಲೂಕಿನ ಕೊರ್ಲಗುಂದಿ ಗ್ರಾಮದ ಮತದಾನ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು,...

ಹೆಲಿಕಾಪ್ಟರ್‌ನಲ್ಲಿ ಬಂದಿಳಿದು, ಮತ ಚಲಾಯಿಸಿದ ದೇವೇಗೌಡರು..

ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಹಾಸನದ ಹೊಳೆನರಸಿಪುರಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ, ಮತ ಚಲಾಯಿಸಿದರು. ಬೆಂಗಳೂರಿನಿಂದ ಹೊರಟ ಹೆಲಿಕಾಪ್ಟರ್ ಹೊಳೆನರಸಿಪುರದ, ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಲ್ಯಾಂಡಿಂಗ್ ಆಯಿತು. ಇದಾದ ಬಳಿಕ, ಹೊಳೆನರಸಿಪುರ ಪಡುವಲಹಿಪ್ಪೆ ಗ್ರಾಮಕ್ಕೆ ಆಗಮಿಸಿ, ಮತಗಟ್ಟೆ ಸಂಖ್ಯೆ 251ರಲ್ಲಿ ಮತ ಚಲಾಯಿಸಿದರು. ಇವರೊಂದಿಗೆ ಪತ್ನಿ ಚೆನ್ನಮ್ಮ ಮತ ಚಲಾಯಿಸಿ, ದೇವೇಗೌಡರಿಗೆ ಸಾಥ್...

ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತ ಚಲಾಯಿಸಿದ ರಾಜಕೀಯ ನಾಯಕರು..

ಮಂಡ್ಯ: ಮಂಡ್ಯ ಸಂಸದೆ ಸುಮಲತಾ ಅಂಬರೀಷ್, ಮಂಡ್ಯದ ದೊಡ್ಡರಸಿಕೆರೆ ಗ್ರಾಮದ ಮತಗಟ್ಟೆಗೆ ಬಂದು ಮತದಾನ ಮಾಡಿದರು. ಈ ಬಗ್ಗೆ ತಮ್ಮ ಫೇಸ್‌ಬುಕ್ನಲ್ಲಿ ಪೋಸ್ಟ್‌ ಮಾಡಿರುವ ಸುಮಲತಾಾ, ಮತದಾನ ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯ ಕೂಡ. ಅಮೂಲ್ಯವಾದ ಮತದಾನ ಮಾಡುವ ಮೂಲಕ ಪ್ರಜ್ಞಾವಂತ ಅಭ್ಯರ್ಥಿಯ ಆಯ್ಕೆಯಲ್ಲಿ ಭಾಗಿಯಾಗಿರುವೆ. ತಾವೂ ಕೂಡ ಸಂಜೆ 6 ಗಂಟೆ ಒಳಗೆ...

ಅಜ್ಜಿಯೊಂದಿಗೆ ಡಾಲಿ ಓಟಿಂಗ್: ಕೆರಾಡಿಗೆ ಹೋಗಿ ವೋಟ್ ಮಾಡಿದ ರಿಷಬ್..

ಅರಸೀಕೆರೆ: ಸ್ಯಾಂಡಲ್ ವುಡ್ ನ ಖ್ಯಾತ ನಟ ಡಾಲಿ ಧನಂಜಯ್ ತಮ್ಮ ಹುಟ್ಟೂರಾದ ಕಾಳೇನ ಹಳ್ಳಿ ಹಟ್ಟಿ ಮತಗಟ್ಟೆ ಸಂಖ್ಯೆ 217 ಕೆ ತನ್ನ ಅಜ್ಜಿ ಮಲ್ಲಮ್ಮ ಸಹೋದರ ಗಿರೀಶ ಹಾಗೂ ಸಹೋದರಿ ರಾಣಿಯೊಂದಿಗೆ ಆಗಮಿಸಿ ತಮ್ಮ ಮತ ಚಲಾಯಿಸಿದರು. ಕೆರಾಡಿ: ಕುಂದಾಪುರದ ಬೈಂದೂರಿನ ಕೆರಾಡಿಯಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸರತಿ ಸಾಲಿನಲ್ಲಿ ನಿಂತು...

ಮತಗಟ್ಟೆಗೆ ಬಂದು ವೋಟ್ ಮಾಡಿದ ಶತಾಯುಷಿಗಳು..

ಮಹದೇವಪುರ: ಈ ಬಾರಿ ಚುನಾವಣೆಯಲ್ಲಿ ವೃದ್ಧರಿಗೆ ಮತಗಟ್ಟೆಗೆ ಬರಲಾಗುವುದಿಲ್ಲವೆಂದು, ಮನೆಯಲ್ಲೇ ಕುಳಿತು ಓಟ್ ಮಾಡುವ ಅವಕಾಶ ಕೊಟ್ಟಿದ್ದರೂ ಕೂಡ, ಕೆಲವು ಶತಾಯುಶಿಗಳು ಮತಗಟ್ಟೆಗೆ ಬಂದು, ವೋಟ್ ಮಾಡಿದ್ದಾರೆ. ಮಹದೇವಪುರದ, ಮಂಡೂರಿನ ಶತಾಯುಷಿ ಕಮಲಮ್ಮ ನಾರಾಯಣಸ್ವಾಮಿ (103) ಅವರು ತಮ್ಮ ಮೊಮ್ಮಗ ತೇಜಸ್ ಗೌಡರೊಂದಿಗೆ ಆಗಮಿಸಿ, ಮತದಾನ ಮಾಡಿದ್ದಾರೆ. ಯಾದಗಿರಿ: ಸುರಪುರ ತಾಲೂಕಿನ ನಗನೂರಿನಲ್ಲಿ 105 ವರ್ಷದ...

ಪ್ರೀತಂ, ಸ್ವರೂಪ್ ಸೇರಿ ಹಲವು ಅಭ್ಯರ್ಥಿಗಳಿಂದ ವೋಟಿಂಗ್..

ಹಾಸನ: ಹಾಸನದ ಮತಗಟ್ಟೆಯಲ್ಲಿ ಶಾಸಕ ಪ್ರೀತಂಗೌಡ ಮತ ಚಲಾಯಿಸಿದ್ದು, ಅವರಿಗೆ ಅವರ ಪತ್ನಿ ಸಾಥ್ ಕೊಟ್ಟಿದ್ದಾರೆ. ಇನ್ನೊಂದೆಡೆ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಕೂಡಾ ಪತತ್ನಿಯೊಂದಿಗೆ ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಿ, ಬಳಿಕ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ಕೋಲಾರ : ಕೋಲಾರದ ಬಿಜೆಪಿ ಅಭ್ಯರ್ಥಿ ವರ್ತೂರು ಪ್ರಕಾಶ್, ಕೋಲಾರದ ಸೆವೆಂತ್ ಡೇ ಅಡ್ವೆಟಿಂಸ್ಟ್ ಆಂಗ್ಲ ಪ್ರಾಥಮಿಕ...
- Advertisement -spot_img

Latest News

Shivamogga: ದುಬೈನಲ್ಲಿರುವ ಕನ್ನಡಿಗರೆಲ್ಲ ಸುರಕ್ಷಿತವಾಗಿದ್ದಾರೆ: ಸಿಎಂ ಸಿದ್ದರಾಮಯ್ಯ

Political News: ಇರಾನ್‌ನ ಸರ್ವೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಹತ್ಯೆ ಬಗ್ಗೆ ಮತ್ತು ದುಬೈನಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮದ ಜತೆ...
- Advertisement -spot_img