Monday, April 6, 2026

Dharwad

ರಾಜ್ಯ ಸರ್ಕಾರದ ವಿರುದ್ಧ ಧಾರವಾಡದಲ್ಲಿ ಅನ್ನದಾತರ ಅಸಮಾಧಾನ: ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ

Dharwad News: ಧಾರವಾಡ: ಬ್ಯಾಂಕ್ ಅಧಿಕಾರಿಗಳ ಕಿರುಕುಳದಿಂದ ಮಹದೇವಪ್ಪ ಜಾವೂರ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಸಾಲಾ ಮನ್ನಾ ಸೇರಿ ಕುಟುಂಬಕ್ಕೆ ಹಾಗೂ ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಅಗ್ರಹಿಸಿ, ಧಾರವಾಡದಲ್ಲಿ ರೈತರು ಬೀದಿಗೆ ಇಳಿದು ಪ್ರತಿಭಟನಾ ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು...

ಕಿಯೋನಿಕ್ಸ್ ಎಂಡಿಗೆ ಕಡ್ಡಾಯ ರಜೆ: ಯಾರೇ ಇದ್ದರೂ ಕ್ರಮ ಆಗಲಿ ಎಂದ ಸಚಿವ ಮಹಾದೇವಪ್ಪ

Dharwad Political News: ಧಾರವಾಡ: ಕಿಯೋನಿಕ್ಸ್ ಎಂಡಿಯನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹಾದೇವಪ್ಪ ಅವರು ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಕಿಯೋನಿಕ್ಸ್ ಭ್ರಷ್ಟಾಚಾರದ ಬಗ್ಗೆ ನನಗೆ ಗೊತ್ತಿಲ್ಲ. ಅವರು ಕಮೀಷನ್ ಕೇಳಿರುವ ವಿಚಾರ ನನಗೆ ಗೊತ್ತಿಲ್ಲ. ಈ ಬಗ್ಗೆ ಗುತ್ತಿಗೆದಾರರು ದೂರು ಕೊಟ್ಟಿದ್ದಾರೆ. ದೂರಿನ ಆಧಾರದ ಮೇಲೆ...

10 ವರ್ಷದಿಂದ ಮನೆಗಾಗಿ ಅಲೆದಾಡಿದ್ದ ವಿಶೇಷ ಚೇತನ‌ ಮಹಿಳೆ ಬದುಕಿಗೆ ಬಂಗಾರವಾದ ಜನತಾ ದರ್ಶನ

Dharwad News: ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ ನಡೆಸಿದ ಜನತಾ ದರ್ಶನ ಕಾರ್ಯಕ್ರಮ ವಿಶೇಷ ಚೇತನ ಮಹಿಳೆ ಪಾಲಿಗೆ ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಬಂಗಾರವಾಗಿದೆ. 2 ಕಾಲಿಲ್ಲದೇ ಮಗನನ್ನು ಸಾಕಿ ಸಲುಹುತ್ತಿರುವ, ಬದುಕಿನ ಬಂಡಿ‌ ಸಾಗಿಸಲು ಕಷ್ಟಪಡುತ್ತಿರುವ ಮಹಿಳೆ ಪಾಲಿಗೆ ನೀಜಕ್ಕೂ ನವೆಂಬರ್ 6 ರಂದು ನಡೆದ...

ಕುಸುಗಲ್ ಗಿರಮಿಟ್ ಸವಿದ ಸಚಿವ ಸಂತೋಷ ಲಾಡ್..!

Hubballi Political News: ಹುಬ್ಬಳ್ಳಿ: ಕುಸುಗಲ್ ಗ್ರಾಮಕ್ಕೆ ಬರ ಅಧ್ಯಯನಕ್ಕೆ ಬಂದಿದ್ದ ಸಚಿವ ಸಂತೋಷ ಲಾಡ್ ಹಾಗೂ ಶಾಸಕ ಎನ್‌.ಎಚ್.ಕೋನರೆಡ್ಡಿ ಕುಸುಗಲ್ ಗ್ರಾಮದ ಸ್ಪೆಷಲ್ ಗಿರಮಿಟ್ ಸವಿದಿದ್ದಾರೆ. ಮಳೆಯಿಂದ ಬರ ಪರಿಶೀಲನೆ ಮೊಟಕುಗೊಂಡಿದ್ದು, ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತಿಯಲ್ಲಿ ಗ್ರಾಮಸ್ಥರ ಅಹವಾಲು ಸ್ವೀಕರಿಸುವ ಮುನ್ನ ಇಲ್ಲಿನ ಸ್ಪೆಷಲ್ ಗಿರಮಿಟ್ ಸವಿಯುವ ಮೂಲಕ ಗ್ರಾಮೀಣ ಭಾಗದ ರುಚಿಯನ್ನು...

ಜನತಾ ದರ್ಶನದಲ್ಲಿ ಮನೆಗಾಗಿ ಮೊರೆ ಇಟ್ಟ ವಿಶೇಷ ಚೇತನ ಮಹಿಳೆ: ಇದಕ್ಕೆ ಸಚಿವ ಲಾಡ್ ಹೇಳಿದ್ದೇನು..?

Political News: ಧಾರವಾಡ: ದೇವಸ್ಥಾನ ಕಟ್ಟೆಯೊಂದರ ಮೇಲೆ ತಾನು ವಾಸ ಮಾಡುತ್ತಿದ್ದು, ತನಗೆ ಸೂರು ಒದಗಿಸಬೇಕು ಎಂದು ವಿಶೇಷ ಚೇತನ ಮಹಿಳೆಯೊಬ್ಬರು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ಮೊರೆ ಇಟ್ಟಿದ್ದಾರೆ. ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದ ಶಂಕ್ರಮ್ಮ ಏಣಗಿ ಎಂಬ ವಿಶೇಷ ಚೇತನ ಮಹಿಳೆ, ಧಾರವಾಡದ ಸೃಜನಾ ರಂಗಮಂದಿರದಲ್ಲಿ ನಡೆಯುತ್ತಿದ್ದ ಸಚಿವ...

‘ಸಾರ್ವಜನಿಕರ ನೋವು, ಸಮಸ್ಯೆ ಆಲಿಸಲು ಜನತಾ ದರ್ಶನ ಒಂದು ಪ್ರಮುಖ ಮಾಧ್ಯಮವಾಗಿದೆ’

Dharwad News: ಧಾರವಾಡ : ಸಾರ್ವಜನಿಕರಿಗೆ ಉತ್ತಮ ಆಡಳಿತ ವ್ಯವಸ್ಥೆ ಮತ್ತು ಅವರಲ್ಲಿ ರಾಜ್ಯ ಸರಕಾರದ ಸೌಲಭ್ಯಗಳ ಅರಿವು ಮೂಡಿಸಿ, ಯೋಜನೆಗಳನ್ನು ತಲುಪಿಸಲು ಜನತಾ ದರ್ಶನ ಕಾರ್ಯಕ್ರಮ ಅತ್ಯಂತ ಮಹತ್ವದ ಮಾಧ್ಯಮವಾಗಿದೆ. ಇದರಿಂದ ಸರಕಾರ ಹೆಚ್ಚುಹೆಚ್ಚು ಜನಪರವಾಗಿ ಕೆಲಸ ಮಾಡಲು ಅನುಕೂಲವಾಗುತ್ತಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ...

ಮಗುವಿನೊಂದಿಗೆ ಭಿಕ್ಷೆ ಎತ್ತುತ್ತಿದ್ದ ಮಹಿಳೆಗೆ ನೆರವಿನ ಭರವಸೆ ನೀಡಿದ ಲಾಡ್‌

Dharwad News: ಧಾರವಾಡ: "ಮಗುವಿನೊಂದಿಗೆ ಹೀಗೆ ಬೀದಿಯಲ್ಲಿ ಭಿಕ್ಷೆ ಬೇಡುವುದಕ್ಕಿಂತ ಮನೆಗಳಿಗೆ ಹೋಗಿ ಕೆಲಸ ಮಾಡಬಹುದಲ್ವಾ. ಯಾವ ಮನೆಗೆ ಹೋಗುತ್ತಿಯೋ ಅಲ್ಲೇ ಮಗುವನ್ನು ಬಿಟ್ಟು ನೀನು ಕೆಲಸ ಮಾಡಬಹುದು. ನಾನು ನಿನಗೆ ಸಹಾಯ ಮಾಡುತ್ತೇನೆ. ಆದರೆ ಕೆಲಸ ಸಿಕ್ಕರೆ ಒಳ್ಳೆಯದಾಗುತ್ತೆ" ಹೀಗೆಂದು ಹೊಟ್ಟೆ ಹೊರೆಯಲು ಪುಟ್ಟ ಮಗುವನ್ನು ಬಟ್ಟೆಯಲ್ಲಿ ಸೊಂಟಕ್ಕೆ ಕಟ್ಟಿಕೊಂಡು ಭಿಕ್ಷೆ ಬೇಡುತ್ತಿದ್ದ ಮಹಿಳೆಗೆ...

ಕಾಂಗ್ರೆಸ್ ಸೇರ್ಪಡೆ ನಿಶ್ಚಿತ ಎಂದ ಚಿಕ್ಕನಗೌಡ್ರ: ತಮ್ಮ ರಾಜಕೀಯಕ್ಕೆ ಪ್ರಹ್ಲಾದ ಜೋಶಿ ಅಡ್ಡಗಾಲು ಎಂದು ಆರೋಪ

Dharwad Political News: ಕಲಘಟಗಿ: ಕುಂದಗೋಳ ಕಲಘಟಗಿ ಮತಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ ತಾವು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವುದು ನಿಶ್ಚಿತ ಎಂದು ಹೇಳಿದರು. ಇಂದಿಲ್ಲಿ ಕರ್ನಾಟಕ ಟಿವಿ ಜೊತೆ ಮಾತನಾಡಿದ ಅವರು, ಈ ಕುರಿತು ಕ್ಷೇತ್ರದ ಜನತೆಗೆ ಕಾರ್ಯಕರ್ತರ ಸಲಹೆ ಸೂಚನೆ ಅಭಿಪ್ರಾಯಗಳನ್ನು ಪಡೆದುಕೊಂಡಿದ್ದು ನಮ್ಮೊಂದಿಗೆ ಬಹುತೇಕ ಬಿಜೆಪಿ ಪ್ರಮುಖ ಮುಖಂಡರು ಕಾರ್ಯಕರ್ತರು...

ಚಿರತೆಗಳ ಗುಂಪಿನ ದಾಳಿಗೆ ಎತ್ತು ಬಲಿ: ಕಲಘಟಗಿ ರೈತರಲ್ಲಿ ಮನೆ ಮಾಡಿದ ಆತಂಕ

Dharwad News: ಕಲಘಟಗಿ ತಾಲೂಕಿನಲ್ಲಿ ಕಾಡು ಪ್ರಾಣಿಗಳ ಹಾವಳಿ ಜೋರಾಗಿದೆ. ಕಲಘಟಗಿ‌ ತಾಲೂಕಿನ ಹಟಕಿನಾಳ ಗ್ರಾಮದಲ್ಲಿ, ಚಿರತೆಗಳ ಗುಂಪಿನ ದಾಳಿಗೆ ಎತ್ತು ಬಲಿಯಾಗಿರುವ ಘಟನೆ ನಡೆದಿದೆ. ಗ್ರಾಮದ ಮಲ್ಲಯ್ಯ ಶರಣಯ್ಯ ಗೋಡಿಮನಿ ಎಂಬುವವರಿಗೆ ಸೇರಿದ ಎತ್ತು  ಇದಾಗಿದೆ.‌ ರಾತ್ರಿ ಹೊಲದ ಮನೆಯಲ್ಲಿ ಎರಡು ಎತ್ತುಗಳನ್ನ ಕಟ್ಟಿ ಹಾಕಲಾಗಿತ್ತು. ಎರಡು ಎತ್ತುಗಳಲ್ಲಿ ಒಂದು ಕಾಣೆಯಾಗಿತ್ತು. ಬೆಳಗ್ಗೆ ತಾನಾಗಿಯೇ...

ರಾಜ್ಯದಲ್ಲಿ PSI ನೇಮಕಾತಿ ಹಗರಣದ ಬೆನ್ನಲ್ಲಿಯೇ KPSC ಮತ್ತೊಂದು ಎಡವಟ್ಟು

Dharwad News: ಧಾರವಾಡ: ರಾಜ್ಯದಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಬಯಲಾದ ಬೆನ್ನಲ್ಲಿಯೇ ಕೆಪಿಎಸ್ಸಿ ಯಿಂದ ನಡೆಸಲಾಗಿದ್ದ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆಯಲ್ಲಿಯೂ ಅಕ್ರಮ ಆಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು. 2015ನೇ ಸಾಲಿನ 428 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ, 2019ರ ಡಿಸೆಂಬರ್ 12ರಂದು ಮತ್ತು ಅಂತಿಮ ಪಟ್ಟಿಯನ್ನು 2020ರ...
- Advertisement -spot_img

Latest News

ಮಾಜಿ ಸಂಸದ ಪ್ರತಾಪ್ ಸಿಂಹರ ‘ಕಟ್’ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸೂರ್ಜೇವಾಲಾ

Political News: ನಿನ್ನೆ ಬಾಗಲಕೋಟೆಯಲ್ಲಿ ಬಿಜೆಪಿ ಪ್ರಚಾರದ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಹ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವಾಗ್ದಾಳಿ ಬಗ್ಗೆ...
- Advertisement -spot_img