ಧರ್ಮಸ್ಥಳದ ಬಗ್ಗೆ ವಿಧಾನಸಭೆಯಲ್ಲಿ ಗುರುವಾರ ಮಹತ್ವದ ಚರ್ಚೆಯಾಗಿದೆ. ಗದ್ದಲ ಜೋರಾಗಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಟ್ಟಿಯಾಗಿ ತಮ್ಮ ನಿಲುವು ಸ್ಪಷ್ಟಪಡಿಸಿದರು. My stand on ಧರ್ಮಸ್ಥಳ, My Believe is ಮಂಜುನಾಥ! ಹೀಗೆ ವಿಧಾನಸಭೆಯಲ್ಲಿ ಧರ್ಮಸ್ಥಳದ ಪರವಾಗಿ ಗಟ್ಟಿ ಧ್ವನಿಯಲ್ಲಿ ಘೋಷಿಸಿದ್ದಾರೆ.
ವಿಧಾನಸಭೆಯ ಕಲಾಪದ ವೇಳೆ ನಿಯಮ 69ರಡಿ ಧರ್ಮಸ್ಥಳ ಸಂಬಂಧಿತ ಚರ್ಚೆ ನಡೀತು. ಈ...
ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತ ಸಾಕಷ್ಟು ಚರ್ಚೆಯಾಗಿತ್ತು. ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಅಮಾನತುಗೊಂಡಿದ್ದ ನಾಲ್ವರು ಪೊಲೀಸ್ ಅಧಿಕಾರಿಗಳ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ಇದೀಗ 52 ದಿನಗಳ ಬಳಿಕ ವಾಪಸ್ ಪಡೆದಿದೆ. ತನಿಖಾ ವರದಿಯ ನಂತರ ಈ ತೀರ್ಮಾನ ಕೈಗೊಳ್ಳಲಾಗಿದೆ.
ಕಾಲ್ತುಳಿತ ಪ್ರಕರಣದ ತನಿಖೆ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ನೇತೃತ್ವದ...
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ತಮ್ಮ ಎಕ್ಸ್ ಖಾತೆಯಲ್ಲಿ ಮಾಡಿದ ಒಂದು ಪೋಸ್ಟ್ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ನಿಖಿಲ್ ಕುಮಾರಸ್ವಾಮಿ 'ಕರ್ನಾಟಕ ಅಸಲಿ ಮುಖ್ಯಮಂತ್ರಿ ನೋಡಲು ಸ್ಕ್ಯಾನ್ ಮಾಡಿ' ಎಂಬ ಟೀಕಾತ್ಮಕ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ನಲ್ಲಿ ಅವರು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ, ಫೇಸ್ಬುಕ್...
ತುಮಕೂರು ಜಿಲ್ಲೆಯ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಬಹು ನಿರೀಕ್ಷಿತವಾದ, ಅಲಂಕಾರಿಕ ಜಲಚರ ಪ್ರಪಂಚವನ್ನು ಪರಿಚಯಿಸುವ ನವೀಕೃತ ಜಿಲ್ಲಾ ಮತ್ಸ್ಯಾಲಯ ಇದೀಗ ಲೋಕಾರ್ಪಣೆಯಾಗಿದ್ದು, ಜನರ ಕಣ್ಗಳನ್ನು ಸೆಳೆಯುತ್ತಿದೆ.
ಸೋಮವಾರದಂದು ತುಮಕೂರು ಮಹಾತ್ಮ ಗಾಂಧಿ ಕ್ರೀಡಾಂಗಣದ ಹತ್ತಿರ ನಿರ್ಮಿಸಲಾದ ಈ ಮತ್ಸ್ಯಾಲಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಲೋಕಾರ್ಪಣೆ ಮಾಡಿದರು.
ಈ...
ಯಮನ ಪಾಶ, ಯೆಮೆನ್ ಗಲ್ಲು ಶಿಕ್ಷೆಯಿಂದ ಪಾರಾಗೋದು ಅಷ್ಟು ಸುಲಭವಲ್ಲ. ಜುಲೈ 16ರಂದು ಯೆಮೆನ್ನಲ್ಲಿ ನಿಗದಿಯಾಗಿದ್ದ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ. ನಿಮಿಷಾ ಪ್ರಿಯಾ, ಕೇರಳದ ನರ್ಸ್. 2017ರಲ್ಲಿ ಯೆಮೆನ್ನಲ್ಲಿರುವ ತಮ್ಮ ವ್ಯವಹಾರ ಪಾಲುದಾರ ತಲಾಲ್ ಅಯ್ಯೋ ಮಹಿ ಅವರನ್ನು ಕೊಂದಿದ್ದಾರೆ ಎನ್ನಲಾದ ಆರೋಪ...
ಭಾರತದ ಗಗನಯಾತ್ರಿ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು, ಬಾಹ್ಯಾಕಾಶಕ್ಕೆ ಪ್ರಯಾಣಿಸಿ, ಭೂಮಿಗೆ ವಾಪಸ್ಸಾಗಿದ್ದಾರೆ. ಇವರು ಭಾಗವಹಿಸಿದ್ದ ಆಕ್ಸಿಯಮ್-4 ಮಿಷನ್ ಇದೀಗ ಯಶಸ್ವಿಯಾಗಿ ಭೂಮಿಗೆ ಮರಳಿದ್ದು, ಡ್ರ್ಯಾಗನ್ ಕ್ಯಾಪ್ಸೂಲ್ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ ಡಿಯಾಗೋ ಕರಾವಳಿಯಲ್ಲಿ ಸುರಕ್ಷಿತವಾಗಿ ಇಳಿದಿದೆ.
ಎಲ್ಲಾ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದ್ದು, ವೈದ್ಯಕೀಯ ಪರೀಕ್ಷೆಗಳು ಕೂಡಾ ನಡೆಸಲಾಗಿದೆ. ಇದು ಭಾರತದ ಬಾಹ್ಯಾಕಾಶ...
ಪತ್ನಿಯಿಂದ ದೂರವಾದ ಖುಷಿಯಲ್ಲಿ 40 ಲೀಟರ್ ಹಾಲಿನಿಂದ ಸ್ನಾನ ಮಾಡಿದ್ದಾನೆ ಈ ವ್ಯಕ್ತಿ. ಹೌದು ಈ ಅಪರೂಪದ ಘಟನೆ ನಡೆದಿದ್ದು ಅಸ್ಸಾಂನಲ್ಲಿ. ಈತನ ಹೆಸರು ಮಾಣಿಕ್ ಅಲಿ. ಈತ ತನ್ನ ಹೆಂಡತಿಯಿಂದ ವಿಚ್ಛೇದನೆ ಮಾಡಿಕೊಂಡ ಕೂಡಲೇ, ತನ್ನ ಫ್ರೀಡಮ್ಗೆ ಸಂಭ್ರಮ ವ್ಯಕ್ತಪಡಿಸೋಕೆ ಬಕೆಟ್ಗಟ್ಟಲೆ ಹಾಲನ್ನು ತನ್ನ ಮೈಮೇಲೆ ಸುರಿದುಕೊಂಡಿದ್ದಾನೆ!
ಈ ಘಟನೆ ಅಸ್ಸಾಂ ರಾಜ್ಯದ ಗ್ರಾಮಾಂತರ...
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ, ವೈದ್ಯನನ್ನು ಅಪಹರಿಸಿ, ಇಬ್ಬರು ಮಕ್ಕಳ ತಂದೆಯನ್ನು ಕರುಣೆ ಇಲ್ಲದೆ ಹಲ್ಲೆ ಮಾಡಿರುವುದು ಇಡೀ ಜಿಲ್ಲೆಯಲ್ಲೇ ಬೇಸರ ಹುಟ್ಟಿಸಿದೆ. ಹಣಕಾಸಿನ ವಿವಾದವೇ ಈ ಅಮಾನವೀಯ ಕ್ರೌರ್ಯಕ್ಕೆ ಕಾರಣವೆಂದು ಶಂಕೆ ವ್ಯಕ್ತವಾಗುತ್ತಿದೆ. ಈ ವೇಳೆ ಪೊಲೀಸ್ ಇಲಾಖೆಯ ನಿರ್ಲಕ್ಷ್ಯವೂ ಬಹಿರಂಗವಾಗಿದ್ದು, ಜನತೆ ಆಕ್ರೋಶದಲ್ಲಿದ್ದಾರೆ.
ಜುಲೈ 10, ಮಧ್ಯಾಹ್ನ. ಅಥಣಿ ತಾಲೂಕಿನ ಸವದಿ ಗ್ರಾಮದ ಸರ್ಕಾರಿ...
ಮದುವೆಯಾದ 15 ದಿನಕ್ಕೆ ಯುವತಿಯೊಬ್ಬಳು ಪ್ರಿಯತಮನಿಗಾಗಿ ಗಂಡನನ್ನು ಬಿಟ್ಟು ಆಂಧ್ರದಿಂದ ಕರ್ನಾಟಕದ ಕೊಪ್ಪಳಕ್ಕೆ ಬಂದಿದ್ದಾಳೆ. ಕೊಪ್ಪಳದ ವೆಂಕಟೇಶ್ ಎಂಬ ಯುವಕ, ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಗಾರೆ ಕೆಲಸಕ್ಕೆ ಹೋಗಿದ್ದ. ಅಲ್ಲಿ ಆಂಧ್ರ ಮೂಲದ ಲೇಬರ್ ಕಾಂಟ್ರ್ಯಾಕ್ಟರ್ ಜೊತೆ ಕೆಲಸ ಮಾಡುತ್ತಿದ್ದ. ಅದೇ ಸಂದರ್ಭದಲ್ಲಿ ಅವರ ಮಗಳು ತಿರುಪತೆಮ್ಮ ಜೊತೆ ಪ್ರೀತಿ ಪ್ರೇಮ ಶುರುವಾಯ್ತು.
ಮನೆಯಲ್ಲಿ...
ಫೋಟೊಶೂಟ್ ನೆಪದಲ್ಲಿ, ಪತ್ನಿಯೊಬ್ಬಳು ತನ್ನ ಪತಿಯನ್ನು ನದಿಗೆ ತಳ್ಳಿದ ರಾಯಚೂರಿನ ಘಟನೆ ಎಲ್ಲರು ಶಾಕ್ ಆಗುವಂತೆ ಮಾಡಿದೆ. ಮಹಿಳೆಯೊಬ್ಬರು ತನ್ನ ಪತಿಯನ್ನು "ಫೋಟೊಶೂಟ್" ನೆಪದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ಗೆ ಬಳಿ ಕರೆದುಕೊಂಡು ಹೋಗಿ, ಮೊದಲಿಗೆ ತಾವು ಫೋಟೋ ತೆಗೆಸಿಕೊಂಡು, ನಂತರ ಪತಿಗೆ ಸೇತುವೆಯ ತುದಿಗೆ ಹೋಗಲು ಹೇಳುತ್ತಾರೆ. ಆತನು ಎಚ್ಚರಿಕೆಯಿಂದ ಅಂಚಿಗೆ ಹೋಗುತ್ತಿದ್ದಂತೆ, ಆಕೆ...