Friday, December 5, 2025

sooraj revanna

‘ಬೆಂಗಳೂರು ಓಡಿಸ್ತೀನಿ, ಊರು ಬಿಡಿಸುತ್ತೀನಿ ಅಂದವರಿಗೆ ಚುನಾವಣೆ ಫಲಿತಾಂಶ ಬರಲಿದೆ’

ಹಾಸನ: ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಾಯಕರು ಹಾಗೂ ಇಡೀ ಕುಟುಂಬವೇ ಬಂದು ನನ್ನ ಮೇಲೆ ಸವಾರಿ ಮಾಡಿದ್ರು ಕೂಡ ಹಾಸನ ಜನತೆ ನನಗೆ ಆಶೀರ್ವದಿಸಿದ್ದಾರೆ ಎಂದು ಚುನಾವಣೆ ಮುಗಿದ ನಂತರ ಹಾಸನ ಶಾಸಕ, ಪ್ರೀತಂ ಗೌಡ ತಮ್ಮ ಮಾತುಗಳನ್ನು ಮಾಧ್ಯಮದ ಮುಂದೆ ಹೇಳಿಕೊಂಡರು. ತಮ್ಮ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನನ್ನವಧಿಯಲ್ಲಿ ಸಾಧ್ಯವಾದಷ್ಟು ಅಭಿವೃದ್ಧಿ ಕೆಲಸ...

‘ಅತಂತ್ರ ಬರುವ ಪ್ರಶ್ನೆ ನಮ್ಮ‌ ಮುಂದೆ ಇಲ್ಲ, ಜೆಡಿಎಸ್ ಅಭ್ಯರ್ಥಿಗಳೇ ಗೆಲ್ಲುವುದು’

ಮಂಡ್ಯ: ಮಂಡ್ಯದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಸುದ್ದಿಗೋಷ್ಠಿ ನಡೆಸಿದ್ದು, ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿಯೂ ಹಲವು ಸಮೀಕ್ಷೆಗಳು ಜೆಡಿಎಸ್‌ ಲೆಕ್ಕಕ್ಕೆ ಇಲ್ಲ ಎಂದು ಹೇಳ್ತಾ ಇದ್ದವು. ಕುಮಾರಸ್ವಾಮಿ ಅವರ ಪಂಚರತ್ನ ಪ್ರವಾಸ ನಮಗೆ ಶಕ್ತಿ ನೀಡಿದೆ. ದೇವೇಗೌಡರು ಚುನಾವಣೆ ಪ್ರಚಾರ ಮಾಡಿರುವುದು ನಮಗೆ ಬಲ ತಂದಿದೆ....

‘ಉಚಿತವಾಗಿ ಬಜೆಟ್ ಸಿಕ್ಕರೆ ಯಾರು ಬೇಕಾದ್ರು ಉಚಿತವಾಗಿ ನೀಡ್ತಾರೆ’

ಮಂಡ್ಯ: ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ, ಸಂಸದೆ ಸುಮಲತಾ ಅಂಬರೀಷ್, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಇಂಪ್ಲಿಮೆಂಟ್ ಮಾಡೋದು ಅಸಾಧ್ಯ. ಉಚಿತವಾಗಿ ಬಜೆಟ್ ಸಿಕ್ಕರೆ ಯಾರು ಬೇಕಾದ್ರು ಉಚಿತವಾಗಿ ನೀಡ್ತಾರೆ ಎಂದು ಸುಮಲತಾ ವ್ಯಂಗ್ಯವಾಡಿದ್ದಾರೆ. ಅಭಿವೃದ್ಧಿಯೇ ನನ್ನ ಮಂತ್ರ ಅಂತ ನಂಬಿ ಮಾಡ್ತಿರುವವರು ನರೇಂದ್ರ ಮೋದಿ. ದಿನ ಪೂರ್ತಿ ಕೆಲಸ ಮಾಡುವಂತಹ ದೊಡ್ಡ ವ್ಯಕ್ತಿ....

ನನ್ನ ಪತಿ ಯಾವತ್ತೂ ಹಣದಿಂದ ಚುನಾವಣೆ ಮಾಡಿರಲಿಲ್ಲ: ಸ್ವರೂಪ್ ತಾಯಿ ಲಲಿತಮ್ಮ ಸುದ್ದಿಗೋಷ್ಠಿ

ಹಾಸನ : ಹಾಸನ ಜೆಡಿಎಸ್ ಅಭ್ಯರ್ಥಿ ಎಚ್.ಪಿ.ಸ್ವರೂಪ್ ತಾಯಿ ಲಲಿತಮ್ಮ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ್ದು, ಪುತ್ರ ಸ್ವರೂಪ್ ಪರ ಮತಯಾಚಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಲಲಿತಮ್ಮ ಕಣ್ಣೀರಿಟ್ಟಿದ್ದು, ನನ್ನ ಪತಿ ನಾಲ್ಕು ಬಾರಿ ಶಾಸಕರಾಗಿದ್ದರು. ಅವರು ಯಾವತ್ತು ಹಣದಿಂದ ಚುನಾವಣೆ ಮಾಡಲಿಲ್ಲ. ಶಾಸಕರಾಗಿದ್ದಾಗಲೂ ಸಾಕಷ್ಟು ಜನರ ಸೇವೆ, ಅಭಿವೃದ್ಧಿ ಮಾಡಿದ್ದಾರೆ. ಸರಳ, ಸಜ್ಜನಿಕೆಯಿಂದ ನಡೆದುಕೊಂಡಿದ್ದಾರೆ. ಅವರ ಹಾದಿಯಲ್ಲಿಯೇ ಸ್ವರೂಪ್...

‘ಹೆಚ್ಡಿಕೆ ಪೂರ್ಣ 5 ವರ್ಷ ಸಿಎಂ ಆಗಿರ್ತಾರೆ, ಅವರ ಜೊತೆ ನಾ ಇರುತ್ತೇನೆ, ‘

ಹಾಸನ: ಹಾಸನದಲ್ಲಿ ಸಕಲೇಶಪುರ ಕ್ಷೇತ್ರದ ಚುನಾವಣಾ ಕಣ ರಂಗೇರಿದ್ದು, ಜೆಡಿಎಸ್ ಅಭ್ಯರ್ಥಿ ಹೆಚ್. ಕೆ. ಕುಮಾರಸ್ವಾಮಿ ಪರ ನಾರ್ವೆ ಸೋಮಶೇಖರ್ ಪ್ರಚಾರ ಆರಂಭಿಸಿದ್ದಾರೆ. ಪ್ರಚಾರ ವೇಳೆ  ಮಾಜಿ ಜಿ.ಪಂ.ಸದಸ್ಯೆ ಚಂಚಲಾ ಕುಮಾರಸ್ವಾಮಿ, ನಟಿ ದಾಮಿನಿ ಕೂಡ ಸಾಥ್ ಕೊಟ್ಟಿದ್ದಾರೆ. ಸಕಲೇಶಪುರ ಕ್ಷೇತ್ರದ ಗೊರೂರಿನಲ್ಲಿ ಬೈಕ್ ರ್ಯಾಲಿ ನಡೆದಿದ್ದು, ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳ ಜೊತೆ ಬೈಕ್ ರ್ಯಾಲಿ...

ಪ್ರಧಾನಮಂತ್ರಿಗೇ ಬಿಜೆಪಿಯವರು ಬೀದಿಗೆ ಇಳ್ಸಿದ್ದಾರೆ : ಪ್ರಧಾನಿ ರೋಡ್‌ಶೋ ಬಗ್ಗೆ ರೇವಣ್ಣ ವ್ಯಂಗ್ಯ

ಹಾಸನ : ಹಾಸನದ ಮಾಧ್ಯಮ ಸುದ್ದಿಗೋಷ್ಠಿ ಕರೆದು ಮಾತನಾಡಿದ ರೇವಣ್ಣ, ಪ್ರಧಾನಮಂತ್ರಿ ನರೇಂದ್ರಮೋದಿ ರೋಡ್ ಶೋ ಬಗ್ಗೆ ವ್ಯಂಗ್ಯವಾಡಿದ್ದಾರೆ. ಈ ದೇಶದ ಪ್ರಧಾನಮಂತ್ರಿಗಳೇ ಯಾವ ಮಾರ್ಕೆಟ್ ಬಿಡುತ್ತಿಲ್ಲ. ಯಾವ್ಯಾವ ಪದಾರ್ಥ ಎಷ್ಟೆಷ್ಟು ಬೆಲೆ ಇದೆ ಅಂತ ತಿಳ್ಕಳಕೆ ಅಂತ ರೋಡ್ ಶೋ ಮಾಡ್ತವ್ರೆ. ಪ್ರಧಾನಮಂತ್ರಿಗೇ ಬಿಜೆಪಿಯವರು ಬೀದಿಗೆ ಇಳ್ಸಿದ್ದಾರೆ. ಇನ್ನೊಂದು ಕಡೆ ಕಾಂಗ್ರೆಸ್ ಘಟಾನುಘಟಿ ನಾಯಕರುಗಳು...

‘ಈ ಕಡೆ ಬಿಜೆಪಿಯವರು ಒಂದು ಓಟಿಗೆ ಮೂರು ಸಾವಿರ ರೂಪಾಯಿ ಕೊಡ್ತಾವ್ರೆ’

ಹಾಸನ : ಹಾಸನದಲ್ಲಿ ಮಾಜಿಸಚಿವ ಎಚ್.ಡಿ.ರೇವಣ್ಣ ಮಾತನಾಡಿದ್ದು, ಹಾಸನ ಜಿಲ್ಲೆಯೊಳಗೆ, ಹಾಸನ ವಿಧಾನಸಭಾ ಕ್ಷೇತ್ರ, ಅರಸೀಕೆರೆ, ಬೇಲೂರು ಈ ಕಡೆಯಲ್ಲಿ ಬಿಜೆಪಿಯವರು ಒಂದು ಓಟಿಗೆ ಮೂರು ಸಾವಿರ ರೂಪಾಯಿ ಕೊಡ್ತಾವ್ರೆ ಎಂದು ಆರೋಪಿಸಿದ್ದಾರೆ. ಓಟು ಹಾಕಿ ಮೊಬೈಲ್‌ನಲ್ಲಿ ಫೋಟೋ ಹೊಡೆದುಕೊಂಡು ಬಂದರೆ ಕ್ಯಾಶ್ ಕೊಡೋದು. ಜಿಲ್ಲಾಧಿಕಾರಿಗಳಿಗೆ, ರಾಜ್ಯ ಚುನಾವಣೆ ಅಧಿಕಾರಿಗಳಿಗೆ ಮನವಿ ಮಾಡುತ್ತೇನೆ. ಬೂತ್‌ನ ಒಳಗೆ...

‘ಸ್ವರೂಪ್‌ಗಾಗಿ ಭವಾನಿ ತ್ಯಾಗ ಮಾಡಿದ್ದಾರೆ, ಅವನನ್ನು 3ನೇ ಮಗ ಎಂದಿದ್ದಾರೆ’

ಹಾಸನ : ಹಾಸನದಲ್ಲಿ ಮಾಜಿಸಚಿವ ಎಚ್.ಡಿ‌.ರೇವಣ್ಣ ಮಾತನಾಡಿದ್ದು, ಹಾಸನದಲ್ಲಿ ಜೆಡಿಎಸ್ ಪರ ಉತ್ತಮವಾದ ವಾತಾವರಣ ಇದೆ. ಸ್ವರೂಪ್ ಹತ್ರ ದುಡ್ಡಿಲ್ಲ, ಕಾಸಿಲ್ಲ, ಆತನಿಗೆ ಕಷ್ಟ ಇದೆ. ಸ್ವರೂಪ್ ಸಾಲ ಮಾಡಿಕೊಂಡಿದ್ದಾರೆ. ಜನರೇ ಸ್ವರೂಪ್‌ಗೆ ದುಡ್ಡು ಕೊಡ್ತಾ ಇದ್ದಾರೆ. ಆತನನ್ನು ತೆಗೆಯಲು ಭವಾನಿಯವರೇ ತ್ಯಾಗ ಮಾಡಿದ್ದಾರೆ. ಸ್ವರೂಪ್‌ನನ್ನ ಮೂರನೇ ಮಗ ಅಂದಿದ್ದಾರೆ. ನೂರಕ್ಕೆ ನೂರು ಸ್ವರೂಪ್...

ಓಟು ಕೇಳಲು ಬಂದ ಜೆಡಿಎಸ್ ಅಭ್ಯರ್ಥಿಗೆ ಘೇರಾವ್ ಹಾಕಿದ ಜನರು

ಹಾಸನ: ಬೇಲೂರು: ಜೆಡಿಎಸ್ ಅಭ್ಯರ್ಥಿ ಕೆ.ಎಸ್.ಲಿಂಗೇಶ್ ಪರ ಮತಯಾಚನೆಗೆ ಕಾರ್ಯಕರ್ತರು ಬಂದಾಗ ಪೇಟೇಹಳ್ಳಿ ಗ್ರಾಮಸ್ಥರು ಘೇರಾವ್ ಹಾಕಿದ್ದಾರೆ. ಬೇಲೂರು ತಾಲೂಕು ಮಾದೀಹಳ್ಳಿ ಹೋಬಳಿ ಪೇಟೇಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಳೆದ ಐದು ವರ್ಷಗಳಿಂದ ಗ್ರಾಮಕ್ಕೆ ಬಾರದ ಶಾಸಕರಿಗೆ ಇಂದು ಮತ ಬೇಕೆಂದು ಕೇಳಲು ಬಂದಿದ್ದೀರ ಎಂದು ಗ್ರಾಮದ ಮಹಿಳೆಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಹಾಳಾಗಿದೆ. ಚರಂಡಿಗಳಿಲ್ಲಾ...

ಗಮನಸೆಳೆದ ಬಿ.ವೈ. ವಿಜಯೇಂದ್ರ-ಪ್ರೀತಂಗೌಡ್ರ ಬುಲೆಟ್ ಸವಾರಿ: ಕಾರ್ಯಕರ್ತರ ಜೊತೆ ಶಾಸಕರ ನೃತ್ಯ

ಹಾಸನ: ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರೀತಂ ಜೆ. ಗೌಡರ ಪರ ಚುನಾವಣೆ ಪ್ರಚಾರಕ್ಕಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡು ತಾವೆ ಡಬಲ್ ರೇಡಿಂಗ್ ಚಾಲನೆ ಮಾಡುವುದರ ಮೂಲಕ ಗಮನಸೆಳೆದ್ರೆ. ಕೊನೆಯಲ್ಲಿ ಶಾಸಕ ಪ್ರೀತಂ ಗೌಡ ಅವರು ಮಹಾವೀರ ವೃತ್ತದಲಿ ಕಾರ್ಯಕರ್ತರ ಜೊತೆ ವಾಹನದ ಮೇಲೆ ಹಾಡಿಗೆ ನೃತ್ಯ...
- Advertisement -spot_img

Latest News

ಮೈಸೂರಿಗೆ ಮೆಗಾ ಅಪ್‌ಗ್ರೇಡ್! 4 KSRTC ಹೊಸ ಡಿಪೋ

ಮೈಸೂರಿನ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಕೆಎಸ್‌ಆರ್‌ಟಿಸಿ ನಾಲ್ಕು ಹೊಸ ಬಸ್ ಡಿಪೋಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿದೆ. ‘ಗ್ರೇಟರ್ ಮೈಸೂರು’ ಘೋಷಣೆ ಮತ್ತು ಹೊರವರ್ತುಲ ರಸ್ತೆ ನಿರ್ಮಾಣದ...
- Advertisement -spot_img