Sunday, June 1, 2025

Latest Posts

ಕರ್ನಾಟಕದಲ್ಲಿ ಬಿಜೆಪಿ ಜನರಿಂದ ಆಯ್ಕೆಯಾದ ಸರ್ಕಾರವಲ್ಲ; ಸುರ್ಜೆವಾಲ್

- Advertisement -

www.karnatakatv.net : ರಾಯಚೂರು :  ಮಾಜಿ ಸಿಎಂ ಯಡಿಯೂರಪ್ಪರನ್ನ ಭ್ರಷ್ಟಾಚಾರ ವಿಷಯದಲ್ಲಿ ಜೈಲಿಗೆ ಕಳುಹಿಸುವುದಾಗಿ ಬ್ಲಾಕ್ಮೇಲ್ ಮಾಡಿ ಸಿ ಎಂ ಸ್ಥಾನದಿಂದ‌ ಕೆಳಗಿಳಿಸಲಾಗಿದೆ. ಬಿಜೆಪಿ ಕಲ್ಯಾಣ ಕರ್ನಾಟಕ ಭಾಗದ ವಿರೋಧಿಯಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ಪಕ್ಷದ ಉಸ್ತುವಾರಿ ರಣದೀಪ್ ಸುರ್ಜೆವಾಲ್ ಆರೋಪಿಸಿದರು.

ರಾಯಚೂರಿನಲ್ಲಿ ಆಯೋಜಿಸಲಾಗಿದ್ದ ಕಲ್ಯಾಣ ಕರ್ನಾಟಕ ವಿಭಾಗದ ಕಾಂಗ್ರೆಸ್ ಪ್ರತಿನಿಧಿಗಳ ಸಮಾವೇಶದಲ್ಲಿ ಭಾಗಿಯಾಗಿ ನಂತರ ಮಾಧ್ಯಮಗಳೊಂದಿಗೆ ಸುರ್ಜೆವಾಲ್ ಮಾತನಾಡಿದರು.  ಕರ್ನಾಟಕದಲ್ಲಿ ಬಿಜೆಪಿ ಜನರಿಂದ ಆಯ್ಕೆಯಾದ ಸರ್ಕಾರವಲ್ಲ. ಅಕ್ರಮವಾಗಿ ಶಾಸಕರನ್ನ ಖರೀದಿಸಿ ರಷನೆಯಾಗಿರುವ ಸರ್ಕಾರ‌. ಯಡಿಯೂರಪ್ಪರನ್ನ ಅವಮಾನಗೊಳಿಸಿ‌ ಕೆಳಗಿಳಿಸಲಾಗಿದೆ.. ಪದೇ ಪದೇ ವಿಜಯೇಂದ್ರರನ್ನ ದೆಹಲಿಗೆ ಕರೆಯಿಸಿ ಭ್ರಷ್ಟಾಚಾರ ದಲ್ಲಿ ನಿಮ್ಮ ತಂದೆ ಮತ್ತು ನಿಮ್ಮನ್ನ ಜೈಲಿಗೆ ಕಳುಹಿಸುವುದಾಗಿ ಹೆದರಿಸಿ ಪ್ರದಾನಿ ನರೇಂದ್ರ ಮೋದಿ ಸಿ ಎಂ ಸ್ಥಾನದಿಂದ ಕೆಳಗಿಳಿಸುವ ಮೂಲಕ ಯಡಿಯೂರಪ್ಪಗೆ ಅವಮಾನ ಮಾಡಿದ್ದಾರೆ.

ಬಿಜೆಪಿ ಕಲ್ಯಾಣ ಕರ್ನಾಟಕದ ವಿರೋಧಿಯಾಗಿದೆ. 40 ಶಾಸಕರನ್ನೊಂದಿರುವ ಕ‌ಲ್ಯಾಣ ಕರ್ನಾಟಕ ಭಾಗಕ್ಕೆ ಕೇವಲ ಮೂರು ಜನರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಮೂಲಕ ಪ್ರಗತಿಗೆ ಅಡ್ಡಿಯನ್ನುಂಟು ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ನೀಡಲಾಗಿದ್ದ 1500 ಕೋ ರೂಪಾಯಿಯಲ್ಲಿ ಕೇವಲ ಶೇ 30 ರಷ್ಟು ಮಾತ್ರ ವೆಚ್ಚ ಮಾಡಿ ಇನ್ನುಳಿದ ಶೇ 70 ರಷ್ಟು ಹಣ ಬಿಜೆಪಿಯವರು ಲೂಟಿ ಮಾಡಿದ್ದಾರೆ. ಈ ಭಾಗದ ಪ್ರಮುಖ ಬೆಳೆಯಾದ ತೊಗರಿಯ ರಪ್ತು ನಿಷೇಧಿಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ರೈತರಿಗೆ ಮಾಹಾ ಮೋಸ ಮಾಡಿದ್ದಾರೆ. ಸುಳ್ಳು ಹೇಳುವ, ಭ್ರಮೆಯುನ್ನುಂಟು ಮಾಡುವ ಮತ್ತು ವಂಚನೆ ಮಾಡಿ ಮೋದಿ ಅಧಿಕಾರಕ್ಕೆ ಬಂದಿದ್ದು, ದೇಶದ ಜನರು ನೋವು ಅನುಭವಿಸುವಂತಾಗಿದೆ.

ಅನಿಲ್ ಕುಮಾರ್ ಕರ್ನಾಟಕ ಟಿವಿ ರಾಯಚೂರು

- Advertisement -

Latest Posts

Don't Miss