- Advertisement -
www.karnatakatv.net : ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ರಾತ್ರಿವೇಳೆ ಕಿಡಿಗೇಡಿಗಳ ಪುಂಡಾಟ ಹೆಚ್ಚಾಗಿದ್ದು, ಇಟ್ಟಿಗೆಯಿಂದ ನಿಂತಿದ್ದ ವಾಹನದ ಗ್ಲಾಸ್ ಜಖಂ ಮಾಡಿದ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಖಾಸಗಿ ಹೋಟೆಲ್ ಮುಂದೆ ನಡೆದಿದೆ.
ಹೌದು.. ನಿಂತಿದ್ದ ಟಾಟಾ ಏಸ್ ವಾಹನವನ್ನು ರಾತ್ರಿ ವೇಳೆ ಗ್ಲಾಸ್ ಜಖಂಗೊಳಿಸಿ ಬಂಪರ್ ಕಿತ್ತುಹಾಕಿದ ಕಿಡಿಗೇಡಿಗಳು ದರ್ಪ ಮೆರೆದಿದ್ದಾರೆ. ಇನ್ನೂ ಮಹೇಂದ್ರ ಕಲಾಲ ಎನ್ನುವವರಿಗೆ ಸೇರಿದ ಟಾಟಾ ಏಸ್ ಇದಾಗಿದ್ದು, ಗೋಕುಲ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
ಕರ್ನಾಟಕ ಟಿವಿ ಹುಬ್ಬಳ್ಳಿ
- Advertisement -