Thursday, October 17, 2024

Latest Posts

ವಾಣಿಜ್ಯ ನಗರಿ ಹುಬ್ಬಳ್ಳಿಗೂ ರತನ್ ಟಾಟಾಗೂ ಇದೆ ಅವಿನಾಭಾವ ನಂಟು.

- Advertisement -

Hubli News: ಹುಬ್ಬಳ್ಳಿ: ಟಾಟಾ ಉದ್ದಿಮೆ ಸಾಮ್ರಾಜ್ಯವನ್ನು ವಿಶ್ವ ಮಟ್ಟಕ್ಕೆ ಒಯ್ದಿದ್ದ ಟಾಟಾ ಸಾಮ್ರಾಜ್ಯದ ಸಾಮ್ರಾಟ ರತನ್ ಟಾಟಾ ಅಸ್ತಂಗತವಾಗಿದ್ದಾರೆ. ಆದ್ರೆ ಅವರು ನಡೆದು ಬಂದ ದಾರಿ ಇತರರಿಗೂ ಮಾದರಿಯಾಗಿದ್ದು, ರತನ್ ಟಾಟಾ ಅವರಿಗೂ ವಾಣಿಜ್ಯ ನಗರಿ ಹುಬ್ಬಳ್ಳಿಗೂ ಅವಿನಾಭಾವ ಸಂಬಂಧ ಹೊಂದಿದ್ದರು.

ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ಜನವರಿ 30, 2013 ರಂದು ದೇಶಪಾಂಡೆ ಫೌಂಡೇಶನ್ ‘ಟಿಪ್ಪಿಂಗ್ ಪಾಯಿಂಟ್’ ಎಂಬ ವಿಷಯದೊಂದಿಗೆ ಆಯೋಜಿಸಿದ್ದ ಮೂರು ದಿನಗಳ ‘ಅಭಿವೃದ್ಧಿ ಸಂವಾದ-2013’ ಅಧಿವೇಶನದಲ್ಲಿ ಅವರು ಪಾಲ್ಗೊಂಡಿದ್ದರು.

ಇನ್ಫೋಸಿಸ್‌ನ ನಿವೃತ್ತ ಅಧ್ಯಕ್ಷ ಎನ್‌ಆರ್ ನಾರಾಯಣ ಮೂರ್ತಿ ಅವರೊಂದಿಗೆ ಒಂದು ತಾಸಿಗೂ ಹೆಚ್ಚು ಕಾಲ ಸಂವಾದ ನಡೆಸಿದ್ದರು. ಈ ಸಂದರ್ಭದಲ್ಲಿ ನವೋದ್ಯಮ ಸೇರಿದಂತೆ ಹಲವು ವಿಚಾರಗಳ ಕುರಿತು ಮುಕ್ತ ಮನಸ್ಸಿನಿಂದ ಮಾತನಾಡಿದ್ದರು.

ಇದೇ ಸಂದರ್ಭದಲ್ಲಿ ಹುಬ್ಬಳ್ಳಿ- ಧಾರವಾಡ ಮಧ್ಯದಲ್ಲಿರುವ ರಾಯಪುರದಲ್ಲಿರುವ ಇಸ್ಕಾನ ಕಿಚನ್ ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅಲ್ಲಿನ ಆಹಾರ ತಯಾರಿಕೆ, ಸರಬರಾಜು ರಾಜ್ಯದ ಮೂಲೆ ಮೂಲೆಗೂ ತಲುಪಿಸುವ ಪರಿಯ ಬಗ್ಗೆ ಮಾಹಿತಿ ಪಡೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು.

- Advertisement -

Latest Posts

Don't Miss