Saturday, August 9, 2025

Latest Posts

ಸಂವಿಧಾನ ನಮ್ಮದು.. ರಾಹುಲ್ ಗಾಂಧಿ ವಾರ್ನ್‌!

- Advertisement -

ಲೋಕಸಭೆ ಚುನಾವಣೆಯಲ್ಲಿ ಮಹದೇವಪುರದಲ್ಲಿ, 1 ಲಕ್ಷ ಮತಗಳ್ಳತನ ನಡೆದಿದೆ ಎಂದು, ರಾಹುಲ್ ಗಾಂಧಿ ಗಂಭೀರವಾಗಿ ಆರೋಪಿಸಿದ್ದು, ಈ ಹಿನ್ನಲೆ, ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಮ್ಮ ಮತ ನಮ್ಮ ಹಕ್ಕು, ನಮ್ಮ ಹೋರಾಟ ಧ್ಯೇಯದೊಂದಿಗೆ ಕಾಂಗ್ರೆಸ್ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದ್ದು, ಈ ವೇಳೆ ಚುನಾವಣಾ ಆಯೋಗದ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಸಮಾವೇಶದಲ್ಲಿ ಭಾಷಣ ಆರಂಭಕ್ಕೂ ಮುನ್ನ, ರಾಹುಲ್‌ ಗಾಂಧಿ ಸಂವಿಧಾನದ ಪುಸ್ತಕ ತೋರಿಸುತ್ತಾ ಭಾಷಣ ಆರಂಭಿಸಿದರು. ಪವಿತ್ರವಾದ ಗ್ರಂಥದಲ್ಲಿ ಮಹಾನ್ ನಾಯಕರ ಧ್ವನಿ ಕೇಳಿ ಬರುತ್ತದೆ. ಈ ಗ್ರಂಥದಲ್ಲಿ ಬಸವಣ್ಣ ಅವರ ಧ್ವನಿ ಸಹ ಕೇಳಿ ಬರುತ್ತಿದೆ. ಕಳೆದ ಚುನಾವಣೆಯಲ್ಲಿ ಸಂವಿಧಾನವನ್ನು ನಾವು ರಚನೆ ಮಾಡಿದ್ದೇವೆ. ಅಂಬೇಡ್ಕರ್ ನೆಹರು ಗಾಂಧೀಜಿ ಪಟೇಲ್ ಅವರ ಧ್ವನಿ ಮೊಳಗುತ್ತದೆ ಸಂವಿಧಾನದಲ್ಲಿ ಭಾರತದ ನೂರಾರು ವರ್ಷಗಳ ಇತಿಹಾಸವಿದೆ ಎಂದು ಭಾಷಣ ಆರಂಭಿಸಿದರು.

ಹಿಂದಿನ ಚುನಾವಣೆಯಲ್ಲಿ ನಮ್ಮ ಮುಂದೆ ದೊಡ್ಡ ಪ್ರಶ್ನೆ ಎದುರಾಯಿತು. ಲೋಕ ಸಭೆ ಚುನಾವಣೆಯ ನಂತರ ಮಹಾರಾಷ್ಟ್ರ ಚುನಾವಣೆ ನಡೆಯಿತು. ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಹೆಚ್ಚು ಸ್ಥಾನ ಬಂದಿದೆ ಅದಾದ ನಾಲ್ಕು ತಿಂಗಳಲ್ಲಿ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಇದರ ಹಿಂದಿನ ವಿಷಯವನ್ನು ನಾವು ಪತ್ತೆ ಹಚ್ಚಿದ್ದೇವೆ ಎಂದರು. ವಿಧಾನಸಭೆಯಲ್ಲಿ ಹೊಸ ಮತದಾರರಿಂದ ಮತದಾನ ನಡೆದಿದ್ದು 1 ಕೋಟಿ ಹೊಸ ಮತದಾರರು ಮತದಾನ ಮಾಡಿದ್ದಾರೆ.

ನಮ್ಮ ಒಕ್ಕೂಟದ ಮತ ಕಡಿಮೆ ಆಗಿರಲಿಲ್ಲ ಲೋಕಸಭೆಯಲ್ಲಿ ಸಿಕ್ಕಷ್ಟೇ ಮತ ವಿಧಾನಸಭೆಯಲ್ಲಿ ಸಿಕ್ತು , ಲೋಕಸಭೆ ಚುನಾವಣೆಯಲ್ಲಿ ಹೊಸ ಮತದಾರರ ವೋಟ್ ಹಾಕಿರಲಿಲ್ಲ 1 ಕೋಟಿ ಹೊಸ ಮತದಾರರು ಮತ ಹಾಕಿರಲಿಲ್ಲ ವಿಧಾನಸಭೆಯಲ್ಲಿ ಹೊಸ ಮತದಾರರಿಂದ ಮತದಾನ ನಡೆಸಲಾಗಿದೆ. 1 ಕೋಟಿ ಹೊಸ ಮತದಾನದ ಮತದಾನ ನಡೆಸಲಾಗಿದೆ. ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಟ್ಟೆ ಪರಿಶೀಲನೆ ನಡೆಸಿದ್ದೇವೆ. 6.5 ಲಕ್ಷ ಮತಗಳು ಇತ್ತು ಅದರಲ್ಲಿ 1 ಲಕ್ಷದ 250 ಮತಗಳ್ಳತನ ಆಗಿರುವುದು ಬಯಲಾಗಿದೆ.

ಚುನಾವಣೆ ಆಯೋಗ ಬಿಜೆಪಿ ಪರವಾಗಿ ನಿಂತಿದೆ ಸಂವಿಧಾನ ವಿರುದ್ಧವಾಗಿ ಚುನಾವಣಾ ಆಯೋಗ ನಡೆದುಕೊಳ್ಳುತ್ತಿದೆ. ಒಬ್ಬ ವ್ಯಕ್ತಿಗೆ ಒಂದೇ ಮತ ಚುನಾವಣೆ ಆಯೋಗದ ಅಧಿಕಾರಿಗಳು ಅವರಲ್ಲಿ ಇರುವಂತಹ ಸಿಬ್ಬಂದಿ ವರ್ಗದವರು ಎಲ್ಲರೂ ಕೂಡ ಒಗ್ಗಟ್ಟಾಗಿ ಸೇರಿ ಈ ಸಂವಿಧಾನದ ಮೇಲೆ ಪ್ರಹಾರ ಮಾಡಿದ್ದಾರೆ. ಭಾರತ ದೇಶದ ಬಡ ಜನರ ಮೇಲೆ ಆಕ್ರಮಣ ಮಾಡಿದ್ದಾರೆ.

ನಾನು ಅವರಿಗೆ ಸ್ಪಷ್ಟವಾಗಿ ಹೇಳುತ್ತೇನೆ ನೀವು ಈ ಸಂವಿಧಾನದ ಮೇಲೆ ಪ್ರಹಾರ ಮಾಡಿ ಯಶಸ್ವಿಯಾದರೆ ನೀವು ಮತ್ತೊಮ್ಮೆ ಆಲೋಚನೆ ಮಾಡಬೇಕು.ನಮಗೂ ಸಮಯ ಬರುತ್ತೆ ಅಂದು ನಿಮಗೆ ತಕ್ಕ ಪಾಠ ಕಲಿಸುತ್ತೇವೆ, ಒಬ್ಬೊಬ್ಬರನ್ನ ಹುಡುಕಿ ಪಾಠ ಕಲಿಸುತ್ತೇವೆ. ನೀವು ಈ ಸಂವಿಧಾನದ ಮೇಲೆ ಆಕ್ರಮಣ ಮಾಡಿದರೆ ನಾವು ನಿಮ್ಮ ಮೇಲೆ ಆಕ್ರಮಣ ಮಾಡುತ್ತೇವೆ ಎಂದು ಗುಡುಗಿದರು.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss