ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಪವಿತ್ರಾಗೌಡ ಮೊಬೈಲ್ನಲ್ಲಿದ್ದ ಫೋಟೋಗಳು ವೈರಲ್ ಆಗಿವೆ. ಅದ್ರಲ್ಲೂ ಸ್ವಾಮಿ ಪವಿತ್ರಾಗೆ ಕಳುಹಿಸಿದ್ದ ಪೋಲಿ ಸಂದೇಶಗಳನ್ನು ಒಮ್ಮೆ ನೋಡಿದ್ರೆ, ನೀವು ಕೂಡ ಒಮ್ಮೆ ಶಾಕ್ ಆಗ್ತೀರಾ.. ಈತ ರೇಣುಕಾಸ್ವಾಮಿ ಅಲ್ಲ.. ವಿಕೃತಸ್ವಾಮಿ.
ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಈಗಾಗಲೆ ಪೊಲೀಸರು ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಸಿದ್ದು, ಕೊಲೆ ಪ್ರಕರಣದ ವಿವರಗಳು ಒಂದೊಂದಾಗಿಯೇ ಹೊರಗೆ ಬರುತ್ತಿವೆ. ಪ್ರಮುಖವಾಗಿ ರೇಣುಕಾಸ್ವಾಮಿಯನ್ನು ಅಪಹರಣ ಮಾಡಿದ್ದ ಆರೋಪಿಗಳ ಕುರಿತು ಹಲವು ವಿಚಾರಗಳು ಬಹಿರಂಗವಾಗಿವೆ. ಸುಮಾರು ಒಂದೂವರೆ ಲಕ್ಷ ಬೆಲೆ ಬಾಳುವಂತಹ ಐಫೋನ್ 15 ಪ್ರೋ ಮ್ಯಾಕ್ಸ್ ಮೊಬೈಲ್ ಬಳಕೆ ಮಾಡುತ್ತಿದ್ದ ಪವಿತ್ರಾ ಫೋನಲ್ಲಿ ಕೆಲವು ಫೋಟೋಗಳು ಪತ್ತೆಯಾಗಿವೆ ಎನ್ನಲಾಗಿದೆ. ಪ್ರಕರಣ ಸಂಬಂಧ 65 ಫೋಟೋಗಳು ಸೇವ್ ಆಗಿದ್ದವು ಎನ್ನಲಾಗಿದ್ದು, ರೇಣುಕಾ ಕಳಿಸಿದ್ದ 20 ಅಶ್ಲೀಲ ಸಂದೇಶಗಳ 17 ಸ್ಕ್ರೀನ್ ಶಾಟ್ಗಳು ಇದ್ದವು ಎನ್ನಲಾಗಿದೆ.
ಪವಿತ್ರಾ ಗೌಡ ಫೋನ್ ರಿಟ್ರಿವ್ ಮಾಡಿದಾಗ ರೇಣುಕಾಸ್ವಾಮಿ ವಿಕೃತಿ ಬಯಲಾಗಿದೆ. ನನ್ನ ಜೊತೆ ಲಿವ್ ಇನ್ ರಿಲೇಷನ್ಗೆ ಒಪ್ಪು. ನಿನಗೆ ಪ್ರತಿ ತಿಂಗಳೂ 10 ಸಾವಿರ ಕೊಡುತ್ತೇನೆ. ಪ್ರತಿ ತಿಂಗಳು ಬೆಂಗಳೂರಿಗೆ ಬರುತ್ತೇನೆ. ನಿನ್ನ ಜೊತೆ ನಾನು ಯಾವಾಗ ಸೇರುತ್ತೇನೋ?, ನೀನು ಫೋಟೋದಲ್ಲಿ ನೋಡೋದಕ್ಕೆ ಹೀಗಿದ್ದೀಯಾ.
ಎನ್ನುವಂತ ಪೋಲಿ ಮೆಸೇಜ್ಗಳನ್ನು ನಟ ದರ್ಶನ್ ಗೆಳತಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕಳುಹಿಸಿದ್ದನಂತೆ.. ಚಿತ್ರದುರ್ಗದ ರೇಣುಕಾಸ್ವಾಮಿ ಪವಿತ್ರಾಗೆ ಇನ್ಸ್ಟಾಗ್ರಾಂನಲ್ಲಿ ಮರ್ಮಾಂಗದ ಫೋಟೋ ಮಾತ್ರವಲ್ಲದೆ, ತನ್ನದೇ ನಗ್ನ ವಿಡಿಯೋ ಸಹ ಕಳುಹಿಸುತ್ತಿದ್ದನಂತೆ. ಅಷ್ಟೇ ಅಲ್ಲದೇ, ನಿನ್ನ ಫೋಟೋ ನೋಡಿಕೊಂಡು ನಾನು ಹಸ್ತ ಮೈಥುನ ಮಾಡಿಕೊಂಡೆ ಎಂಬ ಅಶ್ಲೀಲ ಸಂದೇಶಗಳನ್ನು ಆಗಾಗ ರವಾನಿಸುತ್ತಿದ್ದ ಎಂದು ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ನಿನ್ನ ಸೌಂದರ್ಯಕ್ಕೆ ನಾನು ಸೋತು ಹೋಗಿದ್ದೇನೆ. ನಿನ್ನ ಜೊತೆ ನಾನು ಕಾಲ ಕಳೆಯಬೇಕು ಕಣೇ. ನಿನ್ನಷ್ಟು ರೂಪಸಿ ಆರೂ ಇಲ್ಲ ಬಿಡು. ನಿನ್ನ ಫೋಟೋ ನೋಡಿಕೊಂಡೇ ನಾನು ಹಸ್ತ ಮೈಥುನ ಮಾಡಿಕೊಂಡೆ ಕಣೇ, ನೀನು ನೋಡುತ್ತೀಯಾ? ಎಂದು ಹೇಳಿಕೆ ರೇಣುಸ್ವಾಮಿ ತನ್ನ ಮರ್ಮಾಂಗ ಫೋಟೋ ಮತ್ತು ವಿಡಿಯೋವನ್ನು ಪವಿತ್ರಾಗೌಡಗೆ ಕಳುಹಿಸಿದ್ದಾನೆ.
ರೇಣುಕಾಸ್ವಾಮಿ ಹತ್ಯೆ ಬಳಿಕ ಆತ ಕಳುಹಿಸಿದ್ದ ಅಶ್ಲೀಲ ಮೆಸೇಜ್ಗಳನ್ನು ಪವಿತ್ರಾ ಡಿಲೀಟ್ ಮಾಡಿದ್ದಳು. ಆದ್ರೆ, ಮೊಬೈಲ್ ರಿಟ್ರೀವ್ ಮೂಲಕ ರೇಣುಕಾಸ್ವಾಮಿ ಸಂದೇಶಗಳ 17 ಸ್ಕ್ರೀನ್ ಶಾಟ್ಗಳು ಮತ್ತು ವಿಡಿಯೋಗಳು ಪೊಲೀಸರು ಸಂಗ್ರಹಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ರೇಣುಕಾಸ್ವಾಮಿ ಗೌತಮ್ ಹೆಸರಿನ ಇನ್ಸ್ಟಾಗ್ರಾಂ ಖಾತೆಯಿಂದ ಪವಿತ್ರಾಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ. ಇದ್ರಿಂದ ರೋಸಿ ಹೋಗಿದ್ದ ಪವಿತ್ರಾ, ಸ್ವಾಮಿ ಒಂದು ಗತಿ ಕಾಣಿಸಬೇಕೆಂದು ಡಿಸೈಡ್ ಮಾಡಿದ್ಳು. ಆ ಅಶ್ಲೀಲ ಸಂದೇಶಗಳ ಸಂಗತಿಯನ್ನು ದರ್ಶನ್, ಪವನ್ ಹಾಗೂ ವಿನಯ್ಗೆ ಹೇಳಿದ್ದಳು. ಕೊನೆಯ ಸ್ವಾಮಿಯನ್ನು ಚಿತ್ರದುರ್ಗದಿಂದ ಕಾರಿನಲ್ಲಿ ಕಿಡ್ನಾಪ್ ಮಾಡಿ, ಬೆಂಗಳೂರಿನ ಪಟ್ಟಣಗೆರೆ ಶೆಡ್ಗೆ ಕರೆತಲಾಗಿತ್ತು.