Political News: ಬೆಂಗಳೂರಿನಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದ್ದು, ಮಾಜಿ ಸಿಎಂ ಯಡಿಯೂರಪ್ಪ ಬಂಧಿಸದಂತೆ ಕೋರ್ಟ್ ಸೂಚನೆ ವಿಚಾರದ ಬಗ್ಗೆ ಹೇಳಿಕೆ ನೀಡಿದ್ದಾರೆ.
ಒಬ್ಬ ಹೆಣ್ಣು ಮಗಳು ಬೇರೆ ಬೇರೆ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ನಮ್ಮ ಮನೆಗೆ ಬಂದಿದ್ದರು. ಆದರೆ ದುರದ್ದೇಶದಿಂದ ಆ ಮಹಿಳೆ ದೂರು ಕೊಟ್ಟು ಮುಜುಗರ ಮಾಡಿದ್ದಾರೆ. ಇದರಿಂದ ನಮ್ಮ ಇಡೀ ಕುಟುಂಬಕ್ಕೆ ಹಾಗೂ ಕಾರ್ಯಕರ್ತರಿಗೆ ಬಹಳ ನೋವುಂಟಾಗಿದೆ. ನ್ಯಾಯಾಲಯದ ಮೇಲೆ ನಮಗೆ ವಿಶ್ವಾಸ ಇದೆ. ಜಾಮೀನು ರೀತಿಯಲ್ಲಿ ನಮಗೆ ಅವಕಾಶ ಸಿಕ್ಕಿದೆ. ಸತ್ಯವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಕೆಲಸವನ್ನು ವಕೀಲರು ಮಾಡುತ್ತಾರೆ. ಸುಳ್ಳು ಆರೋಪದ ಮೂಲಕ ರಾಜಕೀಯವಾಗಿ ಮಣಿಸುವಂತಹ ಪ್ರಕರಣಗಳು ನಮ್ಮ ಮೇಲೆ ಬಹಳಷ್ಟು ನಡೆದಿವೆ. ಅವಾಗೆಲ್ಲಾ ನಮಗೆ ನ್ಯಾಯಾಲಯದಿಂದ ನ್ಯಾಯ ಸಿಕ್ಕಿದೆ.
ಈ ಸುಳ್ಳು ಆರೋಪದಿಂದ ನಮ್ಮ ತಂದೆಯವರು ಮುಕ್ತರಾಗುತ್ತಾರೆ. ಯಡಿಯೂರಪ್ಪ ಜೀವನ ಪೂರ್ತಿ ಹೋರಾಟದ ಮೂಲಕ ಈ ನಾಡಿಗೆ ನ್ಯಾಯ ಕೊಟ್ಟವರು. ದಕ್ಷಿಣ ಭಾರತದದಲ್ಲಿ ಬಿಜೆಪಿ ಭದ್ರಕೋಟೆಯಾಗಿ ಕರ್ನಾಟಕ ಇದೆ. ಹೀಗಾಗಿ ಇವರ ವಿರುದ್ಧ ಕಾಣದ ಕೈಗಳು ಈ ರೀತಿ ಮಾಡಿದ್ದಾರೆ. ನ್ಯಾಯಾಲಯ ನಮಗೆ ರಕ್ಷಣೆ ಕೊಟ್ಟಿದೆ. ಮುಂದೆ ನ್ಯಾಯಾಲಯಕ್ಕೂ ನಾವು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತೇವೆ. ಯಡಿಯೂರಪ್ಪ ಕೂಡಾ ಇಂದು ಮನೆಗೆ ಬರುತ್ತಿದ್ದಾರೆ ಎಂದು ರಾಘವೇಂದ್ರ ಹೇಳಿದ್ದಾರೆ.